ಶೃಂಗೇರಿ: ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರೂ ಆದ ಶಿವಶಂಕರ್ (ಶೃಂಗೇರಿ ಶಿವಣ್ಣ) ಸುಳ್ಳು ಜಾತಿ ಪ್ರಮಾಣ ಪತ್ರವನ್ನು, ಜಾತಿಯ ಕುರಿತಾದ ಸುಳ್ಳು ಮಾಹಿತಿಯನ್ನು ನೀಡಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದಿರುವುದು ದೃಢಪಟ್ಟಿದೆ .
ಸರ್ಕಾರಕ್ಕೆ ವಂಚಿಸಿರುವುದು ವಿಚಾರಣಾ ಅವಧಿಯಲ್ಲಿ ಧೃಢಪಟ್ಟಿದೆ ಎಂಬುದಾಗಿ ನಾಗರೀಕ ಹಕ್ಕುಜಾರಿ ನಿರ್ದೇಶನಾಲಯ ಧೃಢಪಡಿಸಿದೆ.
ಶಿವಶಂಕರ ಬಿನ್ ಬಂಗಾರಸ್ವಾಮಿ ಇವರ ಜಾತಿ ವಿಚಾರಣೆ ನಡೆಸುವಂತೆ ಪ್ರಶಾಂತ್ ಇಲಾಖೆಯನ್ನು ಕೋರಿದ್ದರು.
ವಿಚಾರಣೆ ಕೈಗೊಂಡ ಇಲಾಖೆ ದಾಖಲಾತಿಗಳನ್ನು ಸಂಗ್ರಹಿಸಿ ವರದಿಯನ್ನು ಸಲ್ಲಿಸಿದೆ. ಈ ವರದಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದಾಗ ಇವರು ಹಿಂದುಳಿದ ಪ್ರವರ್ಗ – 1 ರಲ್ಲಿ ಬರುವ ಬೋವಿ ಜಾತಿಗೆ ಸೇರಿರುತ್ತಾರೆ ಎಂದು ಧೃಢಪಟ್ಟಿದೆ ಎಂದು ತಿಳಿದುಬಂದಿದೆ .
ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಪಡೆಯುವ ಉದ್ದೇಶದಿಂದ ಶೃಂಗೇರಿ ತಹಸೀಲ್ದಾರ್ ರಿಗೆ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಯ ಭೋವಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನಿಜವಾದ ಪರಿಶಿಷ್ಟ ಜಾತಿಯ ಜನರನ್ನು ಮತ್ತು ಸರ್ಕಾರವನ್ನು ವಂಚಿಸಿದ್ದಾರೆ ಎಂಬುದಾಗಿ ವಿಚಾರಣಾ ಅವಧಿಯಲ್ಲಿ ಸಾಬೀತಾಗಿದೆ ಎಂದು ಉಲ್ಲೇಖಿಸಲಾಗಿದೆ.
ಶಿವಶಂಕರ್ ಅವರು ಪಡೆದಿರುವ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸುವ ಸಲುವಾಗಿ ಅಧಿಕಾರಿಗಳು ಮುಂದಿನ ಕ್ರಮಕ್ಕೆ ಸೂಚಿಸಿದ್ದಾರೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ