ಶನಿವಾರ, ಮಾರ್ಚ್ 27, 2021

ಗಾಳಿಕೆರೆ: ಕುರುಡು ಭಕ್ತಿಯೂ... ಅರಣ್ಯ ಇಲಾಖೆಯೂ


 ಚಿಕ್ಕಮಗಳೂರು : ಬಾಬಾಬುಡನ್ ಗಿರಿ ಶ್ರೇಣಿಯ ಚಂದ್ರದ್ರೋಣ ಪರ್ವತದ ನೆತ್ತಿಯ ಮೇಲಿರುವ 'ಗಾಳಿಕೆರೆ' ಎಂಬ ಚೆಂದದ ಕೆರೆಯು ಕುರುಡು ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುವ ಮೊದಲು ಹೇಗಿತ್ತು ಈಗ ಹೇಗಿದೆ ನೋಡಿ .

ಅರಣ್ಯ ಇಲಾಖೆ ಎಂಥಾ ಮೂಢತ್ವದ ಕೆಲಸ ಮಾಡಿದೆಯೆಂದರೆ, ಶೋಲಾ ಹುಲ್ಲುಗಾವಲಿನ ಅತಿ ಸೂಕ್ಷ್ಮ ಪ್ರದೇಶವಾದ ಹಾಗೂ ಐದು ಸಾವಿರ ಅಡಿ ಎತ್ತರದ ಪ್ರದೇಶದಲ್ಲಿನ ಅಮೂಲ್ಯ ಜಲಮೂಲವನ್ನು ರಕ್ಷಿಸುವ ಸಲುವಾಗಿ ಭಕ್ತರನ್ನು, ಪ್ರವಾಸಿಗರನ್ನು ಹಾಗೂ ಪ್ರಾಣಿಬಲಿಯನ್ನು ನಿರ್ಬಂಧಿಸುವ ಬದಲು ಕೆರೆಗೆ ಕಬ್ಬಿಣದ ಬೇಲಿಯನ್ನು ಅಳವಡಿಸುವ ಮೂಲಕ ಪ್ರಾಣಿಗಳು ನೀರು ಕುಡಿಯಲು ಬರದಂತೆ ನಿರ್ಬಂಧಿಸಿದೆ.! 

ಅಸಲಿಗೆ ಜನರು ಕೆರೆಗೆ ಇಳಿಯದಂತೆ ನಿರ್ಬಂಧಿಸುವ ಸಲುವಾಗಿ ಬೇಲಿ ನಿರ್ಮಿಸಿರುವುದಾದರೂ, ಎರಡು ಮೂರು ಗೇಟು ಅಳವಡಿಸಿರುವುದರಿಂದ ಜನ ಎಂದಿನಂತೆ ಸಲೀಸಾಗಿ ಕೆರೆಯೊಳಗೆ ಇಳಿದು ಎಗ್ಗಿಲ್ಲದೆ ಮಲಿನಗೊಳಿಸುತ್ತಿದ್ದಾರೆ. ಈ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮಿಶ್ರಿತ ಹೊಲಸು ನೀರನ್ನು  ಕುಡಿಯುವ ಪ್ರಾಣಿಗಳ ಗತಿಯೇನಾಗುತ್ತಿರಬಹುದು ಎಂಬ ಊಹೆಯೂ ಇಲಾಖೆಗಿದ್ದಂತಿಲ್ಲ.! 

 ಅನಾಹುತಕಾರಿ ಸಂಗತಿಯೆಂದರೆ, ಇಲ್ಲಿಂದ ಹಾಗೂ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ 


ಮಗ್ಗುಲಿಗಿರುವ ಚಿಕ್ಕ ತೊರೆಯಿಂದ ಹೊರಹೋಗುವ ನೀರು ಇನ್ನೊಂದಷ್ಟು ಹಳ್ಳಗಳನ್ನು‌ ಸೇರಿಕೊಂಡು ಭದ್ರಾ ಮೀಸಲು ಅರಣ್ಯದೊಳಗೆ ಹರಿಯುತ್ತದೆ. ಕಾಡಿನ ಕಡೆಗೆ ಹರಿಯುತ್ತಿರುವ ಈ ತ್ಯಾಜ್ಯಮಿಶ್ರಿತ ನೀರು ಜೈವಿಕ ವ್ಯವಸ್ಥೆಯನ್ನು ಹೇಗೆ ನಿರಂತರವಾಗಿ ಕೊಲ್ಲುತ್ತಿರಬಹುದು ಎಂಬುದನ್ನು ಅರಣ್ಯ ಇಲಾಖೆ ಮನಗಂಡಿದೆಯಾ...!?  ಎಚ್ಚೆತ್ತುಕೊಳ್ಳಲು ಇದು ಸಕಾಲ. 


*ಕಾರ್ತಿಕಾದಿತ್ಯ ಬೆಳ್ಗೋಡು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...