ಶುಕ್ರವಾರ, ಮಾರ್ಚ್ 12, 2021

ಸಿಡಿ ಪ್ರಕರಣದಲ್ಲಿ ಆಲ್ದೂರು ಯುವಕ ವಶಕ್ಕೆ :ಜಿಲ್ಲೆಯಲ್ಲಿ ಸಂಚಲನ


 ಚಿಕ್ಕಮಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಆಲ್ದೂರಿನ  ಯುವಕನೊಬ್ಬನನ್ನು  ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ .

ಸಹಜವಾಗಿ ಇದು ಜಿಲ್ಲೆಯಲ್ಲಿ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದ್ದು ,  ಈ ಯುವಕ ಯಾರು ಎನ್ನುವ ಚರ್ಚೆ ಎಲ್ಲೆಡೆ ಕೇಳಿಬರುತ್ತಿವೆ .

ಆಲ್ದೂರು  ಪಟ್ಟಣದ ಗ್ರಾಮ ಪಂಚಾಯ್ತಿ  ಮಾಜಿ ಪದಾಧಿಕಾರಿಯ ಪುತ್ರ  ಎನ್ನಲಾಗಿದ್ದು ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಎಂದು ಹೇಳಲಾಗುತ್ತಿದೆ .  ಯುವಕ ಬೆಂಗಳೂರಿನಲ್ಲಿ ನೆಲೆಸಿದ್ದ .

ಜಿಲ್ಲೆಯ ಇನ್ನಷ್ಟು ಯುವಕರು ಖೆಡ್ಡಾಕ್ಕೆ ಬೀಳುವ ಸಾಧ್ಯತೆಗಳು ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ .

ರಾಜ್ಯದಲ್ಲಿ ಬೆಳಕಿಗೆ ಬರುವ ಬಹುತೇಕ ಗಂಭೀರ ಪ್ರಕರಣಗಳಲ್ಲಿ ಜಿಲ್ಲೆಯ ಯುವಕರು ಥಳಕು ಹಾಕಿಕೊಳ್ಳುತ್ತಿರುವುದು   ಸಾಮಾನ್ಯವಾಗಿದೆ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...