ಚಿಕ್ಕಮಗಳೂರು :ಇಲ್ಲಿನ ನಗರಸಭೆಯಲ್ಲಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ .
ನಗರಸಭೆ ಆಯುಕ್ತ ಬಸವರಾಜ್ ನೀಡಿದ ದೂರನ್ನು ಆಧರಿಸಿ ಕಂದಾಯ ಸಿಬ್ಬಂದಿ ಶ್ಯಾಮ್ ಹಾಗೂ ಬ್ರೋಕರ್ ಗುತ್ತಿಗೆದಾರ ಕೇಶವ ನನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ .
ಕಂದಾಯ ಬಾಕಿ ,ನೀರಿನ ತೆರಿಗೆ ಸೇರಿದಂತೆ ಸಾರ್ವಜನಿಕರು ಕಟ್ಟಿದ್ದ ಲಕ್ಷಾಂತರ ರೂ ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿದೆ .ಕೇಶವ ಶಂಕರಪುರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ