ಚಿಕ್ಕಮಗಳೂರು :ಇಲ್ಲಿನ ನಗರಸಭೆಯಲ್ಲಿ ನಡೆದಿರುವ ಆಸ್ತಿ ತೆರಿಗೆ ಪಾವತಿ ಚಲನ್ ಮೇಲೆ ನಕಲಿ ಸೀಲು ,ಸಹಿ ಹಾಕಿ ಹಣ ಗುಳುಂ ಮಾಡಿದ ೩೦ ಪ್ರಕರಣಗಳು ಬೆಳಕಿಗೆ ಬಂದಿವೆ.
ಚಲನ್ ಒಂದರಲ್ಲಿ ದಿನಾಂಕ ಮತ್ತು ಮೊಹರಿನ ದಿನಾಂಕದಲ್ಲಿ ಕಂಡುಬಿಟ್ಟೆ ವ್ಯತ್ಯಾಸದಿಂದ ಈ ಹಗರಣ ಬೆಳಕಿಗೆ ಬಂದಿತ್ತು .
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರಸಭೆ ಆಯುಕ್ತ ಬಿ ಸಿ ಬಸವರಾಜ್ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದು ೩೦ ಪ್ರಕಣಗಳು ಪತ್ತೆಯಾಗಿವೆ .
ಈ ಸಂಬಂಧ ಬಿಲ್ ಕಲೆಕ್ಟರ್ ಶ್ಯಾಮ್ ಹಾಗೂ ಗುತ್ತಿಗೆದಾರ ಕೇಶವ ವಿರುದ್ಧ ನಗರ ಠಾಣೆಗೆ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ .
ಕೇಶವ್ ಆಡಳಿತ ಬಿಜೆಪಿ ಪಕ್ಷದ ಸಕ್ರಿಯ ಸದಸ್ಯನಾಗಿದ್ದು ರಕ್ಷಣೆಗೆ ತೆರೆಮರೆಯ ಯತ್ನ ,ಒತ್ತಡಗಳು ಗಳು ನಡೆದಿವೆ .
ಈ ಮಧ್ಯೆ ಜಿಲ್ಲಾಧಿಕಾರಿಗಳು ನಗರಸಭೆಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಮುಂದಿನ ಕ್ರಮದ ಜೊತೆಗೆ ಬಿಲ್ ಕಲೆಕ್ಟರ್ ಶ್ಯಾಮ್ ನನ್ನು ಅಮಾನತು ಮಾಡುವಂತೆ ಸೂಚನೆ ನೀಡಿದ್ದಾರೆ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ