ಚಿಕ್ಕಮಗಳೂರು :ಬೆಲೆ ಇಲ್ಲದೆ ಕಂಗಾಲಾದ ಕೋಸು ಬೆಳೆದ ರೈತರೊಬ್ಬರು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿ ಕೋಸನ್ನು ಕಿತ್ತು ಹಾಕಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ನಡೆದಿದೆ
ಹಿರೇಗೌಜದ ಬಸವರಾಜು ಎಂಬುವರು ತನ್ನ 1ಎಕರೆ ಜಮೀನಿನಲ್ಲಿ ಸುಮಾರು ೪೦ ಸಾವಿರ ರೂ ವೆಚ್ಚ ಮಾಡಿ ಕೋಸನ್ನು ಹಾಕಿದ್ದರು .
ಕೋಸು ಬೆಳೆದು ಕಟಾವಿಗೆ ಬಂದಿದ್ದು ಸೂಕ್ತ ಬೆಲೆ ಇಲ್ಲದೆ ಉತ್ಪಾದನಾ ವೆಚ್ಚವು ಸರಿದೂಗಿಸಲು ಅಸಾಧ್ಯವಾಗಿದೆ . ಇದರಿಂದ ಬೇಸತ್ತ ರೈತ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಕೋಸನ್ನು ನೆಲಸಮ ಮಾಡಿ ಆಕ್ರೋಶ ಹೊರಹಾಕಿದ್ದಾರೆ .
ಸರ್ಕಾರದ ತಪ್ಪು ನೀತಿ ,ದಲ್ಲಾಳಿಗಳ ಹಾವಳಿಯಿಂದ ಅತ್ತ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ .ಇತ್ತ ಕಡಿಮೆ ಬೆಲೆಗೆ ಗ್ರಾಹಕರಿಗೆ ವಸ್ತುಗಳು ಎಟಕುತ್ತಿಲ್ಲ .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ