ಬುಧವಾರ, ಮಾರ್ಚ್ 17, 2021

ಅಜ್ಜಂಪುರ :ಜಾತಿನಿಂದನೆ- ಲೈಂಗಿಕ ದೌರ್ಜನ್ಯ ಯತ್ನ :ಐವರು ಅಂದರ್


 ಚಿಕ್ಕಮಗಳೂರು :ಪತ್ನಿಯೊಂದಿಗೆ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಯುವಕರ ಗುಂಪೊಂದು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಅಜ್ಜಂಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅಕ್ಷಯ್ ಹಾಕೆ   ಮಂಜಾನಾಯ್ಕ ತನ್ನ ಪತ್ನಿಯೊಂದಿಗೆ ಅಂತರಗಟ್ಟೆ ದುರ್ಗಾಂಬ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ .

6 ಜನ ಯುವಕರ ಗುಂಪು ಪತ್ನಿ ಶೀಲಾ ಬಾಯಿಯ ಸೊಂಟಕ್ಕೆ ಕೈ ಹಾಕಿ ಸೀರೆ ಎಳೆದಿದ್ದು ಇದನ್ನು ಪ್ರಶ್ನಿಸಲು ತೆರಳಿದ ಮಂಜನಾಯ್ಕ್ ಮೇಲೆ ಹಲ್ಲೆಯನ್ನೂ ಮಾಡಿ ಗಾಯಗೊಳಿಸಿದ್ದಾರೆ ಎಂದು ತಿಳಿ ಸಿದ್ದಾರೆ .

ಅಜ್ಜಂಪುರ ಠಾಣೆಯಲ್ಲಿ ನೀಡಿದ ದೂರು ಆಧರಿಸಿ ಯೋಗೇಶ್, ಮನು, ಸಂತೋಷ್ ಶಶಿಕುಮಾರ್ ಹಾಗೂ ಶಿವಕುಮಾರ್ ರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...