ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿ ಇರುವ ಬಸವನಹಳ್ಳಿ( ದಂಟರಮಕ್ಕಿ ) ಕೆರೆ ಅಭಿವೃದ್ಧಿಗೆ ಕೋಟಿ ರೂ ಬಿಡುಗಡೆ ಆಗಿದೆ .
ಶಾಸಕ ಸಿ. ಟಿ. ರವಿ ಅವರ ಕೋರಿಕೆ ಹಿನ್ನೆಲೆಯಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗಿದೆ .
ಕೆರೆಯ ಸಂಪೂರ್ಣ ಅಭಿವೃದ್ಧಿ , ಕೊಳಚೆ ನೀರು ಬರುವುದನ್ನು ತಡೆಗಟ್ಟುವುದು, ಉದ್ಯಾನವನ ನಿರ್ಮಾಣ ,ವಿವೇಕಾನಂದ ಪ್ರತಿಮೆ ಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ .
ಜಲಕ್ರೀಡೆ ,ಸೈಕಲ್ ಟ್ರ್ಯಾಕ್' ಆ್ಯಂಪಿ ಥಿಯೇಟರ್ , ಕಲಾಕೃತಿಗಳ ಮ್ಯೂಸಿಯಂ ಇನ್ನಿತರೆ ಕೆಲಸ ಮಾಡಲು ಉದ್ದೇಶಿಸಲಾಗಿದೆ .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ