ಗುರುವಾರ, ಮಾರ್ಚ್ 11, 2021

ಮಲೆನಾಡಿಗೆ ಮಾರಕ ಯೋಜನೆಗಳು: ಸರಣಿ ಸಭೆಗೆ ನಿರ್ಧಾರ


 ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡ ಭಾಗವನ್ನು ಕಾಡುತ್ತಿರುವ ಮುಳ್ಳಯ್ಯನಗಿರಿ  ಮೀಸಲು ಅರಣ್ಯ , ಹುಲಿ ಸಂರಕ್ಷಣಾ ರೋಜನೆ, ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಸ್ಪಷ್ಟ ನಿಲುವಿಗೆ ಒತ್ತಾಯಿಸಿ ಸರಣಿ ಸಭೆಗಳು ಆರಂಭವಾಗಿದೆ .

ಮುಳ್ಳಯ್ಯನಗಿರಿ ,ಜಾಗರ, ಕೊಳಗಾಮೆ ,ಖಾಂಡ್ಯ, ಸಂಗಮೇಶ್ವರಪೇಟೆ  ಸೇರಿದಂತೆ ಹಲವು ಗ್ರಾಮಗಳ ಜನರು ಈಗಾಗಲೇ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ಮಾಡಿದ್ದಾರೆ .

ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಮೊದಲ ಹಂತದಲ್ಲಿ ಬಹಿಷ್ಕರಿಸಲಾಗಿದ್ದುಎರಡನೇ ಹಂತದ ಚಹನಾವಣೆ ದಿನಾಂಕ ಪ್ರಕಟವಾಗಿದ್ದು ಮುಂದಿನ ನಿರ್ಧಾರ  ಕುರಿತು ಚರ್ಚಿಸಲು ಸಭೆಗಳು ನಡೆಯುತ್ತಿವೆ .

ಮಲೆನಾಡ ಜನರ ಬದುಕಿಗೆ ಮಾರಕವಾಗಿರುವ ಈ ಯೋಜನೆಗಳ ಬಗ್ಗೆ ಸರ್ಕಾರ ಹಾಗೂ ನ್ಯಾಯಾಲಯದಿಂದ ಈವರೆಗೂ ಯಾವುದೇ ಸ್ಪಷ್ಟ ಆದೇಶ ಬಾರದಿರುವುದು ಜನರನ್ನು ಆತಂಕಕ್ಕೆ ದೂಡಿದೆ .

ಈ ಮಧ್ಯೆ ಚುನಾವಣೆ ಬಹಿಷ್ಕರಿಸುವ ನಿಟ್ಟಿನಲ್ಲಿ ಕೆಲವು ಗ್ರಾಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು , ಒಂದೊಮ್ಮೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ .



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...