ಬುಧವಾರ, ಮಾರ್ಚ್ 31, 2021

ಪಂಚಾಯಿತಿ ಚುನಾವಣೆ :ಮತ ಎಣಿಕೆ ಪೂರ್ಣ :ವಿಜಯೋತ್ಸವ


 ಚಿಕ್ಕಮಗಳೂರು :ಜಿಲ್ಲೆಯಲ್ಲಿ 32 ಗ್ರಾಮ ಪಂಚಾಯಿತಿಗಳ 257  ಸ್ಥಾನಗಳಿಗೆ ನಡೆದ  ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಪೂರ್ಣಗೊಂಡಿತು .

ಒಟ್ಟು 663 ಅಭ್ಯರ್ಥಿಗಳು  ಕಣದಲ್ಲಿ ಇದ್ದು ಬೆಳಿಗ್ಗೆ ೮ ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು .

ಚಿಕ್ಕಮಗಳೂರು ಸೇರಿದಂತೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಭರದಿಂದ ಸಾಗಿದ್ದು ಸಿಬ್ಬಂದಿ ನೇಮಕ ಸೇರಿದಂತೆ  ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು .

ಮತ ಎಣಿಕೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಇದ್ದರೂ ಕೂಡ ಅದನ್ನು ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು . ಕೋವಿಡ್ ನಿಯಮಗಳ ವ್ಯಾಪಕ ಉಲ್ಲಂಘನೆಯಾಗಿತ್ತು .

ಗೆದ್ದವರು ಬಿಗಿ ವಿಜಯೋತ್ಸವ ಆಚರಿಸಿದರೆ ,ಸೋತವರು ಸಪ್ಪೆ ಮುಖ ಹಾಕಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು .

ಬಸವನಹಳ್ಳಿ ಬಾಲಿಕಾ ಶಾಲೆಯಲ್ಲಿ ಸೋಂಕು ಪತ್ತೆ: ವಿದ್ಯಾರ್ಥಿಗಳಲ್ಲಿ ಆತಂಕ


 ಚಿಕ್ಕಮಗಳೂರು ಇಲ್ಲಿನ ಬಸವನಹಳ್ಳಿ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಯೋರ್ವರಿಗೆ  ಕೊರೊನ ಸೋಂಕು ಪತ್ತೆಯಾಗಿದೆ .

ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆತಂಕ ಮನೆ ಮಾಡಿದೆ.  ಈ ಶಾಲೆಯಲ್ಲಿ ಒಟ್ಟು 419 ವಿದ್ಯಾರ್ಥಿಗಳು ಇದ್ದು ಅದರಲ್ಲಿ ಇಂದು 284  ವಿದ್ಯಾರ್ಥಿಗಳು  ಹಾಜರಾಗಿದ್ದರು .

ಸೋಂಕು ಪತ್ತೆಯಾಗಿರುವುದು ತಿಳಿದ ತಕ್ಷಣ ಆರೋಗ್ಯ ಇಲಾಖೆ ನೆರವಿನಿಂದ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗಿದೆ .

ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ಸೋಂಕು ಪತ್ತೆಯಾಗಿರುವುದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಳವಳ ಮೂಡಿಸಿದ್ದು ಎಲ್ಲಿ   ಪರೀಕ್ಷೆಗಳು ಮುಂದೂಡಲ್ಪಡುತ್ತವೆ' ಶಾಲೆ ಮುಚ್ಚುತ್ತದೆ ಎಂಬ ಹೆದರಿಕೆ ಮನೆಮಾಡಿದೆ .

ಉಳಿದ ಶಾಲೆಗಳಲ್ಲಿಯೂ ಎಚ್ಚರಿಕೆ ವಹಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ .

ಚಿತ್ರ: ತಾರನಾಥ್ ಕಾಮತ್ 

ಕಾಫಿನಾಡಿನಲ್ಲಿ ಕರೊನಗೆ ಒಂದೇ ಕುಟುಂಬದ ಇಬ್ಬರು ಬಲಿ


 ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನ ೨ ನೇ ಹಂತದ ಅಲೆ ವೇಗವಾಗಿ ಹಬ್ಬುತ್ತಿದೆ ಒಂದೇ ಕುಟುಂಬದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ .

ನೆಹರು ನಗರದ ಅರುವತ್ತು ವರ್ಷದ ವೃದ್ಧ ಹಾಗೂ ಅವರ ಪತ್ನಿ ಖಾಸಗಿ  ಆಸ್ಪತ್ರೆಗೆ ದಾಖಲಾಗಿದ್ದರು 

ಮೊದಲು ಪತಿ ಹಾಗೂ 1ದಿನದ ಅಂತರದಲ್ಲಿ  ಪತ್ನಿ ಮೃತಪಟ್ಟಿದ್ದಾರೆ . ಈ ಮಧ್ಯೆ ಜಿಲ್ಲೆಯಲ್ಲಿ ಕೊರೋನಾ ತೀವ್ರವಾಗಿ ಹಬ್ಬುತ್ತಿದೆ .

ಜಾತ್ರೆ ಉತ್ಸವ ಸಭೆ ಸಮಾರಂಭಗಳು ಯಾವುದೇ ನಿಯಮಗಳನ್ನು ಪಾಲಿಸದೆ ನಡೆಯುತ್ತಿವೆ .

 ಬಸವನಹಳ್ಳಿಯ ವಿದ್ಯಾರ್ಥಿನಿ ಯೊಬ್ಬರಲ್ಲಿ ಪ್ರಕರಣ  ಬೆಳಕಿಗೆ ಬಂದಿದ್ದು , ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ಒತ್ತಾಯ ಕೇಳಿಬಂದಿದೆ .

ಸೋಮವಾರ, ಮಾರ್ಚ್ 29, 2021

ಅತ್ಯಾಚಾರ ಆರೋಪ :ರಮೇಶ್ ಜಾರಕಿಹೊಳಿ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ


 ಚಿಕ್ಕಮಗಳೂರು :ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು .

ತಾಲ್ಲೂಕು ಕಚೇರಿ ಆವರಣದಿಂದ ಹನುಮಂತಪ್ಪ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು .

ಮಾಜಿ ಸಚಿವರ ವಿರುದ್ಧ ಅತ್ಯಾಚಾರ ಆರೋಪ  ಪ್ರಕರಣ ದಾಖಲಾಗಿದ್ದರೂ ಈವರೆಗೂ ಅವರನ್ನು ಬಂಧಿಸದೆ ರಕ್ಷಿಸುವ ಯತ್ನ ನಡೆದಿದೆ ಎಂದು ಆರೋಪಿಸಿದರು 

ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡ ಬದಲು ಆಕೆಯನ್ನು ಆರೋಪಿಯಂತೆ ಬಿಂಬಿಸಲಾಗುತ್ತಿದೆ . ಆರೋಪಿ ಸ್ಥಾನದಲ್ಲಿ ಇರುವವರನ್ನು ತಿರುಗಾಡಲು ಬಿಡಲಾಗಿದೆ ಎಂದು ದೂರಿದರು .ಇದರಿಂದ ಸಾಕ್ಷ್ಯಗಳು ನಾಶವಾಗುವ ಅಪಾಯವಿದೆ ಎಂದು ಎಚ್ಚರಿಸಿದರು .

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ .ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದು ಸಮಗ್ರ ತನಿಖೆಗೆ ಒತ್ತಾಯಿಸಿದರು .


ಕ್ಷೇತ್ರ ಪುನರ್ ವಿಂಗಡನೆ ಪ್ರಸ್ತಾಪ :ವೈಎಸ್ವಿದತ್ತ ತೀವ್ರ ಆಕ್ಷೇಪ


 ಚಿಕ್ಕಮಗಳೂರು: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾವನೆಗೆ ಮಾಜಿ ಶಾಸಕ ವೈಎಸ್ ವಿ ದತ್ತಾ ತೀರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ .

ಸುದ್ದಿಗಾರರ ಜೊತೆ ಮಾತನಾಡಿದ ಅವರು ಮುಂದಿನ ಹತ್ತು ವರ್ಷಗಳ ಅವಧಿಗೆಮೀಸಲಾತಿ ನಿಗದಿಪಡಿಸಿ   ಚುನಾವಣಾ ಆಯೋಗ ಈ ಹಿಂದೆ ನಿರ್ಧಾರ ಮಾಡಿತ್ತು ಎಂದರು .

ಸರ್ಕಾರ ಮತ್ತೆ ಈಗ 5ವರ್ಷಗಳಿಗೆ ಸೀಮಿತಗೊಳಿಸಿ ಕ್ಷೇತ್ರಗಳ ಮರು ವಿಂಗಡಣೆಗೆ ಕರಡು ಪ್ರಸ್ತಾವನೆಯನ್ನು ಚುನಾವಣೆ ಆಯೋಗಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ್ದು ಇದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು .

ಸರ್ಕಾರದ ಹಸ್ತಕ್ಷೇಪ ಸರಿಯಲ್ಲ ಎಂದಿರುವ ದತ್ತ ಸರ್ಕಾರದ ಕೈಗೊಂಬೆಯಾಗದೆ  ಚುನಾವಣಾ ಆಯೋಗ ಈ ವಿಷಯದಲ್ಲಿ ಖಡಕ್ ನಿರ್ಧಾರ ಮಾಡಬೇಕಿತ್ತು   ಎಂದಿರುವ ಅವರು ಕಾನೂನಾತ್ಮಕ ಹೋರಾಟ ಅನಿವಾರ್ಯ ಎಂದರು . 

ಛಾಯಾ ಗ್ರಾಹಕರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ :ರಂಭಾಪುರಿ ಶ್ರೀಗಳು


    ಚಿಕ್ಕಮಗಳೂರು :ದಿನನಿತ್ಯದ ಸುದ್ದಿ ಇನ್ನಿತರ ಚಟುವಟಿಕೆ ಸಭೆ' ಸಮಾರಂಭಗಳಲ್ಲಿ ಭಾಗವಹಿಸಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕಾರ್ಯನಿರ್ವಹಿಸುವ ಛಾಯಾಗ್ರಾಹಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕೆಂದು ರಂಭಾಪುರಿ ಶ್ರೀಗಳು ಅಭಿಪ್ರಾಯಿಸಿದ್ದಾರೆ . ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಛಾಯಾಗ್ರಾಹಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯ ಜನಪ್ರತಿನಿಧಿಗಳು ಇವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಬೇಕೆಂದು ಹೇಳಿದರು .

ಸಂಘದ ಅಧ್ಯಕ್ಷ ಬಿ. ಕೆ. ಜಯಚಂದ್ರ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್, ಮಾಜಿ ಅಧ್ಯಕ್ಷ ಜೀವನ್ ಶೆಟ್ಟಿ ಇತರರು ಭಾಗವಹಿಸಿದ್ದರು  .

ಮಾಜಿ ಸಚಿವ ಜಾರಕಿಹೊಳಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ


 ಚಿಕ್ಕಮಗಳೂರು :ಅತ್ಯಾಚಾರ ಆರೋಪ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಧಿಸುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ .

 ಈ ವಿಷಯವನ್ನು ಗಂಭೀರವಾಗಿ ಚರ್ಚಿಸಿದ ಪಕ್ಷದ ಕಾರ್ಯಕಾರಿಣಿ ಸಭೆ , ಪ್ರಕರಣವನ್ನು ದಿಕ್ಕು ತಪ್ಪಿಸುವ ಯತ್ನ ನಡೆದಿದ್ದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರನ್ನು ಉದ್ದೇಶಪೂರ್ವಕವಾಗಿ ಎಳೆದು ತಂದಿರುವುದನ್ನು ಖಂಡಿಸಿತು .

ಬೆಳಗಾವಿಯಲ್ಲಿ ಡಿ .ಕೆ .ಶಿವಕುಮಾರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವುದನ್ನು ಪಕ್ಷ ಖಂಡಿಸಿತಲ್ಲದೆ  ರಮೇಶ್ ಜಾರಕಿಹೊಳಿ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಸಭೆ ನಿರ್ಧರಿಸಿತು .

ಪಕ್ಷದ ಜಿಲ್ಲಾ ಅಧ್ಯಕ್ಷ ಅಂಶುಮಂತ್, ಮಾಜಿ ಶಾಸಕರಾದ ಬಿ ಎಲ್ ಶಂಕರ್,ಮೋಟಮ್ಮ , ಗಾಯತ್ರಿಶಾಂತೇಗೌಡ ,ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು .


ಶನಿವಾರ, ಮಾರ್ಚ್ 27, 2021

ಉರುಳಿಗೆ ಸಿಲುಕಿ ಚಿರತೆ ಸಾವು


 

ಚಿಕ್ಕಮಗಳೂರು :ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಪ್ರಾಣಬಿಟ್ಟಿದೆ .

ಚಿಕ್ಕಮಗಳೂರು ಅರಣ್ಯ ವಿಭಾಗದ  ಕೆ .ಆರ್ .ಪೇಟೆ ಸಮೀಪದ  ಕೆಳಗಣೆ ಗ್ರಾಮದ ಅಂಬಿಕಾ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ .

 ಉರುಳಿಗೆ ಸಿಲುಕಿದ್ದ ಚಿರತೆ  ಜೀವಂತವಾಗಿ ಒದ್ದಾಡುತ್ತಿದ್ದು , ಶಿವಮೊಗ್ಗ ದಿಂದ ಅಗತ್ಯ ಔಷಧ ಬರುವುದು ತಡವಾದ ಹಿನ್ನೆಲೆಯಲ್ಲಿ  ಚಿರತೆಯ ಹೊಟ್ಟೆ ಭಾಗ ಸೀಳಿ  ಹೋದ ಕಾರಣ ಅತೀವ ನೋವಿನಿಂದ ಪ್ರಾಣಬಿಟ್ಟಿದೆ. 

ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಮತ್ತಾವರ ಅರಣ್ಯದಲ್ಲಿ ಕೈಗೊಂಡು ನಂತರ ಸುಡಲಾಯಿತು.

 ಅರಣ್ಯ ಇಲಾಖೆಯ ಅಧಿಕಾರಿ'  ಸಿಬ್ಬಂದಿ ಸ್ಥಳದಲ್ಲಿ ಇದ್ದರು. ಅಂಬಿಕಾ ಎಸ್ಟೇಟ್ ನ ಮಾಲೀಕರ ಮೇಲೆ ಪ್ರಕರಣ  ದಾಖಲಿಸಲಾಗಿದೆ.

ಕರ್ತವ್ಯಲೋಪ :ಎಎಸ್ ಐ ಸೇರಿ ಮೂವರ ಅಮಾನತು


 ಚಿಕ್ಕಮಗಳೂರು: ಕರ್ತವ್ಯಲೋಪದ ಆರೋಪದ ಮೇಲೆ ಸಹಾಯಕ ಠಾಣಾಧಿಕಾರಿ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶಿಸಿದ್ದಾರೆ .

ಸಖರಾಯಪಟ್ಟಣ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಶಿವಕುಮಾರ್ ಪೊಲೀಸರಾದ ಶಿವಾಜಿ' ಶಿವು ಅಮಾನತುಗೊಂಡವರು .

ಈ ಮೂವರು ಕರ್ತವ್ಯದಲ್ಲಿ ಇದ್ದ ಸಂದರ್ಭದಲ್ಲಿ ಪೊಕ್ಸೊ ಕಾಯಿದೆಯಡಿ ಬಂಧಿತ ಆರೋಪಿ ಲಾಕಪ್ ನಿಂದ ತಪ್ಪಿಸಿಕೊಂಡಿದ್ದು, ಕರ್ತವ್ಯಲೋಪದ ಆರೋಪದ ಮೇಲೆ ಇವರನ್ನು ಅಮಾನತುಗೊಳಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ .

ಗಾಳಿಕೆರೆ: ಕುರುಡು ಭಕ್ತಿಯೂ... ಅರಣ್ಯ ಇಲಾಖೆಯೂ


 ಚಿಕ್ಕಮಗಳೂರು : ಬಾಬಾಬುಡನ್ ಗಿರಿ ಶ್ರೇಣಿಯ ಚಂದ್ರದ್ರೋಣ ಪರ್ವತದ ನೆತ್ತಿಯ ಮೇಲಿರುವ 'ಗಾಳಿಕೆರೆ' ಎಂಬ ಚೆಂದದ ಕೆರೆಯು ಕುರುಡು ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುವ ಮೊದಲು ಹೇಗಿತ್ತು ಈಗ ಹೇಗಿದೆ ನೋಡಿ .

ಅರಣ್ಯ ಇಲಾಖೆ ಎಂಥಾ ಮೂಢತ್ವದ ಕೆಲಸ ಮಾಡಿದೆಯೆಂದರೆ, ಶೋಲಾ ಹುಲ್ಲುಗಾವಲಿನ ಅತಿ ಸೂಕ್ಷ್ಮ ಪ್ರದೇಶವಾದ ಹಾಗೂ ಐದು ಸಾವಿರ ಅಡಿ ಎತ್ತರದ ಪ್ರದೇಶದಲ್ಲಿನ ಅಮೂಲ್ಯ ಜಲಮೂಲವನ್ನು ರಕ್ಷಿಸುವ ಸಲುವಾಗಿ ಭಕ್ತರನ್ನು, ಪ್ರವಾಸಿಗರನ್ನು ಹಾಗೂ ಪ್ರಾಣಿಬಲಿಯನ್ನು ನಿರ್ಬಂಧಿಸುವ ಬದಲು ಕೆರೆಗೆ ಕಬ್ಬಿಣದ ಬೇಲಿಯನ್ನು ಅಳವಡಿಸುವ ಮೂಲಕ ಪ್ರಾಣಿಗಳು ನೀರು ಕುಡಿಯಲು ಬರದಂತೆ ನಿರ್ಬಂಧಿಸಿದೆ.! 

ಅಸಲಿಗೆ ಜನರು ಕೆರೆಗೆ ಇಳಿಯದಂತೆ ನಿರ್ಬಂಧಿಸುವ ಸಲುವಾಗಿ ಬೇಲಿ ನಿರ್ಮಿಸಿರುವುದಾದರೂ, ಎರಡು ಮೂರು ಗೇಟು ಅಳವಡಿಸಿರುವುದರಿಂದ ಜನ ಎಂದಿನಂತೆ ಸಲೀಸಾಗಿ ಕೆರೆಯೊಳಗೆ ಇಳಿದು ಎಗ್ಗಿಲ್ಲದೆ ಮಲಿನಗೊಳಿಸುತ್ತಿದ್ದಾರೆ. ಈ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮಿಶ್ರಿತ ಹೊಲಸು ನೀರನ್ನು  ಕುಡಿಯುವ ಪ್ರಾಣಿಗಳ ಗತಿಯೇನಾಗುತ್ತಿರಬಹುದು ಎಂಬ ಊಹೆಯೂ ಇಲಾಖೆಗಿದ್ದಂತಿಲ್ಲ.! 

 ಅನಾಹುತಕಾರಿ ಸಂಗತಿಯೆಂದರೆ, ಇಲ್ಲಿಂದ ಹಾಗೂ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ 


ಮಗ್ಗುಲಿಗಿರುವ ಚಿಕ್ಕ ತೊರೆಯಿಂದ ಹೊರಹೋಗುವ ನೀರು ಇನ್ನೊಂದಷ್ಟು ಹಳ್ಳಗಳನ್ನು‌ ಸೇರಿಕೊಂಡು ಭದ್ರಾ ಮೀಸಲು ಅರಣ್ಯದೊಳಗೆ ಹರಿಯುತ್ತದೆ. ಕಾಡಿನ ಕಡೆಗೆ ಹರಿಯುತ್ತಿರುವ ಈ ತ್ಯಾಜ್ಯಮಿಶ್ರಿತ ನೀರು ಜೈವಿಕ ವ್ಯವಸ್ಥೆಯನ್ನು ಹೇಗೆ ನಿರಂತರವಾಗಿ ಕೊಲ್ಲುತ್ತಿರಬಹುದು ಎಂಬುದನ್ನು ಅರಣ್ಯ ಇಲಾಖೆ ಮನಗಂಡಿದೆಯಾ...!?  ಎಚ್ಚೆತ್ತುಕೊಳ್ಳಲು ಇದು ಸಕಾಲ. 


*ಕಾರ್ತಿಕಾದಿತ್ಯ ಬೆಳ್ಗೋಡು*

ಶುಕ್ರವಾರ, ಮಾರ್ಚ್ 26, 2021

ಪತ್ರಕರ್ತರನ್ನು ಕಟ್ಟಿಹಾಕುವ ಯತ್ನ: ಮಾಧ್ಯಮ ಸ್ವಾತಂತ್ರ್ಯದ ಮೇಲೆ ಸರ್ಕಾರದ ದಾಳಿ

 


ಚಿಕ್ಕಮಗಳೂರು :ಇತ್ತೀಚೆಗೆ ಪ್ರಶ್ನೆ ಮಾಡುವವರನ್ನು, ಸರ್ಕಾರ ವಿರುದ್ಧ ಮಾತನಾಡುವವರನ್ನು  ಒಂದಿಲ್ಲ      ಒಂದು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿ ಜೈಲಿಗೆ ಅಟ್ಟುವ ಪರಿಪಾಠ ಹೆಚ್ಚಾಗುತ್ತಿದೆ .

ದೇಶದ ವಿವಿಧ ಕಡೆಗಳಲ್ಲಿ ಇಂತಹ ಅನೇಕ ಘಟನೆಗಳು ಈಗಾಗಲೇ ಜರುಗಿವೆ. ಅದರಲ್ಲಿ ಪತ್ರಕರ್ತರು ಒಳಗೊಂಡಿದ್ದಾರೆ .

ಈಗ ರಾಜ್ಯ ಸರಕಾರವು ಪರೋಕ್ಷವಾಗಿ ಪತ್ರಕರ್ತರನ್ನು ಕಟ್ಟಿ ಹಾಕುವ ಕೆಲಸಕ್ಕೆ ಕೈ ಹಾಕಿದೆ .ಅದಕ್ಕಾಗಿ ಕ ಎಲ್ಲ ಪತ್ರಕರ್ತರ ಜಾತಕ ಸಂಗ್ರಹಿಸುವ ಕೆಲಸಕ್ಕೆ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ .

ಮಾನ್ಯತೆ ಪಡೆದ ಪತ್ರಕರ್ತರ ಮಾಹಿತಿಯನ್ನು ಒದಗಿಸುವ ಹೊಣೆಗಾರಿಕೆಯನ್ನು ವಾರ್ತಾ ಇಲಾಖೆಗೆ ನೀಡಲಾಗಿದೆ . 

ತಮಾಷೆಯ ಸಂಗತಿಯೆಂದರೆ ಇದರಲ್ಲಿ ಸಿದ್ಧಾಂತ ಯಾವುದು ಎಂದು ಕೇಳಿರುವುದು . ಸಂವೇದನಶೀಲ ಪತ್ರಕರ್ತರಿಗೆ ಇದರ ಮರ್ಮ ಅರ್ಥವಾಗಬಹುದು . ಕನಿಷ್ಠ ಈಗಲಾದರೂ ನಾವು ಇದನ್ನು ವಿರೋಧಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು 

**ಈ ಬಗ್ಗೆ ಟೆಲೆಕ್ಸ್ ರವಿ ಹೀಗೆ ಬರೆದಿದ್ದಾರೆ ...

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಗೃಹಸಚಿವರಾಗಿದ್ದ ವಿ ಎಸ್ ಆಚಾರ್ಯ ಸುದ್ದಿಮಾಧ್ಯಮ ಕ್ಷೇತ್ರಕ್ಕೆ ಓಂಬಡ್ಮನ್ ನೇಮಕ ಮಾಡಲು ಮುಂದಾಗಿದ್ದರು. ಆಗ  ಕಾರ್ಯನಿರತ ಪತ್ರಕರ್ತ ಸಂಘಟನೆಗಳ  ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಆ ನಿಧಾರವನ್ನು ಕೈ ಬಿಡಲಾಯಿತು.

 ಬಿಜೆಪಿ ಪ್ರತಿ ಸಂದರ್ಭದಲ್ಲೂ   ಪತ್ರಕರ್ತರು. ಮಾಧ್ಯಮಗಳು  ತಮ್ಮ ಮರ್ಜಿಗೆ ತಕ್ಕಂತೆ ಇರಬೇಕು ಎಂಬ ಧೋರಣೆ ಹೊಂದಿದೆ. ಅದಕ್ಕೆ ವಿರುದ್ಧವಾಗಿರುವವರನ್ನು ನಕ್ಸಲ್ ಸಿಂಪಥೈಸರ್, ದೇಶದ್ರೋಹಿಗಳು  ಎಂಬ ಹಣೆಪಟ್ಟಿ ಕಟ್ಟಿ ಹತ್ತಿಕ್ಕುವ  ಕೆಲಸ ಮಾಡುತ್ತಲೆ ಬಂದಿದೆ. 

ಈಗ ವಿವರ ಕೇಳುತ್ತಿರುವುದರ ಹಿಂದೆ ಇಂತಹ ಉದ್ದೇಶವೆ ಇದೆ

ಸ್ವಾತಂತ್ರ್ಯ ಸಂಭ್ರಮ :ಅಮೃತ ಮಹೋತ್ಸವಕ್ಕೆ ಚಾಲನೆ


 ಚಿಕ್ಕಮಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಮೃತ ಮಹೋತ್ಸವ   ಆಚರಿಸಲು ನಿರ್ಧರಿಸಲಾಗಿದೆ .

ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಮ್ಮಿಕೊಂಡಿದ್ದು ಅದರ ಭಾಗವಾಗಿ ಇಂದು ಜಿಲ್ಲಾ ಕೇಂದ್ರದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು .

ಜಿಲ್ಲಾಧಿಕಾರಿ ಕೆ ಎನ್ ರಮೇಶ್ ನಗರಸಭೆ ಆಯುಕ್ತ ಬಸವರಾಜ್ ಇತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳನ್ನು ವಿತರಿಸಲಾಯಿತು .

ಚಿತ್ರ: ತಾರನಾಥ್ ಕಾಮತ್ 

ಚಿಕ್ಕಮಗಳೂರು ನಗರಸಭೆ : ೧.೮೨ಕೋಟಿ ರೂ ಉಳಿತಾಯ ಬಜೆಟ್

 ಚಿಕ್ಕಮಗಳೂರು :ಇಲ್ಲಿನ ನಗರಸಭೆಯ ವಾರ್ಷಿಕ ೮೪.೩೬ಕೋಟಿ ರೂ ಮೊ


ತ್ತದ ಬಜೆಟ್ ಅನ್ನು ಜಿಲ್ಲಾಧಿಕಾರಿಯೂ ಆಗಿರುವ ಆಡಳಿತಾಧಿಕಾರಿ ಕೆ .ಎನ್. ರಮೇಶ್ ಮಂಡಿಸಿದ್ದಾರೆ .

    ನಗರದ 4ಕಡೆಗಳಲ್ಲಿ ಹೈಟೆಕ್ ವಾಣಿಜ್ಯ ಸಂಕೀರ್ಣ ನಿರ್ಮಾಣದ ಜೊತೆಗೆ ರಸ್ತೆ ,ಚರಂಡಿ, ಉದ್ಯಾನ ಅಭಿವೃದ್ಧಿ ,ತ್ಯಾಜ್ಯ ವಿಲೇವಾರಿಗೆ ವಿಶೇಷ ಗಮನ ನೀಡಲಾಗಿದೆ .

೧.೮೨  ಕೋಟಿ ರೂ ಉಳಿತಾಯ ಬಜೆಟ್ ಆಗಿದ್ದು , ಹಿಂದೂ ಮುಸಾಫಿರ್ ಖಾನ ಜಾಗದಲ್ಲಿ ೧೦ ಕೋಟಿ ರೂ ವೆಚ್ಚದಲ್ಲಿ  ಹೈಟೆಕ್ ವಾಣಿಜ್ಯ ಸಂಕೀರ್ಣ ನಿರ್ಮಾಣದ ಪ್ರಸ್ತಾವನೆ ಅಂಗೀಕರಿಸಲಾಗಿದೆ .

ನಗರಸಭೆ ಉದ್ಯಾನ ಅಭಿವೃದ್ಧಿಗೆ ೧೦ ಕೋಟಿ ರೂ. ಮೀಸಲು ಇಡಲಾಗಿದೆ .ಫುಡ್ ಕೋರ್ಟ್ ನಿರ್ಮಾಣ ವಿಚಾರವು ಮತ್ತೆ ಪ್ರಸ್ತಾವನೆ ಗೊಂಡಿದೆ .

ಬುಧವಾರ, ಮಾರ್ಚ್ 24, 2021

ಸಕಾಲ: ನಿಗದಿತ ಸಮಯದೊಳಗೆ ಅರ್ಜಿ ವಿಲೇವಾರಿಗೆ ಸೂಚನೆ

 ಚಿಕ್ಕಮಗಳೂರು,ಮಾ.೨೪: ಸಕಾಲ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು.

 ಸಕಾಲ ಯೋಜನೆಯ  ಪ್ರಗತಿ ಪರಿಶೀಲನೆ ಹಾಗೂ ಸಕಾಲ ಸೇವೆಗಳ ಅನುಷ್ಠಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೧೧೩ ಅರ್ಜಿಗಳುನೋಂದಣಿಯಾಗಿದ್ದು  ವಿಲೇವಾರಿಯಾಗದೆ ವಿಳಂಬವಾಗಿರುವುದಕ್ಕೆ ಸೂಕ್ತ ಕಾರಣವನ್ನು ನೀಡಬೇಕೆಂದು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾದೇಶಿಕೆ ಸಾರಿಗೆ ಇಲಾಖೆ, ಕೆ.ಎಸ್.ಆರ್.ಟಿ.ಸಿ, ಕೃಷಿ ಇಲಾಖೆ, ಆಯುಷ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಲ್ಲಿ ವಿಲೇವಾರಿಯಾಗದೇ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ ಅವುಗಳನ್ನ

ನಿಗದಿತ ಸಮಯದೊಳಗೆ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಬಸವನಹಳ್ಳಿ ಕೆರೆ ಅಭಿವೃದ್ಧಿಗೆ 8.50 ಕೋಟಿ ರೂ ಬಿಡುಗಡೆ


 ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿ ಇರುವ ಬಸವನಹಳ್ಳಿ( ದಂಟರಮಕ್ಕಿ ) ಕೆರೆ ಅಭಿವೃದ್ಧಿಗೆ ಕೋಟಿ ರೂ ಬಿಡುಗಡೆ ಆಗಿದೆ .

ಶಾಸಕ ಸಿ. ಟಿ. ರವಿ ಅವರ ಕೋರಿಕೆ ಹಿನ್ನೆಲೆಯಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗಿದೆ .

ಕೆರೆಯ ಸಂಪೂರ್ಣ ಅಭಿವೃದ್ಧಿ , ಕೊಳಚೆ ನೀರು ಬರುವುದನ್ನು ತಡೆಗಟ್ಟುವುದು, ಉದ್ಯಾನವನ ನಿರ್ಮಾಣ ,ವಿವೇಕಾನಂದ ಪ್ರತಿಮೆ ಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ .

ಜಲಕ್ರೀಡೆ ,ಸೈಕಲ್ ಟ್ರ್ಯಾಕ್' ಆ್ಯಂಪಿ ಥಿಯೇಟರ್ , ಕಲಾಕೃತಿಗಳ ಮ್ಯೂಸಿಯಂ ಇನ್ನಿತರೆ ಕೆಲಸ ಮಾಡಲು ಉದ್ದೇಶಿಸಲಾಗಿದೆ .

ಮಂಗಳವಾರ, ಮಾರ್ಚ್ 23, 2021

ಸರ್ಕಾರದ ದಿವ್ಯ ನಿರ್ಲಕ್ಷ -ಹತ್ತು ಲಕ್ಷ ರೂ ಸಾಲದ ಸುಳಿಯಲ್ಲಿ ಸ್ವಾಧಾರ ಕೇಂದ್ರ !!!


 ಚಿಕ್ಕಮಗಳೂರು: ವಿವಿಧ ರೂಪದಲ್ಲಿ ನೊಂದ ಮಹಿಳೆಯರು ಮತ್ತು ಮಕ್ಕಳ ಹಿತರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಸ್ವಾಧಾರ ಕೇಂದ್ರ ಸಾಲದ ಸುಳಿಯಲ್ಲಿ ಸಿಲುಕಿದೆ .

ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಅನುದಾನ ಬಾರದೆ ಹತ್ತು ಲಕ್ಷ ರೂ ಸಾಲ ವಾಗಿದೆ . ಕಸ್ತೂರಿಬಾ ಸದನದ ಆಶ್ರಯದಲ್ಲಿ ಈ ಕೇಂದ್ರ ನಡೆಯುತ್ತಿದ್ದು ಇಲ್ಲಿ ಹನ್ನೆರಡು ಮಹಿಳೆಯರು ಹಾಗೂ ಇಪ್ಪತ್ತು ಮಕ್ಕಳು ನೆಲೆಸಿದ್ದಾರೆ .

ಸರ್ಕಾರ ವಾರ್ಷಿಕ ೧೬ ಲಕ್ಷ ರೂ ಗಳನ್ನು ನೀಡಬೇಕಾಗಿದ್ದು ಕೇವಲ ೬ ಲಕ್ಷ ರೂ ಬಂದಿದೆ  ಎಂದು ಕೇಂದ್ರದ ಮುಖ್ಯಸ್ಥೆ ಮೋಹಿನಿ ಸಿದ್ದೇಗೌಡ ಬೇಸರ ಹೊರಹಾಕಿದ್ದಾರೆ .

ಕೇಂದ್ರ ಸರ್ಕಾರದ ಕಾರ್ಯಕ್ರಮ ಇದಾಗಿತ್ತು ರಾಜ್ಯ ಸರ್ಕಾರ ಅನುದಾನವನ್ನು ನೀಡಬೇಕು .

 ಮಠ ಮಂದಿರಗಳಿಗೆ ಹೇರಳವಾಗಿ ಅನುದಾನ ನೀಡುತ್ತಿರುವ ಸರ್ಕಾರಕ್ಕೆ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸುವ ಕೇಂದ್ರದ ಬಗ್ಗೆ ಕಾಳಜಿ ಇಲ್ಲವಾಗಿದೆ .

ಇಲ್ಲಿನ ಸಂಸತ್ ಸದಸ್ಯರು ಮತ್ತು ಶಾಸಕರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ .

ಬೆಲೆಯಿಲ್ಲದೆ ಕಂಗಾಲು :ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡಿ ಕೋಸು ಕಿತ್ತು ಹಾಕಿದ ರೈತ


 ಚಿಕ್ಕಮಗಳೂರು :ಬೆಲೆ ಇಲ್ಲದೆ ಕಂಗಾಲಾದ ಕೋಸು ಬೆಳೆದ ರೈತರೊಬ್ಬರು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿ ಕೋಸನ್ನು ಕಿತ್ತು ಹಾಕಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ನಡೆದಿದೆ 

ಹಿರೇಗೌಜದ ಬಸವರಾಜು ಎಂಬುವರು ತನ್ನ 1ಎಕರೆ ಜಮೀನಿನಲ್ಲಿ ಸುಮಾರು ೪೦ ಸಾವಿರ  ರೂ ವೆಚ್ಚ ಮಾಡಿ ಕೋಸನ್ನು ಹಾಕಿದ್ದರು .

    ಕೋಸು ಬೆಳೆದು ಕಟಾವಿಗೆ ಬಂದಿದ್ದು ಸೂಕ್ತ ಬೆಲೆ ಇಲ್ಲದೆ ಉತ್ಪಾದನಾ ವೆಚ್ಚವು ಸರಿದೂಗಿಸಲು ಅಸಾಧ್ಯವಾಗಿದೆ . ಇದರಿಂದ ಬೇಸತ್ತ ರೈತ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಕೋಸನ್ನು ನೆಲಸಮ ಮಾಡಿ ಆಕ್ರೋಶ ಹೊರಹಾಕಿದ್ದಾರೆ .

ಸರ್ಕಾರದ ತಪ್ಪು ನೀತಿ ,ದಲ್ಲಾಳಿಗಳ ಹಾವಳಿಯಿಂದ ಅತ್ತ ರೈತರಿಗೆ  ಸೂಕ್ತ ಬೆಲೆ ಸಿಗುತ್ತಿಲ್ಲ .ಇತ್ತ ಕಡಿಮೆ ಬೆಲೆಗೆ ಗ್ರಾಹಕರಿಗೆ ವಸ್ತುಗಳು ಎಟಕುತ್ತಿಲ್ಲ  .

ಸೋಮವಾರ, ಮಾರ್ಚ್ 22, 2021

4 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಚಿಕ್ಕಮಗಳೂರು,ಮಾ,೨೨:- ಕರ್ನಾಟಕ ಪವರ್ ಕಾರ್ಪೋರೇಷನ್, ಯುಪಿಸಿಲ್ ಮತ್ತು ಕೆಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ  ತಾಂತ್ರಿಕ ದೋಷ  ಕಂಡು ಬಂದಿದ್ದು ೪ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ .

 ಮೆಸ್ಕಾಂ ವ್ಯಾಪ್ತಿಯ ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗಳಲ್ಲಿ ವಿದ್ಯುತ್ ಜಾಲದ ಸುರಕ್ಷತೆಯ ದೃಷ್ಠಿಯಿಂದ ಅನಿಯಮಿತವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬರಬಹುದು ಎಂದಿದೆ .

ನೀರಾವರಿ ಪಂಪ್‌ಸೆಟ್‌ಗಳಿಗೆ ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆ ಹಾಗೂ ಮಧ್ಯರಾತ್ರಿಯಿಂದ ಬೆಳಿಗ್ಗೆ ೪ ಗಂಟೆಯವರೆಗೆ ಮಾತ್ರ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ. 

ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಈ ಹಿನ್ನಲೆಯಲ್ಲಿ ಬೇಡಿಕೆಯಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ.

ರಾಜ್ಯದ ವಿದ್ಯುತ್ ಜಾಲವು ಒಟ್ಟು ೪,೨೮೧ ಎಂ.ಡಬ್ಲ್ಯೂ ನಷ್ಟು ಪ್ರಮಾಣದ ವಿದ್ಯುತ್ ಕೊರತೆ ಎದುರಿಸುತ್ತಿದೆ. ಇದರಿಂದ ಮೆಸ್ಕಾಂಗೆ ಹಂಚಿಕೆಯಾಗುವ ವಿದ್ಯುತ್ ಪ್ರಮಾಣದಲ್ಲಿ ಸುಮಾರು ೨೦೦ ಎಂಡಬ್ಲ್ಯೂನಷ್ಟು ಕೊರತೆಯಾಗುವ ಸಂಭವವಿದೆ ಎಂದು ಮೆಸ್ಕಾಂ ಹೇಳಿದೆ .


ಭಾನುವಾರ, ಮಾರ್ಚ್ 21, 2021

ಮೀಸಲು ಅರಣ್ಯ ಪ್ರಸ್ತಾವನೆ ಹಿಂದೆ ಪಡೆಯಲು ಒತ್ತಾಯ


 ಚಿಕ್ಕಮಗಳೂರು :ರಾಜ್ಯ ಸಚಿವ ಸಂಪುಟದ ಮುಂದಿರುವ ಮುಳ್ಳಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಪ್ರಸ್ತಾವನೆಯನ್ನು ಹಿಂದೆ ಪಡೆಯುವಂತೆ ಹೋರಾಟ ಸಮಿತಿ ಒತ್ತಾಯಿಸಿದೆ .

ಈ ಭಾಗದ ಅರಣ್ಯದಲ್ಲಿರುವ ಜನವಸತಿ ಪ್ರದೇಶಗಳ ಪುರಾವೆಗಳನ್ನು ಗಮನಿಸಿ ಧೃಢ ಪಡಿಸಿಕೊಂಡು ಸೂಕ್ತ ಪರಿಹಾರ ನೀಡುವಂತೆ ಸಮಿತಿ ಆಗ್ರಹಿಸಿದೆ .

ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದ15,897 ಎಕರೆಯನ್ನು ಸಂಪುಟದ ಅನುಮೋದನೆಗಾಗಿ ಜಿಲ್ಲಾಡಳಿತ ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ  ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಮಿತಿ ಪ್ರಧಾನ ಸಂಚಾಲಕ ವಿಜಯಕುಮಾರ್ ಆರೋಪಿಸಿದ್ದಾರೆ .

ಸಮಿತಿಯ ಹೋರಾಟದ ಫಲವಾಗಿ 5ಸಾವಿರ ಎಕರೆ ಪ್ರದೇಶವನ್ನು ಕೈಬಿಡಲಾಗಿದ್ದರೂ ಯಾವ ಸರ್ವೆ ನಂಬರ್  ಎಂಬುದನ್ನು ಸ್ಪಷ್ಟಪಡಿಸಿಲ್ಲ .  ಈ ವಿಷಯದಲ್ಲಿ ಅನೇಕ ಗೋಜಲು ಗಳಿದ್ದು ಸೂಕ್ತ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ .

ಶನಿವಾರ, ಮಾರ್ಚ್ 20, 2021

೨೩ ಕೆರೆ ತುಂಬಿಸುವ ಯೋಜನೆಗೆ ೪೧೮ ಕೋಟಿ ರೂ ಮಂಜೂರು :ಶಾಸಕ ಸುರೇಶ್

 


ಚಿಕ್ಕಮಗಳೂರು.ಮಾ.೨೦: ಲಿಂಗದಹಳ್ಳಿ ಹೋಬಳಿಯಲ್ಲಿರುವ ೨೩ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ೪೧೮ ಕೋಟಿ ರೂ. ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲಿ ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಟೆಂಡರ್ ಕರೆದು ಚಾಲನೆ ನೀಡಲಾಗುವುದು ಎಂದು ತರೀಕೆರೆ ಶಾಸಕ ಸುರೇಶ್ ತಿಳಿಸಿದ್ದಾರೆ .

 ತರೀಕೆರೆ ತಾಲ್ಲೂಕು ಲಿಂಗದಹಳ್ಳಿ ಹೋಬಳಿಯ ನಂದಿಬಟ್ಟಲು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

  ಲಿಂಗದಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸಲು  ಭದ್ರಾ ಉಪ ಕಣಿವೆಯಿಂದ ತರೀಕೆರೆ, ಬೀರೂರು, ಕಡೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ೧,೨೮೧ ಕೋಟಿ ರೂ. ಮಂಜೂರಾಗಿದೆ ಎಂದರು .

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ , ತಹಸೀಲ್ದಾರ್ ಗೀತಾ  ಮಾತನಾಡಿದರು.

 ಮೂಲ ಸೌಕರ್ಯ- ಸಮಸ್ಯೆಗಳ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕೋವಿಡ್-೧೯ ಸಂಬಂಧಿಸಿದಂತೆ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾಮಣಿ, ಉಪಾಧ್ಯಕ್ಷ ರಮೇಶ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ನಾರಾಯಣಮೂರ್ತಿ, ತರೀಕೆರೆ ವಿಭಾಗದ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್  ಉಪಸ್ಥಿತರಿದ್ದರು.


ಚಿಕ್ಕಮಗಳೂರು: ಚಲನ್ ಗೋಲ್ಮಾಲ್ :೩೦ ಪ್ರಕರಣ ಬೆಳಕಿಗೆ


 ಚಿಕ್ಕಮಗಳೂರು :ಇಲ್ಲಿನ ನಗರಸಭೆಯಲ್ಲಿ ನಡೆದಿರುವ ಆಸ್ತಿ ತೆರಿಗೆ ಪಾವತಿ ಚಲನ್ ಮೇಲೆ ನಕಲಿ ಸೀಲು ,ಸಹಿ ಹಾಕಿ ಹಣ ಗುಳುಂ ಮಾಡಿದ ೩೦ ಪ್ರಕರಣಗಳು ಬೆಳಕಿಗೆ ಬಂದಿವೆ.

ಚಲನ್ ಒಂದರಲ್ಲಿ ದಿನಾಂಕ ಮತ್ತು ಮೊಹರಿನ ದಿನಾಂಕದಲ್ಲಿ ಕಂಡುಬಿಟ್ಟೆ ವ್ಯತ್ಯಾಸದಿಂದ ಈ ಹಗರಣ  ಬೆಳಕಿಗೆ ಬಂದಿತ್ತು .

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರಸಭೆ ಆಯುಕ್ತ ಬಿ ಸಿ ಬಸವರಾಜ್  ಪರಿಶೀಲನೆ ನಡೆಸಲು ಸೂಚನೆ ನೀಡಿದ್ದು ೩೦ ಪ್ರಕಣಗಳು ಪತ್ತೆಯಾಗಿವೆ .

ಈ ಸಂಬಂಧ ಬಿಲ್ ಕಲೆಕ್ಟರ್ ಶ್ಯಾಮ್ ಹಾಗೂ ಗುತ್ತಿಗೆದಾರ ಕೇಶವ ವಿರುದ್ಧ ನಗರ ಠಾಣೆಗೆ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ .

ಕೇಶವ್ ಆಡಳಿತ ಬಿಜೆಪಿ ಪಕ್ಷದ ಸಕ್ರಿಯ ಸದಸ್ಯನಾಗಿದ್ದು ರಕ್ಷಣೆಗೆ ತೆರೆಮರೆಯ ಯತ್ನ ,ಒತ್ತಡಗಳು ಗಳು ನಡೆದಿವೆ .

ಈ ಮಧ್ಯೆ ಜಿಲ್ಲಾಧಿಕಾರಿಗಳು ನಗರಸಭೆಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಮುಂದಿನ ಕ್ರಮದ ಜೊತೆಗೆ ಬಿಲ್ ಕಲೆಕ್ಟರ್ ಶ್ಯಾಮ್ ನನ್ನು ಅಮಾನತು ಮಾಡುವಂತೆ ಸೂಚನೆ ನೀಡಿದ್ದಾರೆ  

ಶುಕ್ರವಾರ, ಮಾರ್ಚ್ 19, 2021

ವಿದ್ಯುತ್ ಅವಘಡ: ಸುಟ್ಟು ಕರಕಲಾದ ಮನೆ


 ಚಿಕ್ಕಮಗಳೂರು :ಬದುಕಿನ ನಿರ್ವಹಣೆಗೆ ಸಣ್ಣ ಹೋಟೆಲ್ಲನ್ನು ಇಟ್ಟುಕೊಂಡಿದ್ದ  ಜಯನಗರದ ರೂಪಾ ಅವರ ಮನೆಗೆ ಇಂದು ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ .

ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ .ಕ್ಷಣಮಾತ್ರದಲ್ಲಿ ಬೆಂಕಿ ಮನೆಯನ್ನು ಆವರಿಸಿತು. ಅಕ್ಕಪಕ್ಕದವರು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ .

ಇತರ ಮನೆಗಳಿಗೂ ಬೆಂಕಿ ಹರಡುವ ಸಾಧ್ಯತೆಗಳಿದ್ದವು , ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬಹಳಷ್ಟು ವಸ್ತುಗಳು ಸುಟ್ಟು ಕರಕಲಾಗಿ ಹೋಗಿ ಭಾರಿ ನಷ್ಟ ಸಂಭವಿಸಿದೆ .

ಬುಧವಾರ, ಮಾರ್ಚ್ 17, 2021

ನಗರಸಭೆಯಲ್ಲಿ ಹಣ ದುರ್ಬಳಕೆ: ಇಬ್ಬರು ಅಂದರ್


 ಚಿಕ್ಕಮಗಳೂರು :ಇಲ್ಲಿನ ನಗರಸಭೆಯಲ್ಲಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ .

ನಗರಸಭೆ ಆಯುಕ್ತ ಬಸವರಾಜ್ ನೀಡಿದ ದೂರನ್ನು ಆಧರಿಸಿ ಕಂದಾಯ ಸಿಬ್ಬಂದಿ ಶ್ಯಾಮ್ ಹಾಗೂ ಬ್ರೋಕರ್ ಗುತ್ತಿಗೆದಾರ ಕೇಶವ ನನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ .

ಕಂದಾಯ ಬಾಕಿ ,ನೀರಿನ ತೆರಿಗೆ ಸೇರಿದಂತೆ ಸಾರ್ವಜನಿಕರು  ಕಟ್ಟಿದ್ದ ಲಕ್ಷಾಂತರ ರೂ ಗಳನ್ನು   ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿದೆ .ಕೇಶವ ಶಂಕರಪುರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ 

ಅಜ್ಜಂಪುರ :ಜಾತಿನಿಂದನೆ- ಲೈಂಗಿಕ ದೌರ್ಜನ್ಯ ಯತ್ನ :ಐವರು ಅಂದರ್


 ಚಿಕ್ಕಮಗಳೂರು :ಪತ್ನಿಯೊಂದಿಗೆ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಯುವಕರ ಗುಂಪೊಂದು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಅಜ್ಜಂಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅಕ್ಷಯ್ ಹಾಕೆ   ಮಂಜಾನಾಯ್ಕ ತನ್ನ ಪತ್ನಿಯೊಂದಿಗೆ ಅಂತರಗಟ್ಟೆ ದುರ್ಗಾಂಬ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ .

6 ಜನ ಯುವಕರ ಗುಂಪು ಪತ್ನಿ ಶೀಲಾ ಬಾಯಿಯ ಸೊಂಟಕ್ಕೆ ಕೈ ಹಾಕಿ ಸೀರೆ ಎಳೆದಿದ್ದು ಇದನ್ನು ಪ್ರಶ್ನಿಸಲು ತೆರಳಿದ ಮಂಜನಾಯ್ಕ್ ಮೇಲೆ ಹಲ್ಲೆಯನ್ನೂ ಮಾಡಿ ಗಾಯಗೊಳಿಸಿದ್ದಾರೆ ಎಂದು ತಿಳಿ ಸಿದ್ದಾರೆ .

ಅಜ್ಜಂಪುರ ಠಾಣೆಯಲ್ಲಿ ನೀಡಿದ ದೂರು ಆಧರಿಸಿ ಯೋಗೇಶ್, ಮನು, ಸಂತೋಷ್ ಶಶಿಕುಮಾರ್ ಹಾಗೂ ಶಿವಕುಮಾರ್ ರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ .


ಚಾರ್ಮಾಡಿ ಘಾಟಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶ


 ಚಿಕ್ಕಮಗಳೂರು :ಭಾರಿ ಮಳೆಯಿಂದ ಕಳೆದ 2ವರ್ಷಗಳಿಂದ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಚಾರ್ಮಾಡಿ ಘಾಟಿಯಲ್ಲಿ ಕೊನೆಗೂ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ .

ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿ ಕೆ.ಎನ್ . ರಮೇಶ್ ಆದೇಶ ನೀಡಿದ್ದಾರೆ .
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್, 6ಚಕ್ರದ ಲಾರಿಗಳು, ಟೆಂಪೋ ಸೇರಿದಂತೆ  ಇನ್ನಿತರೆ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ .
6 ಚಕ್ರ ಮೇಲ್ಪಟ್ಟ ವಾಹನಗಳಿಗೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ . ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ .
ಈ ಭಾಗದಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೊಟ್ಟಿಗೆಹಾರ , ಚಾರ್ಮಾಡಿ ಭಾಗದ ಗ್ರಾಮಸ್ಥರು ತೀವ್ರ ಒತ್ತಾಯವನ್ನು ಹೇರಿದ್ದನ್ನು  ಇಲ್ಲಿ ನೆನಪಿಸಬಹುದು .
ಜಿಲ್ಲಾಡಳಿತ ಆದೇಶದಿಂದಾಗಿ ದಕ್ಷಿಣ ಕನ್ನಡ, ಉಡುಪಿ  ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ .

ಹೊಸ ಆಶಯ ಮೂಡಿಸಿರುವ ರೈತ ಪಂಚಾಯತ್


     ಚಿಕ್ಕಮಗಳೂರು; ಇದೇ ತಿಂಗಳ ೨೦ ರಂದು  ಮಧ್ಯಾಹ್ನ  ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಪಂಚಾಯತ್ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ .

ಕಾರ್ಯಕ್ರಮದ ಯಶಸ್ವಿಗೆ ಸಂಘಟಕರು ಟೊಂಕಕಟ್ಟಿ ನಿಂತಿದ್ದು  ಪ್ರತಿ ಹಳ್ಳಿ ಹಳ್ಳಿಗಳಿಗೂ ತಲುಪಿ ಸಭೆಗಳನ್ನು ನಡೆಸುತ್ತಿದ್ದಾರೆ .

ಹೊಸ ಕೃಷಿ ಕಾಯ್ದೆಯ ಸಾಧಕ ಬಾಧಕಗಳನ್ನು ಮನವರಿಕೆ ಮಾಡಿಕೊಡುವ ಕರಪತ್ರಗಳನ್ನು ಹಂಚಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದಾರೆ .

ಐಕ್ಯ ಹೋರಾಟ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ .

ಅಂದು ನಡೆಯುವ ಕಾರ್ಯಕ್ರಮ ರೈತ ಹೋರಾಟದಲ್ಲಿ  ಹೊಸ ಭರವಸೆ - ಆಶಯ -ಹೆಜ್ಜೆ ಗುರುತನ್ನು ಮೂಡಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ .

ಹೊಸ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿ ಈಗಾಗಲೇ ೧೦೦ ದಿನಗಳನ್ನು ಪೂರೈಸಿದ್ದು 'ದಕ್ಷಿಣ ಭಾರತದಲ್ಲಿಯೂ ಹೋರಾಟವನ್ನು ತೀವ್ರಗೊಳಿಸುವ ಕಹಳೆ  ರೈತ ಪಂಚಾಯತ್ ನಲ್ಲಿ ಮೊಳಗಲಿದೆ . 


ಮಂಗಳವಾರ, ಮಾರ್ಚ್ 16, 2021

ಕೆಂಪೇಗೌಡರ ಬದಲು ಅದಾನಿಗೆ ಕೆಂಪುಹಾಸು !! !!


 ಕೆಂಪೇಗೌಡರ ಅಭಿಮಾನಿಗಳು ಈಗ ಮಾತನಾಡಬೇಕಿದೆ. ಅಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೇವನಹಳ್ಳಿಯಲ್ಲೇ ಹುಟ್ಟಿ ಬೆಳೆದ ಟಿಪ್ಪು ಸುಲ್ತಾನ್ ಹೆಸರು ಸೂಕ್ತ ಎಂದು ಗಿರೀಶ್ ಕಾರ್ನಾಡ್ ಅಭಿಪ್ರಾಯ ವ್ಯಕ್ತಪಡಿಸಿದಾಗ ಗದ್ದಲ ಎಬ್ಬಿಸಿದವರೆಲ್ಲರೂ ಈಗ ಮಾತನಾಡಬೇಕಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಕೆಂಪೇಗೌಡ ಏರ್ ಪೋರ್ಟ್ ಎಂಬ ಬೋರ್ಡಿನ ಪಕ್ಕದಲ್ಲೇ ಅದಾನಿ ಏರ್ ಪೋರ್ಟ್ ಎಂಬ ಬೋರ್ಡ್ ಕಾಣಿಸಿಕೊಳ್ಳಲಿದೆ. ಇದು ಕೆಂಪೇಗೌಡರಿಗೆ ಮಾತ್ರವಲ್ಲದೆ ಇಡೀ ಕನ್ನಡಿಗರಿಗೆ ಮಾಡುವ ಅವಮಾನವಾಗಿದೆ.

ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿನ ತನ್ನ ಉಳಿಕೆ ಪಾಲಿನ ಷೇರನ್ನೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. 2021-22ರ ಹಣಕಾಸು ವರ್ಷದಲ್ಲಿ ಆಸ್ತಿಗಳ ನಗದೀಕರಣದ ಮೂಲಕ 2.5 ಲಕ್ಷ ಕೋಟಿ ರೂ. ಸಂಗ್ರಹಣೆ ಸಂಬಂಧ ತನ್ನ ಪಾಲನ್ನು ಮಾರಾಟ ಮಾಡಲು  ಸಿದ್ಧತೆ ನಡೆಸಿದೆ. ಹಾಗೇನಾದರೂ ಆದರೆ ಮಂಗಳೂರು ಏರ್ ಪೋರ್ಟ್ ನಂತೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ಏರ್ ಪೋರ್ಟ್ ಕೂಡಾ ಅದಾನಿ (ಅದಾನಿಯೇ ಷೇರು ಖರೀದಿಸಿದರೆ) ಏರ್ ಪೋರ್ಟ್ ಆಗಲಿದೆ.

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ(ಎಎಐ) ಷೇರು ಹಿಂತೆಗೆತ ಸಂಬಂಧ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಲಿದ್ದು, ಈ ವಿಷಯವು ಕೇಂದ್ರದ ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಶೇ.13 ಹಾಗೂ ದೆಹಲಿಯ ವಿಮಾನ ನಿಲ್ದಾಣದಲ್ಲಿ ಶೇ.26ರಷ್ಟು ಷೇರನ್ನು ಹೊಂದಿದೆ. ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಗಳನ್ನು ಈಗಾಗಲೇ ಸಚಿವಾಲಯ ಆರಂಭಿಸಿದ್ದು, ಸಂಪುಟದ ಅಂಗೀಕಾರ, ವಿವಿಧ ಇಲಾಖೆಗಳ ಅನುಮೋದನೆ ಪಡೆಯುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.

ಕೆಂಪೇಗೌಡರು ಕೇವಲ ಯಾವುದೋ ಒಂದು ಜಾತಿಗೆ ಸೀಮಿತರಾದವರಲ್ಲ. ಕೆಂಪೇಗೌಡ ಎಂದರೆ ಕನ್ನಡಿಗರ ಅಸ್ಮಿತೆಯ ಪ್ರಶ್ನೆ. ಬಹುಶಃ ನಾನು ಕೆಂಪೇಗೌಡರ ಅಭಿಮಾನಿ ಅಲ್ಲ ಎನ್ನುವ ಕನ್ನಡಿಗ ಕರ್ನಾಟಕದಲ್ಲಿ ಇರಲಿಕ್ಕಿಲ್ಲ. ಈಗ ಕೆಂಪೇಗೌಡ ಅಭಿಮಾನಿಗಳೆಲ್ಲರೂ ಬೆಂಗಳೂರು ವಿಮಾನ ನಿಲ್ದಾಣ ಖಾಸಗೀಕರಣದ ವಿರುದ್ದ ಹೋರಾಟ ಮಾಡಬೇಕಿದೆ. 

ಖಾಸಗೀಕರಣವಾದರೂ ಕೆಂಪೇಗೌಡರ ಹೆಸರು ಹಾಗೇ ಉಳಿಯುತ್ತೆ, ಬೋರ್ಡ್ ಬದಲಾಯಿಸುವುದಿಲ್ಲ ಎಂಬಂತ ಹೇಳಿಕೆಗಳನ್ನು ಸರ್ಕಾರ ನೀಡಬಹುದು. ಕೇಂದ್ರ ಸರ್ಕಾರದ ಷೇರು ಇಲ್ಲವೆಂದ ಮೇಲೆ, ಸಂಪೂರ್ಣ ಮಾರಾಟ  ಮಾಡಿದ ಮೇಲೆ ಅದು ಖಾಸಗಿಯಷ್ಟೆ. ಇಂದಲ್ಲ ನಾಳೆ ಕೆಂಪೇಗೌಡರ ಹೆಸರನ್ನು ಅಳಿಸಿ ಹಾಕುವುದಂತೂ ನಿಜ. ಜನರ ವಿರೋಧಕ್ಕೆ ಹೆದರಿ ಈಗ ಕೆಂಪೇಗೌಡ ಏರ್ ಪೋರ್ಟ್ ಎಂಬ ಬೋರ್ಡಿನ ಪಕ್ಕದಲ್ಲೇ ಅದಾನಿ ಏರ್ ಪೋರ್ಟ್ ಎಂಬ ಸಣ್ಣ ಬೋರ್ಡ್ ಹಾಕಬಹುದು. ಕಾಲಕ್ರಮೇಣ ಕೆಂಪೇಗೌಡ ಹೆಸರಿನ ಬೋರ್ಡ್ ಅನ್ನು ಕಿತ್ತು ಹಾಕುವುದಂತೂ ಸ್ಪಷ್ಟ. ಹಾಗಾಗಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗಿಕರಣವನ್ನೇ ಕನ್ನಡಿಗರು ವಿರೋಧಿಸಬೇಕಿದೆ.


- ನವೀನ್ ಸೂರಿಂಜೆ

ಮೀಸಲು ಅರಣ್ಯ ವಿರೋಧಿಸಿ ಮತ್ತೆ ಚುನಾವಣೆ ಬಹಿಷ್ಕಾರ :ಸರಣಿ ಸಭೆ


 ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿಗೆ ಕಂಟಕಪ್ರಾಯವಾಗಿರುವ ಹುಲಿಯೋಜನೆ, ಮೀಸಲು ಅರಣ್ಯ ,ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಕಾರಕ್ಕೆ ಸಿದ್ಧತೆ ನಡೆದಿದೆ .

ಯೋಜನೆ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯ್ತಿಗಳಿಗೆ ಈ ಹಿಂದೆ ನಡೆದ ಚುನಾವಣೆಯನ್ನು ಜನ ಬಹಿಷ್ಕರಿಸಿದ್ದರು.

ಮತ್ತೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ನಾಮಪತ್ರ ಸಲ್ಲಿಸದಂತೆ ಸರಣಿ ಸಭೆಗಳು ನಡೆಯುತ್ತಿವೆ . ಬಹುತೇಕ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳು ಕಡಿಮೆ ಇವೆ .

ಕಳೆದ 1ವಾರದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಣಿ ಸಭೆಗಳನ್ನು ನಡೆಸಿ ಚುನಾವಣೆಯನ್ನು ಬಹಿಷ್ಕರಿಸುವಂತೆ ಜನ ನಿರ್ಧರಿಸಿದ್ದಾರೆ .

ಒಂದೆರಡು ಕಡೆ ನಾಮಪತ್ರ ಸಲ್ಲಿಕೆ ಆಗಿದ್ದರೂ ಅದನ್ನು ಹಿಂದೆ ತೆಗೆಸುವ ವಿಶ್ವಾಸವನ್ನು ಜನ ಹೊಂದಿದ್ದಾರೆ .

ಮುಳ್ಳಯ್ಯನಗಿರಿ ಮೀಸಲು ಅರಣ್ಯ ಘೋಷಣೆ ಪ್ರಸ್ತಾವನೆ ಸರ್ಕಾರದ ಮುಂದೆ ಇದ್ದು ಯಾವುದೇ ಕ್ಷಣದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಗಳು ಇವೆ .

ಪಶ್ಚಿಮಘಟ್ಟಕ್ಕೆ ವಿಶೇಷ ಸ್ಥಾನಮಾನ -ಎಲ್ ಶಂಕರ್ ಪ್ರತಿಪಾದನೆ


 ಚಿಕ್ಕಮಗಳೂರು: ಪಶ್ಚಿಮಘಟ್ಟ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ  ಬಿ. ಎಲ್. ಶಂಕರ್ ಪ್ರತಿಪಾದಿಸಿದ್ದಾರೆ .

ಪೂರ್ವೋತ್ತರ ರಾಜ್ಯಗಳಿಗೆ ನೀಡಿರುವ ವಿಶೇಷ ಸ್ಥಾನಮಾನವನ್ನು ಪಶ್ಚಿಮಘಟ್ಟ ಪ್ರದೇಶಕ್ಕೆ ನೀಡುವ ಅಗತ್ಯವಿದೆ. ದೀರ್ಘ ಕಾಲದ ಹೋರಾಟಕ್ಕೆ ಪೀಠಿಕೆ ಹಾಕುವ ಅಗತ್ಯವಿದ್ದು ಈ ಕುರಿತು ವಿಧಾನಸಭಾಧ್ಯಕ್ಷರು ವಿಶೇಷ ಸಭೆ ಕರೆಯಲು ಮುಂದಾಗಿದ್ದಾರೆ ಎಂದರು .

ಉತ್ತರ ಭಾರತದ 6 ರಾಜ್ಯಗಳು ವಿಶೇಷ ವಲಯಕ್ಕೆ ಸೇರ್ಪಡೆಗೊಂಡು ವಿಶೇಷ ಸ್ಥಾನಮಾನವನ್ನು ಪಡೆದಿದೆ .ತೆರಿಗೆ ಹಾಗೂ ಜನಪ್ರಾತಿನಿಧ್ಯ ದಲ್ಲೂ ವಿನಾಯಿತಿ ಇದ್ದು ಈ ರೀತಿಯ ವಿನಾಯಿತಿಗಳು ಪಶ್ಚಿಮಘಟ್ಟ ಪ್ರದೇಶಕ್ಕೆ ಸಲ್ಲಬೇಕಾಗಿದೆ ಎಂದು ಹೇಳಿದರು .

ಕಾಯಿದೆ ಅಗತ್ಯ :ಸರ್ಫೆಸಿ ಕಾಯಿದೆಯಿಂದ ಕಾಫಿ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುತ್ತಿದ್ದು ಉದ್ಯಮದ ರಕ್ಷಣೆಗೆ ಹೊಸ ಕಾಯ್ದೆ ರೂಪಿಸಲು ಕೇಂದ್ರ ಮೇಲೆ ಒತ್ತಡ ತರಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು .

ಶೃಂಗೇರಿಯಲ್ಲಿ ಸರ್ಕಾರಿ ಜಾಗ ಮಾರಾಟ: 7ಜನರ ವಿರುದ್ಧ ಪ್ರಕರಣ


 ಚಿಕ್ಕಮಗಳೂರು :ನದಿಪಾತ್ರದ ಖರಾಬು ಜಮೀನು ಮಾರಾಟ ಹಾಗೂ ನೋಂದಣಿ ಮಾಡಿದ ಆರೋಪದ ಮೇಲೆ ಶೃಂಗೇರಿ ಠಾಣೆಯಲ್ಲಿ 7ಜನರ ವಿರುದ್ಧ ಪ್ರಕರಣ ದಾಖಲಾಗಿದೆ .

ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ವಿ ಎಂ ಬೆಳ್ಳಚ್ಚಾರ್ ಹಾಗೂ ಖರೀದಿ ಮಾಡಿದ ಆರೋಪದಡಿ ಕಲ್ಮಕ್ಕಿ ಪ್ರದೀಪ್ ಮೇಲೆ ಪ್ರಕರಣ ದಾಖಲಾಗಿದೆ .

ನೋಂದಣಿ ಮಾಡಿದ ಆರೋಪದಡಿ ಕೊಪ್ಪ ಉಪ ನೋಂದಣಾಧಿಕಾರಿ ಎಸ್ ಅನಿತಾ , ಕಂಪ್ಯೂಟರ್ ನಿರ್ವಾಹಕರಾದ ಎಚ್ ಎನ್  ಕಿರಣ್ ,ನೇತ್ರಾವತಿ ಸಾಕ್ಷಿದಾರರಾದ ಅಗಸನಹಳ್ಳಿ ಬಿ ವಿ ಭಾಸ್ಕರ್, ಎಸ್ ಕುಮಾರ್ ವಿರುದ್ಧ  ದೂರು ದಾಖಲಾಗಿರುವುದನ್ನು ಉಪನೋಂದಣಾಧಿಕಾರಿ ಚಲುವರಾಜ್ ಖಚಿತಪಡಿಸಿದ್ದಾರೆ .

2016 ಡಿಸೆಂಬರ್ 12 ರಂದು ಶೃಂಗೇರಿ ಉಪನೋಂದಣಿ ಕಚೇರಿಯಲ್ಲಿ  ನದಿಪಾತ್ರದ ಖರಾಬು ಜಮೀನನ್ನು ನೋಂದಣಿ ಮಾಡಲಾಗಿತ್ತು .

ಸೋಮವಾರ, ಮಾರ್ಚ್ 15, 2021

ಬಿಎಸ್ಸೆನ್ನೆಲ್ ಕಚೇರಿಗೆ ಬೆಂಕಿ: ಸುಟ್ಟು ಕರಕಲಾದ ಕೇಬಲ್ ಗಳು


 ಚಿಕ್ಕಮಗಳೂರು :ಒಣಗಿದ ತರಗೆಲೆಗಳಿಗೆ ಹಚ್ಚಿದ ಬೆಂಕಿ ಇಲ್ಲಿನ ದೂರವಾಣಿ ಮುಖ್ಯಕಚೇರಿಗೆ ಪಸರಿಸಿ ಭಾರಿ ಪ್ರಮಾಣದ ಕೇಬಲ್ ಗಳು ಸುಟ್ಟು ಕರಕಲಾಗಿವೆ 

ಬೆಲ್ಟ್  ರಸ್ತೆಗೆ ಹೊಂದಿಕೊಂಡಂತಿರುವ ದೂರಸಂಪರ್ಕ ಇಲಾಖೆಯ ಮುಖ್ಯ ಕಚೇರಿ ಬಳಿ ಸಾಕಷ್ಟು ತರಗೆಲೆಗಳು ಬಿದ್ದಿದ್ದವು .ಅದಕ್ಕೆ ಯಾರೊ ಬೆಂಕಿ ಹಚ್ಚಿದ್ದಾರೆ .

ಬ ಗಾಳಿಯ ರಭಸಕ್ಕೆ ವೇಗವಾಗಿ ಉರಿದು  ಜ್ವಾಲೆಗಳು ಪಕ್ಕದಲ್ಲೇ ಇದ್ದ ದೂರಸಂಪರ್ಕ ಇಲಾಖೆಗೂ ಪಸರಿಸಿದೆ . ಅಲ್ಲಿ ಶೇಖರಿಸಿಟ್ಟಿದ್ದ ಭಾರಿ ಪ್ರಮಾಣದ ಕೇಬಲ್ ಗಳನ್ನು ಅಗ್ನಿ ಆಹುತಿ ಪಡೆದಿದೆ .

ಕಟ್ಟಡ  ಭದ್ರವಾಗಿದ್ದ ಹಿನ್ನೆಲೆಯಲ್ಲಿ ಬೆಂಕಿ ಒಳಗೆ ಆವರಿಸಿಲ್ಲ . ಇದರಿಂದಾಗಿ ಉಪಕರಣಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ .  

ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ . ನಷ್ಟದ ಪ್ರಮಾಣ ಇನ್ನಷ್ಟೇ ತಿಳಿಯಬೇಕಾಗಿದೆ 

ನಗರಸಭೆಗೆ ಚುನಾವಣೆಗೆ ಒತ್ತಾಯಿಸಿ ಪ್ರತಿಭಟನೆ

 ಚಿ


ಚಿಕ್ಕಮಗಳೂರು .: ನಗರಸಭೆಗೆ ಚುನಾವಣೆ ನಡೆಯದೆ ಎರಡು ವರ್ಷ ಕಳೆದಿದ್ದು ಈ ತಕ್ಷಣ ಚುನಾವಣೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಎದುರು ಪ್ರತಿಭಟನೆ ಮಾಡಿದರು  

       ಶಾಸಕ ಸಿಟಿ ರವಿ  , ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಪಿ  ಮಂಜೇಗೌಡ ಮಾತನಾಡಿ ಶಾಸಕ ಸಿ.ಟಿ ರವಿ  ಮೀಸಲಾತಿ  ವಿರುದ್ಧ ತಮ್ಮ    ಪಕ್ಷದ ಸದಸ್ಯರಿಂದಲೇ ತಡೆಯಾಜ್ಞೆ ತಂದು ಉದ್ದೇಶಪೂರ್ವಕವಾಗಿ ಚುನಾವಣೆ ನಡೆಯದಂತೆ ಮಾಡಿದ್ದಾರೆಂದು ಆರೋಪಿಸಿದರು .

      ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ನಗರಸಭೆ ಮಾಜಿ ಸದಸ್ಯೆ ಸುರೇಖ ಸಂಪತ್ ರಾಜ್ ,    ಮಾಜಿ ಸದಸ್ಯ ರೂಬೆನ್ ಮೊಸಸ್ ಮಾತನಾಡಿ ಸ್ವಂತ ಕ್ಷೇತ್ರವನ್ನು ಸರಿಪಡಿಸಿ ಕೊಳ್ಳಲಾಗದ ಶಾಸಕ ಸಿ.ಟಿ. ರವಿ ಬೇರೆ ರಾಜ್ಯ ಸರಿಪಡಿಸಲು ಹೋರಟಿರುವುದು ಹಾಸ್ಯಾಸ್ಪದ ಎಂದರು.

      ನಗರ ಕಾಂಗ್ರೆಸ್ ಅಧ್ಯಕ್ಷ   ತನೋಜ್ ಮಾತನಾಡಿ  ಕೂಡಲೇ ನಗರಸಭೆ ಚುನಾವಣೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಶಾಸಕ ಸಿಟಿ ರವಿ ಮನೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

    ಮಹಿಳಾ ಕಾಂಗ್ರೆಸ್ಸಿನ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಸಿಡಿಎ ಮಾಜಿ ಅಧ್ಯಕ್ಷ ಅನೀಫ್,  ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ ಎಂ ಸಂದೀಪ್ ಇತರರು, ಉಪಸ್ಥಿತರಿದ್ದರು.

ತರೀಕೆರೆ ಶಾಸಕರ ದೌರ್ಜನ್ಯ :ಸಿಎಂ ಪುತ್ರನ ಮುಂದೆ ಕುಟುಂಬಸ್ಥರ ಕಣ್ಣೀರು

 ಚಿಕ್ಕಮಗಳೂರು :ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತರೀಕೆರೆ ಕ್ಷೇತ್ರದ ಶಾಸಕ  ಸುರೇಶ್ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನೊಂದ ಕುಟುಂಬಸ್ಥರು ಸಿಎಂ ಪುತ್ರ ವಿಜಯೇಂದ್ರ ನ ಮುಂದೆ ಕಣ್ಣೀರು ಹಾಕಿದ ಘಟನೆ ನಡೆದಿದೆ .



ರೀಕೆರೆ ಲಕ್ಕವಳ್ಳಿ ಸಮೀಪ ಚಿಕ್ಕಮಗಳೂರು ಮೂಲದ ಪ್ರಸನ್ನ 7 ವರ್ಷದ ಹಿಂದೆ  50 ಎಕರೆ  ಜಮೀನು ಖರೀದಿ ಮಾಡಿದ್ದರು.

ಕಳೆದ ಒಂದು ವರ್ಷದಿಂದ ತರೀಕೆರೆ ಶಾಸಕ ಸುರೇಶ್ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಆರೋಪ ಮಾಡಿದ  ಪ್ರಸನ್ನ ಕುಟುಂಬ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಶಾಸಕರು ಹಿಂಬಾಲಕರ ಮೂಲಕ ಹಲ್ಲೆ ನಡೆಸುತ್ತಿದ್ದಾರೆಂದು ಆರೋಪಿಸಿದರು.

ನ್ಯಾಯ  ಇಲ್ಲವೇ ದಯಾಮರಣ ಕೊಡಿ ಎಂದು ಆಕ್ರೋಶ ಹೊರಹಾಕಿ ಬಿಕ್ಕಿ ಬಿಕ್ಕಿ ಅತ್ತರು .ಪೊಲೀಸ್ ಠಾಣೆಗೆ ದೂರು ನೀಡಿದರೆ ನ್ಯಾಯ ಸಿಗುತ್ತಿಲ್ಲ ಎಂದು ಕುಟುಂಬಸ್ಥರು ದೂರಿದರು 

ಚಿಕ್ಕಮಗಳೂರು ನಗರದ ಖಾಸಗಿ ಕಾರ್ಯಕ್ರಮದಲ್ಲಿ  ಈ  ಘಟನೆ ನಡೆದಿದ್ದು ವಿಜಯೇಂದ್ರ ಕ್ಷಣಕಾಲ ಮುಜುಗರಕ್ಕೆ ಒಳಗಾದರು .

ಹೆಲಿಕಾಪ್ಟರ್ ಗೆ ಪೊಲೀಸ್ ಕಾವಲು- ವ್ಯಾಪಕ ಟೀಕೆ


 ಚಿಕ್ಕಮಗಳೂರು: ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರ ಹೆಲಿಕಾಪ್ಟರಿಗೆ ಪೋಲಿಸ್ ಕಾವಲು ಹಾಕಿದ ಅಧಿಕಾರಿಗಳ ಕ್ರಮ ಟೀಕೆಗೆ ಗುರಿಯಾಗಿದೆ .ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಶಾಸಕ ಸಿ .ಟಿ .ರವಿ ತಮಿಳುನಾಡಿನಿಂದ

ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು  .ಐಡಿಎಸ್ ಜಿ ಕಾಲೇಜು ಬಳಿ ಹೆಲಿಕಾಪ್ಟರನ್ನು ನಿಲ್ಲಿಸಿದ್ದು 6 ಕ್ಕೂ ಅಧಿಕ ಪೊಲೀಸರು ಅದನ್ನು ಕಾಯುತ್ತಾ , ಹರಟೆ ಹೊಡೆಯುತ್ತಾ  ನಿಂತಿದ್ದರು .

ಮುಖ್ಯಮಂತ್ರಿಗಳು ಸೇರಿದಂತೆ ಅತಿ ಗಣ್ಯರು ಆಗಮಿಸುವ ಹೆಲಿಕಾಪ್ಟರಿಗೆ ರಕ್ಷಣೆ ನೀಡುವುದು ಸಾಮಾನ್ಯ , ಆದರೆ     ಶಾಸಕರು ಬಂದಿದ್ದ  ಹೆಲಿಕಾಪ್ಟರ್ ಗೆ ಇಷ್ಟೊಂದು ರಕ್ಷಣೆ ನೀಡುವ ಅಗತ್ಯ ಇತ್ತೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಅಂತಹ ಅಗತ್ಯತೆ ಇದ್ದಲ್ಲಿ ಖಾಸಗಿ ಭದ್ರತೆಯನ್ನು ನಿಯೋಜಿಸಿ ಕೊಳ್ಳಬೇಕಾಗಿತ್ತು  ಎನ್ನುವ ಮಾತುಗಳು ಕೇಳಿಬರುತ್ತಿವೆ  .

ಸಿಡಿ ಪ್ರಕರಣ :ಡಿಕೆಶಿ ಹೆಸರು ಥಳಕು- ಶಾಸಕ ರವಿ ಅಚ್ಚರಿ

 ಚಿಕ್ಕಮಗಳೂರು :ಸಿಡಿ ಪ್ರಕರಣದಲ್ಲಿ ಡಿಕೆಶಿ ತನ್ನ ಹೆಸರನ್ನ ಯಾಕೆ ಥಳಕು ಹಾಕುತ್ತಿದ್ದಾರೆ ಎನ್ನುವುದು  ಗೊತ್ತಾಗ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಅಚ್ಚರಿ ವ್ಯಕ್ತಪಡಿಸಿದ್ದಾರೆ .

ಜಾರಕಿಹೊಳಿ ಸಿಡಿ ಪ್ರಕರಣ  ಕರ್ನಾಟಕ ರಾಜಕಾರಣಕ್ಕೆ ಗೌರವ ತರುವ ವಿಷಯವಲ್ಲ ಎಂದು ಹೇಳಿದ್ದಾರೆ 

ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಕರಣದ ತನಿಖೆಯಾಗಲಿ ಪ್ರೊಡ್ಯೂಸರ್, ಡೈರಕ್ಟರ್, ಆ್ಯಕ್ಟರ್ ಯಾರೆಂದು ಗೊತ್ತಾಗುತ್ತೆ ಎಂದರು .

ಹಿಂದೆ ಮೌಲ್ಯಧಾರಿತ ರಾಜಕೀಯದ ಚರ್ಚೆ ನಡೆಯುತ್ತಿತ್ತು.ಈಗ ಸಿಡಿ ಆಧಾರಿತ ರಾಜಕೀಯದ ಚರ್ಚೆ ನಡೆಯುತ್ತಿದೆ ಎಂದು ಬೇಸರ ಹೊರ ಹಾಕಿದರು.

 ಮೌಲ್ಯಧಾರಿತವೋ... ಸಿಡಿ ಆಧಾರಿತ ರಾಜಕಾರಣ ಬೇಕೋ, ಎಲ್ಲರೂ ಯೋಚಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು .


ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಬೇಕು. ನಮಗೆ ನಾವೇ ಪರಿಮಿತ ಹಾಕಿಕೊಳ್ಳೋದು ಮುಖ್ಯ ಎಂದರು . 


ಶುಕ್ರವಾರ, ಮಾರ್ಚ್ 12, 2021

ಸಿಡಿ ಪ್ರಕರಣದಲ್ಲಿ ಆಲ್ದೂರು ಯುವಕ ವಶಕ್ಕೆ :ಜಿಲ್ಲೆಯಲ್ಲಿ ಸಂಚಲನ


 ಚಿಕ್ಕಮಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಆಲ್ದೂರಿನ  ಯುವಕನೊಬ್ಬನನ್ನು  ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ .

ಸಹಜವಾಗಿ ಇದು ಜಿಲ್ಲೆಯಲ್ಲಿ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದ್ದು ,  ಈ ಯುವಕ ಯಾರು ಎನ್ನುವ ಚರ್ಚೆ ಎಲ್ಲೆಡೆ ಕೇಳಿಬರುತ್ತಿವೆ .

ಆಲ್ದೂರು  ಪಟ್ಟಣದ ಗ್ರಾಮ ಪಂಚಾಯ್ತಿ  ಮಾಜಿ ಪದಾಧಿಕಾರಿಯ ಪುತ್ರ  ಎನ್ನಲಾಗಿದ್ದು ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಎಂದು ಹೇಳಲಾಗುತ್ತಿದೆ .  ಯುವಕ ಬೆಂಗಳೂರಿನಲ್ಲಿ ನೆಲೆಸಿದ್ದ .

ಜಿಲ್ಲೆಯ ಇನ್ನಷ್ಟು ಯುವಕರು ಖೆಡ್ಡಾಕ್ಕೆ ಬೀಳುವ ಸಾಧ್ಯತೆಗಳು ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ .

ರಾಜ್ಯದಲ್ಲಿ ಬೆಳಕಿಗೆ ಬರುವ ಬಹುತೇಕ ಗಂಭೀರ ಪ್ರಕರಣಗಳಲ್ಲಿ ಜಿಲ್ಲೆಯ ಯುವಕರು ಥಳಕು ಹಾಕಿಕೊಳ್ಳುತ್ತಿರುವುದು   ಸಾಮಾನ್ಯವಾಗಿದೆ .


ಗುರುವಾರ, ಮಾರ್ಚ್ 11, 2021

ಮಲೆನಾಡಿಗೆ ಮಾರಕ ಯೋಜನೆಗಳು: ಸರಣಿ ಸಭೆಗೆ ನಿರ್ಧಾರ


 ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡ ಭಾಗವನ್ನು ಕಾಡುತ್ತಿರುವ ಮುಳ್ಳಯ್ಯನಗಿರಿ  ಮೀಸಲು ಅರಣ್ಯ , ಹುಲಿ ಸಂರಕ್ಷಣಾ ರೋಜನೆ, ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಸ್ಪಷ್ಟ ನಿಲುವಿಗೆ ಒತ್ತಾಯಿಸಿ ಸರಣಿ ಸಭೆಗಳು ಆರಂಭವಾಗಿದೆ .

ಮುಳ್ಳಯ್ಯನಗಿರಿ ,ಜಾಗರ, ಕೊಳಗಾಮೆ ,ಖಾಂಡ್ಯ, ಸಂಗಮೇಶ್ವರಪೇಟೆ  ಸೇರಿದಂತೆ ಹಲವು ಗ್ರಾಮಗಳ ಜನರು ಈಗಾಗಲೇ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ಮಾಡಿದ್ದಾರೆ .

ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಮೊದಲ ಹಂತದಲ್ಲಿ ಬಹಿಷ್ಕರಿಸಲಾಗಿದ್ದುಎರಡನೇ ಹಂತದ ಚಹನಾವಣೆ ದಿನಾಂಕ ಪ್ರಕಟವಾಗಿದ್ದು ಮುಂದಿನ ನಿರ್ಧಾರ  ಕುರಿತು ಚರ್ಚಿಸಲು ಸಭೆಗಳು ನಡೆಯುತ್ತಿವೆ .

ಮಲೆನಾಡ ಜನರ ಬದುಕಿಗೆ ಮಾರಕವಾಗಿರುವ ಈ ಯೋಜನೆಗಳ ಬಗ್ಗೆ ಸರ್ಕಾರ ಹಾಗೂ ನ್ಯಾಯಾಲಯದಿಂದ ಈವರೆಗೂ ಯಾವುದೇ ಸ್ಪಷ್ಟ ಆದೇಶ ಬಾರದಿರುವುದು ಜನರನ್ನು ಆತಂಕಕ್ಕೆ ದೂಡಿದೆ .

ಈ ಮಧ್ಯೆ ಚುನಾವಣೆ ಬಹಿಷ್ಕರಿಸುವ ನಿಟ್ಟಿನಲ್ಲಿ ಕೆಲವು ಗ್ರಾಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು , ಒಂದೊಮ್ಮೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ .



ಟಾಯ್ಲೆಟ್ ಮುಂದೆ ಸೆಲ್ಫಿ !!


 ಚಿಕ್ಕಮಗಳೂರು :ಶೀರ್ಷಿಕೆ ನೋಡಿ ಅಚ್ಚರಿಯಾಗಬಹುದು .

ತರೀಕೆರೆಯ ಸಾರ್ವಜನಿಕ ಶೌಚಾಲಯ ನೋಡಿದಾಗ ಯಾರಿಗಾದರೂ 1ಸೆಲ್ಫಿ ತೆಗೆದುಕೊಳ್ಳುವ ಮನಸ್ಸಾಗದೆ ಇರದು .

ಸಾರ್ವಜನಿಕ ಶೌಚಾಲಯಗಳೆಂದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇಂದಿಗೂ ಇದೆ . ನಿರ್ವಹಣೆ ಕೊರತೆ ಇದಕ್ಕೆ ಮುಖ್ಯ ಕಾರಣ .

ತರೀಕೆರೆಯಲ್ಲಿ ಇರುವ ಸಾರ್ವಜನಿಕ 11 ಶೌಚಾಲಯಗಳು ಇದಕ್ಕೆ ಭಿನ್ನ .  ಆಕರ್ಷಕ ಬಣ್ಣ ಹೊಡೆದು ಪ್ರಾಣಿ ಪಕ್ಷಿ ಸೇರಿದಂತೆ ವಿವಿಧ ಚಿತ್ತಾರಗಳನ್ನು ಬಿಡಿಸಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿವೆ .

ಹೊರಗಷ್ಟೇ ಸುಂದರವಲ್ಲ .ಒಳಗೂ ಅಚ್ಚುಕಟ್ಟಾಗಿ ಶುಚಿತ್ವ ಕಾಪಾಡಲಾಗಿದೆ.     ಶೌಚಾಲಯ ಬಳಸಿದವರು ಸೆಲ್ಫಿ ತೆಗೆದುಕೊಂಡು ಹೋಗುವುದು ಸಾಮಾನ್ಯ  .ಇದರ ಹಿಂದಿನ ರೂವಾರಿ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಮತ್ತವರ ಸಿಬ್ಬಂದಿ.


 

ಬುಧವಾರ, ಮಾರ್ಚ್ 10, 2021

ಸಿಡೀ ಹಗರಣ :ಕಾನೂನು ತಂದರೆ ವಿಧಾನಸೌಧದಲ್ಲಿ ಕೊಠಡಿ ಬುಕ್ -ಮಲಾಲಿ ವ್ಯಂಗ್ಯ


 ಚಿಕ್ಕಮಗಳೂರು: ರಾಸಲೀಲೆ ಸೇರಿದಂತೆ ರಾಜಕಾರಣಿಗಳ ವಿರುದ್ಧ ಸುಳ್ಳು ಆರೋಪ ಹೊರಿಸಿ ಸೀಡಿಗಳನ್ನು ಬಿಡುಗಡೆ ಮಾಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮಲಾಲಿ ಅಭಿಪ್ರಾಯಿಸಿದ್ದಾರೆ .

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಇಂತಹ ಕಾನೂನುಗಳು ರಾಜಕಾರಣಿಗಳಿಗೆ ಪರವಾನಿಗೆ ನೀಡಿದಂತೆ ಆಗುತ್ತದೆ. ಮುಂದೆ ಇಂಥ ಕೃತ್ಯಗಳಿಗೆ ವಿಧಾನ ಸೌಧದಲ್ಲಿ ಕೊಠಡಿಗಳನ್ನು ಕಾದಿರಿಸುತ್ತಾರೆ ಎಂದು ವ್ಯಂಗ್ಯವಾಡಿದರು .

ವೇಶ್ಯಾವಾಟಿಕೆಯನ್ನು ಮೊದಲು ನಿಲ್ಲಿಸಬೇಕು ರಾಜಕಾರಣಿಗಳು ತಮ್ಮ ಮನೆ ,ಕುಟುಂಬ ,ಸಾಮಾಜಿಕ ಜೀವನದ ಬಗ್ಗೆ ಯೋಚನೆ ಮಾಡುವುದು ಅಗತ್ಯ .ಕೆಲವು ರಾಜಕಾರಣಿಗಳಿಗೆ ಇದೊಂದು ಹವ್ಯಾಸವಾಗಿ ಹೋಗಿದೆ.ಈವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ  ಎಂದು ಬೇಸರ ಹೊರಹಾಕಿದರು .

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ದೊಡ್ಡ ದುರಂತ ಈ ಘಟನೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ ,ಯಾರನ್ನೊ  ಹಣಿಯಬೇಕು, ರಾಜೀನಾಮೆ ಕೊಡಿಸಬೇಕು ಎನ್ನುವ ಉದ್ದೇಶದಿಂದ ವ್ಯವಸ್ಥಿತವಾಗಿ ಮಾಡಿದ ಪಿತೂರಿ ಎಂದು ಟೀಕಿಸಿದರು .

ಸುಳ್ಳು ಆರೋಪ ಹೊರಿಸಿ ಈ ರೀತಿ ಮಾಡುವವರ ವಿರುದ್ಧ ಮೊಕದ್ದಮೆ ಹೂಡುವುದು ಸ್ವಾಗತಾರ್ಹ .ಖಾಸಗಿ ವ್ಯಕ್ತಿತ್ವ  ಹಾಳು ಮಾಡುವುದನ್ನು ನಿಲ್ಲಿಸಬೇಕು .ಕಾನೂನಿನಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು .

ಮಂಗಳವಾರ, ಮಾರ್ಚ್ 9, 2021

ಜನಪ್ರತಿನಿಧಿಗಳ ರಾಜೀನಾಮೆಗೆ ಜೆಡಿಎಸ್ ಆಗ್ರಹ


 ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಗಳು ಇದ್ದರೂ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ಕಾಳಜಿ ಇಲ್ಲದಿರುವುದರಿಂದ ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್ ಎಚ್ ದೇವರಾಜ್ ಒತ್ತಾಯಿಸಿದ್ದಾರೆ .

ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಪ್ರಭಾವಿಗಳು. ಆದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾತ್ರ ಶೂನ್ಯ ಎಂದು ವ್ಯಂಗ್ಯವಾಡಿದ ಅವರು ಇವರು ಕೇವಲ ಭಾಷಣಕ್ಕೆ ಸೀಮಿತರಾಗಿದ್ದಾರೆ ಎಂದು ಟೀಕಿಸಿದ್ದಾರೆ .

ರಾಜ್ಯ ಬಜೆಟ್ ನಲ್ಲಿ  ಜಿಲ್ಲೆಗೆ ಆದ್ಯತೆ ನೀಡದೆ ನಿರಾಸೆಯಾಗಿದೆ .  ವೈದ್ಯಕೀಯ , ಎಂಜಿನಿಯರಿಂಗ್ ಕಾಲೇಜು ಇನ್ನಿತರೆ ಯೋಜನೆಗಳ ಪ್ರಸ್ತಾವವೂ ಇಲ್ಲ ಎಂದು ಛೇಡಿಸಿದರು .

ಕ್ಷೇತ್ರದ ಶಾಸಕ ಸಿ ಟಿ ರವಿ ತಮಿಳುನಾಡಿನ ಉಸ್ತುವಾರಿಯನ್ನು ಹೊತ್ತಿದ್ದು ಗೊತ್ತಿಲ್ಲದ ಭಾಷೆಯಲ್ಲಿ ಮಾತನಾಡಿ ಕ್ಷೇತ್ರದ ಜನ ತಲೆತಗ್ಗಿಸುವಂತೆ ಮಾಡುತ್ತಿದ್ದರೆಂದು ವಿಷಾದಿಸಿದರು . 

ಗುರುವಾರ, ಮಾರ್ಚ್ 4, 2021

ಧರ್ಮದ ಆಧಾರದಲ್ಲಿ ತಾರತಮ್ಯ ಸಲ್ಲದು :ದೇವಜ್ಯೋತಿ ರೇ


 ಚಿಕ್ಕಮಗಳೂರು,ಮಾ.೦೪: ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದೆ  ಜನತೆಯನ್ನು ಸಮಾನವಾಗಿ ಕಾಣುವಂತೆ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ದೇವಜ್ಯೋತಿ ರೇ ಹೇಳಿದರು.

 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನಡೆದ ೧೩ನೇ ತಂಡದ ೪ನೇ 67 ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ

 


ಕಾನೂನಿನ ಅಡಿಯಲ್ಲಿ ಸಮರ್ಪಕವಾಗಿ  ಕಾರ್ಯ ನಿರ್ವಹಿಸಬೇಕು ಎಂದರು 

ಬುಧವಾರ, ಮಾರ್ಚ್ 3, 2021

ಮುಳ್ಳಯ್ಯನಗಿರಿ ರಕ್ಷಿತ ಅರಣ್ಯ ಘೋಷಣೆ ವಿರೋಧಿಸಿ ಮತ್ತೆ ಪ್ರತಿಭಟನೆ


 ಚಿಕ್ಕಮಗಳೂರು :ಮುಳ್ಳಯ್ಯನಗಿರಿ ಮೀಸಲು ಅರಣ್ಯ ಘೋಷಣೆ ಪ್ರಸ್ತಾವನೆ ವಿರೋಧಿಸಿ ಚಿಕ್ಕಮಗಳೂರಿನಲ್ಲಿ ಮತ್ತೆ ಪ್ರತಿಭಟನೆ ನಡೆದಿದೆ .

ಮುಳ್ಳಯ್ಯನಗಿರಿ ವ್ಯಾಪ್ತಿಯ ಗ್ರಾಮಸ್ಥರುವಿವಿಧ ಪಕ್ಷ ಸಂಘಟನೆಗಳ ಆಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು  .

ಮುಳ್ಳಯ್ಯನಗಿರಿ ಮೀಸಲು ಅರಣ್ಯ ವಿರೋಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ಪ್ರತಿಭಟನಾ ಸಭೆ ನಡೆದು ಸರ್ಕಾರ ಈ ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಿದರು .

ಉದ್ದೇಶಿತ ಪ್ರಸ್ತಾವನೆಯಿಂದ ಈ ಭಾಗದ ಗ್ರಾಮಸ್ಥರ ಬದುಕಿನ ಮೇಲೆ ಗಂಭೀರ ಪರಿಣಾಮ ಎದುರಾಗಲಿದೆ .ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಕಾನೂನು ಜಾರಿ ನೆಪದಲ್ಲಿ ಜನರಿಗೆ ಕಿರುಕುಳ ನೀಡುವ ಸಾಧ್ಯತೆ ಇದೆ ಎಂದು ಆರೋಪಿಸಿದರು .

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...