ಚಿಕ್ಕಮಗಳೂರು :ನದಿಪಾತ್ರದ ಖರಾಬು ಜಮೀನು ಮಾರಾಟ ಹಾಗೂ ನೋಂದಣಿ ಮಾಡಿದ ಆರೋಪದ ಮೇಲೆ ಶೃಂಗೇರಿ ಠಾಣೆಯಲ್ಲಿ 7ಜನರ ವಿರುದ್ಧ ಪ್ರಕರಣ ದಾಖಲಾಗಿದೆ .
ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ವಿ ಎಂ ಬೆಳ್ಳಚ್ಚಾರ್ ಹಾಗೂ ಖರೀದಿ ಮಾಡಿದ ಆರೋಪದಡಿ ಕಲ್ಮಕ್ಕಿ ಪ್ರದೀಪ್ ಮೇಲೆ ಪ್ರಕರಣ ದಾಖಲಾಗಿದೆ .
ನೋಂದಣಿ ಮಾಡಿದ ಆರೋಪದಡಿ ಕೊಪ್ಪ ಉಪ ನೋಂದಣಾಧಿಕಾರಿ ಎಸ್ ಅನಿತಾ , ಕಂಪ್ಯೂಟರ್ ನಿರ್ವಾಹಕರಾದ ಎಚ್ ಎನ್ ಕಿರಣ್ ,ನೇತ್ರಾವತಿ ಸಾಕ್ಷಿದಾರರಾದ ಅಗಸನಹಳ್ಳಿ ಬಿ ವಿ ಭಾಸ್ಕರ್, ಎಸ್ ಕುಮಾರ್ ವಿರುದ್ಧ ದೂರು ದಾಖಲಾಗಿರುವುದನ್ನು ಉಪನೋಂದಣಾಧಿಕಾರಿ ಚಲುವರಾಜ್ ಖಚಿತಪಡಿಸಿದ್ದಾರೆ .
2016 ಡಿಸೆಂಬರ್ 12 ರಂದು ಶೃಂಗೇರಿ ಉಪನೋಂದಣಿ ಕಚೇರಿಯಲ್ಲಿ ನದಿಪಾತ್ರದ ಖರಾಬು ಜಮೀನನ್ನು ನೋಂದಣಿ ಮಾಡಲಾಗಿತ್ತು .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ