ಭಾನುವಾರ, ಜನವರಿ 31, 2021

ಅತ್ಯಾಚಾರ ಆರೋಪ : 6ಜನರ ಬಂಧನ



 ಚಿಕ್ಕಮಗಳೂರು:ಸುಮಾರು  1ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ .

ತಾಯಿ ನಿಧನರಾದ ಹಿನ್ನಲೆಯಲ್ಲಿ ಚಿಕ್ಕಮ್ಮನ ಮನೆಯಲ್ಲಿ ಇದ್ದು ಶೃಂಗೇರಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳ ಮೇಲೆ ಹದಿನೈದು ಜನರ ತಂಡ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಎನ್ನಲಾಗಿದೆ .

ಈ ವ್ಯಕ್ತಿಗಳು ದೂರು ನೀಡದಂತೆ ಬೆದರಿಕೆ ಹಾಕುತ್ತಿದ್ದು ,ಕೊನೆಗೂ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿದ್ದರು .

ಪ್ರಕರಣ ಸಂಬಂಧ ಈವರೆಗೆ 6 ಜನರನ್ನು ಬಂಧಿಸಲಾಗಿದೆ .ಉಳಿದವರು ತಲೆಮರೆಸಿಕೊಂಡಿದ್ದಾರೆ .ಪ್ರಕರಣ ರಾಜಕೀಯ ಸ್ವರೂಪ ಪಡೆದಿರುವುದರ ಜೊತೆಗೆ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ .

ಗುಪ್ತಶೆಟ್ಟಿಹಳ್ಳಿ ಜನರಿಂದ ಪ್ರತಿಭಟನೆ


 ಚಿಕ್ಕಮಗಳೂರು:. ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಆಲ್ದೂರು ಸಮೀಪದ ಗುಪ್ತಶೆಟ್ಟಿ ಜನರು ಜಿಲ್ಲಾ ಕೇಂದ್ರದಲ್ಲಿ ದಿಢೀರ್ ಮುಷ್ಕರ ಆರಂಭಿಸಿದ್ದಾರೆ .

ತಮ್ಮ ಸ್ವಗ್ರಾಮದಲ್ಲಿ 2ದಿನ ಮುಷ್ಕರ ನಡೆಸಿದ ಹಳ್ಳಿಗರು ಬೇಡಿಕೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಆಗಮಿಸಿ ಆಜಾದ್ ಮೈದಾನದಲ್ಲಿ ಮುಷ್ಕರ ಮುನ್ನಡೆಸಿದ್ದಾರೆ .

ಜಿಲ್ಲಾಧಿಕಾರಿ ಹರ್ಷಗುಪ್ತ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಮಧುಕರಶೆಟ್ಟಿ ಇದ್ದ ದಿನಗಳಲ್ಲಿ ಶ್ರೀಮಂತರ ಒತ್ತುವರಿಯನ್ನು ತೆರವುಗೊಳಿಸಿ ಮೃತರ ಕುಟುಂಬಗಳಿಗೆ ತಲಾ 2ಎಕರೆ ಜಮೀನನ್ನು ನೀಡಲಾಗಿತ್ತು.

ಅಂದು ಕೆಲವು ಸೌಲಭ್ಯಗಳನ್ನು ನೀಡಲು ಜಿಲ್ಲಾಡಳಿತ ಮುಂದಾಗಿದ್ದರು ನಂತರದ ದಿನಗಳಲ್ಲಿ ಸಂಪೂರ್ಣ ಕಡೆಗಣಿಸಲಾಗಿದೆ ಎನ್ನುವುದು ಮುಖ್ಯ ಆರೋಪ  .

ಕಳೆದ ಹಲವಾರು ವರ್ಷಗಳಿಂದ ಸೌಲಭ್ಯವಂಚಿತ ಈ ಜನರು ಅನೇಕ ಬಾರಿ ಪ್ರತಿಭಟನೆ ಮಾಡಿದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿ ಕಾಲಹರಣ ಮಾಡುತ್ತಿದ್ದಾರೆ ಎನ್ನುವ ಆರೋಪ ಮುಷ್ಕರ ನಿರತರದು .

ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ದಿಢೀರ್ ಮುಷ್ಕರ ಹೂಡಿರುವುದು ಅಧಿಕಾರಿಗಳನ್ನು ಕಸಿವಿಸಿ ಗೊಳಿಸಿದ್ದು, ಮುಷ್ಕರ ಕೈ ಬಿಡುವಂತೆ ಮಾಡಿದ ಮನವಿಗೆ ಸ್ಪಂದಿಸಿಲ್ಲ .

ಶನಿವಾರ, ಜನವರಿ 30, 2021

ಗೋರಕ್ಷಕರಿಗೆ ಜಾಮೀನು: ಭವ್ಯ ಸ್ವಾಗತ


 ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತನಿಕೋಡು ಮತ್ತು ಆಗುಂಬೆ ಚೆಕ್ ಪೋಸ್ಟ್ ಬಳಿ ಅಕ್ರಮ ಗೋ ಸಾಗಣೆ ತಡೆದ ಪ್ರಕರಣ ಸಂಬಂಧ ನಾಲ್ವರು ಬಂಧನಕ್ಕೆ ಒಳಗಾಗಿದ್ದರು .

ಬಂಧಿತರಿಗೆ ಜಾಮೀನು ದೊರೆತು ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ಅವರನ್ನು ಬಜರಂಗದಳ ಕಾರ್ಯಕರ್ತರು ಸ್ವಾಗತಿಸಿದರು .

ರವಿ, ನಾಗೇಶ್, ಸಂಜಯ್, ಆದರ್ಶ್ ರವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು .

ಗೋಹತ್ಯೆ ನಿಷೇಧ ಕಾಯ್ದೆ:ಅರಿವು ಮೂಡಿಸಿ -ಸಚಿವ ಪ್ರಭು ಚವ್ಹಾಣ್


 ಚಿಕ್ಕಮಗಳೂರು ಜ 30 : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿದ್ದು ಕಾಯ್ದೆಯ ಬಗ್ಗೆ ಜನಸಾಮಾನ್ಯರು, ರೈತರಲ್ಲಿ ಜಾಗೃತಿ ಮೂಡಿಸುವಂತೆ   ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಸಾಕಷ್ಟು ರೈತರು ಕರೆ ಮಾಡುತ್ತಿದ್ದು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ದೊರೆಯುತ್ತಿಲ್ಲ ಎಂದು ಹೇಳುತ್ತಿದ್ದು ವೈದ್ಯರು ತಕ್ಷಣ ಸ್ಪಂದಿಸಬೇಕೆಂದು ತಿಳಿಸಿದರು.

ಜಾನುವಾರುಗಳಿಗೆ ಸೂಕ್ತ ಔಷಧಿಗಳ ವ್ಯವಸ್ಥೆ ಇದ್ದರೂ ಕೆಲ ಪಶುವೈದ್ಯರು ಔಷಧಗಳನ್ನು ಹೊರಗಡೆಯಿಂದ ತರಲು ಚೀಟಿ ಬರೆದುಕೊಡುತ್ತಿರುವುದು  ಗಮನಕ್ಕೆ ಬಂದಿದೆ ಎಂದು  ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು .

ಎರಡು ಗೋಶಾಲೆ:ಪ್ರತಿ ತಾಲೂಕಿನಲ್ಲಿ ಗೋಮಾಳದ ಸ್ಥಳವನ್ನು ಗುರುತಿಸಿ ಗೋಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಿ ಖಾಸಗಿ ಗೋಶಾಲೆಗಳನ್ನು ತೆರೆಯಲು ಮುಂದಾದರೆ  ನೆರವಾಗಲು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚಿಂದ್ರ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರು ಪಾಲ್ಗೊಂಡಿದ್ದರು 


ರೈತ ಹೋರಾಟಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹ


 ಚಿಕ್ಕಮಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಗೆ ಬೆಂಬಲಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆ ವಿರೋಧಿಸಿ  ಇಲ್ಲಿನ ಗಾಂಧಿ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು . 

ವಿವಿಧ ಸಂಘಟನೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು .ಮತ್ತು ಕೊಪ್ಪ ತಾಲ್ಲೂಕಿನ ಹಾಗಲಗಂಜಿ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಿ ಹೋರಾಟವನ್ನು ಬೆಂಬಲಿಸಿದರು .

ಹುತಾತ್ಮ ದಿನಾಚರಣೆ: ಬಾಪೂಗೆ ನಮನ

ಚಿಕ್ಕಮಗಳೂರು,ಜ.೩೦: ರಾಷ್ಟ್ರಪಿತ ಮಹಾತ್ಮ ಗಾಂಧೀಯವರು ದೇಹ ತ್ಯಾಗ ಮಾಡಿದ ದಿನದ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿ ಕಛೇರಿ ಉದ್ಯಾನವನದಲ್ಲಿ  ಹುತಾತ್ಮರ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್, ಉಪವಿಭಾಗಾಧಿಕಾರಿ ಹೆಚ್.ಎಲ್. ನಾಗರಾಜ್  ಮಹತ್ಮಾ ಗಾಂಧೀಜಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.
 

ವಿಧಾನಪರಿಷತ್ ನಲ್ಲಿ ಮೊಬೈಲ್ ನಿಷೇಧ -ಸಭಾಪತಿಗಳ ಜೊತೆ ಚರ್ಚೆ: ಪ್ರಾಣೇಶ್


 ಚಿಕ್ಕಮಗಳೂರು: ವಿಧಾನಪರಿಷತ್ ಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸುವ ಕುರಿತು ಸಭಾಪತಿಗಳ ಜತೆ ಚರ್ಚಿಸುವುದಾಗಿ ಪರಿಷತ್ ಉಪ ಸಭಾಪತಿ ಎಂ. ಕೆ .ಪ್ರಾಣೇಶ್ ತಿಳಿಸಿದ್ದಾರೆ  .

ಪಕ್ಷದ ಕಚೇರಿಯಲ್ಲಿ ನೀಡಿದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೂತೆ ಮಾತನಾಡಿದ ಅವರು  ಸದನಕ್ಕೆ ಮೊಬೈಲನ್ನು ತೆಗೆದುಕೊಂಡು ಹೋಗುವ ಅವಶ್ಯಕತೆಯೇ ಇಲ್ಲ .ತುರ್ತು ಸಂದರ್ಭ ಬಳಸಬೇಕಾದಲ್ಲಿ ಅದಕ್ಕಾಗಿಯೇ ಜಾಗವನ್ನು ಮೀಸಲಿಡಲಾಗಿದೆ ಎಂದರು ಉಪಸಭಾಪತಿ ಸ್ಥಾನ ಅನಿರೀಕ್ಷಿತವಾಗಿ ಒಲಿದಿದೆ ಸದನದ  ಘನತೆ ಗೌರವವನ್ನು ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ .ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವುದಾಗಿ ಹೇಳಿದರು .

ಈ ಹಿಂದೆ ನಡೆದ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು .ಘಟನೆ ಸಂಬಂಧ ನೀಡಿರುವ ಮಧ್ಯಂತರ ವರದಿ ಬಗ್ಗೆ ಸಭಾಪತಿಗಳ ಜೊತೆ ಚರ್ಚಿಸಿದ್ದೇನೆ.  ಎಂದು ತಿಳಿಸಿದರು .

ಲಂಚಕ್ಕೆ ಬೇಡಿಕೆ :ಪ್ರಕರಣ ದಾಖಲು


 ಚಿಕ್ಕಮಗಳೂರು: ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಕಂದಾಯ ಸಚಿವ ಆರ್ ಅಶೋಕ್ ಅವರ ಮಾಜಿ ಪಿಎ ಗಂಗಾಧರ್ ವಿರುದ್ಧ ಶೃಂಗೇರಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂದಾಯ ಸಚಿವ ಆರ್ ಅಶೋಕ್ ಇದೇ ತಿಂಗಳ ೨೪ ರಂದು ಶೃಂಗೇರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ  ಅವರ ಆಪ್ತ ಸಹಾಯಕ ಗಂಗಾಧರ್  ಶೃಂಗೇರಿಯ ಸಬ್ ರಿಜಿಸ್ಟರ್ ಚೆಲುವರಾಜ್ ಅವರಿಂದ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ .

ಈ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಪ್ರಕಟವಾಗಿ ಸಚಿವರು ಹಾಗೂ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿತ್ತು .

ಈ ಹಿನ್ನೆಲೆಯಲ್ಲಿ ಸಚಿವರ ಆಪ್ತ ಸಹಾಯಕನನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು .

 ಈ ಮಧ್ಯೆ ಲಂಚ ಕೇಳಿದ ಆರೋಪದ ಬಗ್ಗೆ ಸಬ್ ರಿಜಿಸ್ಟರ್ ಠಾಣೆಗೆ ದೂರು ನೀಡಿದ್ದು ., ದೂರು ಹಿಂದೆ ಪಡೆಯುವಂತೆ ರಾಜಕೀಯ ಒತ್ತಡವೂ ಬಂದಿತ್ತು ಎನ್ನಲಾಗಿದೆ .ಕೊನೆಗೂ 3ದಿನಗಳ ಬಳಿಕ ಪ್ರಕರಣ ದಾಖಲಾಗಿದೆ .

ಗುರುವಾರ, ಜನವರಿ 28, 2021

ಪೊಲೀಸ್ ಸುಲಿಗೆ -ದಬ್ಬಾಳಿಕೆ :ವೀಡಿಯೋ ವೈರಲ್


 

ಚಿಕ್ಕಮಗಳೂರು :ಜಿಲ್ಲಾ ಕೇಂದ್ರದಲ್ಲಿ  ಸಂಚಾರಿ ಪೊಲೀಸರು ಮಾಡಬೇಕಾದ ಕೆಲಸಗಳನ್ನೆಲ್ಲ ಬಿಟ್ಟು ಕೇವಲ ವಸೂಲಿಗೆ ಇಳಿದಂತೆ ಕಾಣುತ್ತಿದೆ .

ಇದು ಮೇಲಿನ ಅಧಿಕಾರಿಗಳ ಆದೇಶದ ಫಲ . ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಬಕ ಪಕ್ಷಿಗಳಂತೆ  ನಿಲ್ಲುವ ಪೊಲೀಸರು , ದಾಖಲಾತಿ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎನ್ನುವ  ಆರೋಪ ಸಾಮಾನ್ಯವಾಗಿದೆ.

ಪ್ರತಿದಿನ ಇಂತಿಷ್ಟು ಪ್ರಕರಣ ದಾಖಲಿಸಿ ಹಣ ಸಂದಾಯ ಮಾಡುವಂತೆ ಗುರಿ ನಿಗದಿಪಡಿಸಿರಿವುದೇ ಇದಕ್ಕೆಲ್ಲ ಕಾರಣ.  ಸಿಕ್ಕ ಸಿಕ್ಕಲ್ಲಿ ವಾಹನ ನಿಲ್ಲಿಸಿ ಬರೆಹಾಕುವ ಪೊಲೀಸರು ಗುರಿಯನ್ನು ದಂಧೆಯಾಗಿ ಮಾಡಿಕೊಂಡಿರುವುದು ಸಾರ್ವಜನಿಕರ ಅಸಮಾಧಾನ 'ಟೀಕೆಗೂ ಗುರಿಯಾಗಿದೆ.

ಸಂಚಾರಿ ಪೊಲೀಸರು ಮುಖ ನೋಡಿ ಮಣೆ ಹಾಕುವ ಪ್ರವೃತ್ತಿಯನ್ನು ಮಾಡಿಕೊಂಡಿದ್ದಾರೆ . ಇಷ್ಟೆಲ್ಲ ನಡೆಯುತ್ತಿದ್ದರು  ಮೇಲಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ  

ಕಾಫಿ ಉದ್ಯಮದ ಸಂಕಷ್ಟ :ಮನವಿ ಸಲ್ಲಿಕೆ


 ಚಿಕ್ಕಮಗಳೂರು :ಕಾಫಿ ಉದ್ಯಮ ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಆಲ್ದೂರು ಬೆಳೆಗಾರರ ಸಂಘದ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಉತ್ಪಾದನಾ ವೆಚ್ಚ ಹೆಚ್ಚಳ, ಬೆಲೆಯಲ್ಲಿ ಏರಿಳಿಕೆ ,ಕಾಡುಪ್ರಾಣಿಗಳ ಹಾವಳಿ ,ಅಕಾಲಿಕ ಮಳೆಯಿಂದ ಆಗಿರುವ ಹಾನಿ ಇನ್ನಿತರೆ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು .

ಉದ್ಯಮದ ಸಮಸ್ಯೆಯ ಅರಿವಿದ್ದು ಎಲ್ಲಾ ವಿವರಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ .ಸದ್ಯವೇ ಇದಕ್ಕೆ ಪರಿಹಾರ ಸಿಗಲಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಭರವಸೆ ನೀಡಿದರು . ಬೆಳೆಗಾರರ ಸಂಘದ ಡಿ ಎಂ ವಿಜಯ್ ,ಸುರೇಶ್ ಇತರರು ಇದ್ದರು .

ಬುಧವಾರ, ಜನವರಿ 27, 2021

ಎಂ ಕೆ ಪ್ರಾಣೇಶ್ ಗೆ ಒಲಿದ ಉಪಸಭಾಪತಿ ಸ್ಥಾನ


 ಚಿಕ್ಕಮಗಳೂರು: ವಿಧಾನಪರಿಷತ್ ಉಪ ಸಭಾಪತಿ ಸ್ಥಾನ ಮತ್ತೆ ಕಾಫಿನಾಡು ಚಿಕ್ಕಮಗಳೂರಿಗೆ ಒಲಿದಿದೆ .

ಎಸ್. ಎಲ್. ಧರ್ಮೇಗೌಡ ಆತ್ಮಹತ್ಯೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ನಾಳೆ ಎಂ.ಕೆ.ಪ್ರಾಣೇಶ್ ನಾಮಪತ್ರ ಸಲ್ಲಿಸಲಿದ್ದಾರೆ .

ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಪ್ರತಿನಿಧಿಸುತ್ತಿರುವ ಎಂ .ಕೆ .ಪ್ರಾಣೇಶ್  ಮೂಡಿಗೆರೆಯವರು .ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಸಭಾಪತಿ ಸ್ಥಾನ ಜೆಡಿಎಸ್ ನ ಬಸವರಾಜ್ ಹೊರಟ್ಟಿಗೆ ಲಭಿಸಲಿದ್ದು ಮತ್ತೆ  ಬಿಜೆಪಿ ಜೆಡಿಎಸ್ ಭಾಯಿ ಭಾಯಿ ಆಗಿದೆ 

ದೆಹಲಿ ಘಟನೆ ಹಿಂದೆ ಖಲಿಸ್ಥಾನವಾದಿಗಳ ಕೈವಾಡ: ಸಂಸದೆ ಶೋಭಾ ಕರಂದ್ಲಾಜೆ ಆರೋಪ


 ಚಿಕ್ಕಮಗಳೂರು: ನಿನ್ನೆ ದೆಹಲಿಯಲ್ಲಿ ನಡೆದ ಘಟನೆ ಹಿಂದೆ ಖಾಲಿಸ್ತಾನ್ ಚಳವಳಿ ಹಾಗೂ ಉಮರ್ ಖಾಲಿದ್ ಬೆಂಬಲಿಗರ ಕೈವಾಡವಿದ್ದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಸಂಸತ್ ಸದಸ್ಯ ಶೋಭಾ ಕರಂದ್ಲಾಜೆ ಹೇಳಿದ್ದಾರೆ .

ಸುದ್ದಿಗಾರರ ಜೊತೆ ಮಾತನಾಡಿದ ಅವರು  ನಿಜವಾದ ರೈತರು ಚಳವಳಿಯ ನಾಯಕತ್ವವನ್ನು ವಹಿಸಿಕೊಂಡಿಲ್ಲ.ಕೆಂಪುಕೋಟೆ ಹತ್ತಿದವರು ರೈತರಲ್ಲ. ತಾವು ಈ ಹಿಂದೆಯೇ ಇದರ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾಗಿ ತಿಳಿಸಿದರು .

ರೈತರ ಹೆಸರಲ್ಲಿ ಹೋರಾಟವನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ಯತ್ನ ನಡೆದಿದೆ. ಇದಕ್ಕೆ ರೈತರು ಬಲಿಯಾಗಬಾರದು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು .

ಕಾಯ್ದೆಯಲ್ಲಿ ರೈತ ವಿರೋಧಿ ಅಂಶಗಳು ಇದ್ದರೆ ಚರ್ಚೆ ಮೂಲಕ ಬಗೆಹರಿಸಿಕೊಳ್ಳಲು, ತಿದ್ದುಪಡಿ ಮಾಡಲು ಸಾಧ್ಯವಿದೆ .ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ರೈತರು ಮಾತುಕತೆಗೆ ಬರುವಂತೆ ಮನವಿ ಮಾಡಿದ್ದಾರೆ .

ತೇಲಿ ಘಟನೆಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ವೈಫಲ್ಯವಿಲ್ಲ ಪೊಲೀಸರು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದಾರೆ .ಘಟನೆ ಎಲ್ಲ ಮಗ್ಗಲುಗಳನ್ನೂ ಪರಿಶೀಲಿಸಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು .

ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದು ಬಿಜೆಪಿಗರು ಎಂಬುದು ಸುಳ್ಳು ಆರೋಪ ಸರಿಯಲ್ಲ .ಇದೊಂದು ಅಪಪ್ರಚಾರ, ವ್ಯವಸ್ಥಿತ ಷಡ್ಯಂತ್ರ     ಇದೆ ಎಂದು ಆರೋಪಿಸಿದರು .

ಮಂಗಳವಾರ, ಜನವರಿ 26, 2021

ಮಲೆನಾಡ ಭಾಗದಲ್ಲಿ ಹಾರುವ ಕಪ್ಪೆ ಗೋಚರ


 ಚಿಕ್ಕಮಗಳೂರು: ಜಲ ಪಾದಗಳ ಸಹಾಯದಿಂದ ಎತ್ತರದ ಜಾಗದಿಂದ ತಗ್ಗು ಪ್ರದೇಶದ ಕಡೆಗೆ ಹಾರುವ ಕಪ್ಪೆಯೊಂದು ಕಾಣಿಸಿಕೊಂಡಿದೆ .

ಕೊಪ್ಪ ತಾಲೂಕಿನ ಗುಣವಂತೆಯ ಕೂಸು ವಳ್ಳಿಯ ಕಾರ್ತಿಕ್ ಅವರ ಮನೆಯ ಬಳಿ ಈ ಕಪ್ಪೆ ಗೋಚರಿಸಿದೆ .

ಮರದಿಂದ ನೆಲಕ್ಕೆ ಜಿಗಿದ ಕಪ್ಪೆಯು ಸ್ವಲ್ಪ ದೂರದವರೆಗೆ ಹಾರಿದೆ .ಪಕ್ಷಿಯೊಂದು ಅಟ್ಟಿಸಿಕೊಂಡು ಬಂದಾಗ ಕಪ್ಪೆ ಈ ರೀತಿ ಹಾರುವ ಮೂಲಕ ತನ್ನನ್ನು ರಚಿಸಿಕೊಂಡಿದೆ .

ಒಳ ಏಟುಗಳನ್ನು ಹತ್ತಿಕ್ಕಲು ಸಚಿವರ ಕರೆ


 ಚಿಕ್ಕಮಗಳೂರು: ದೇಶದ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಒಳ ಏಟುಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಹತ್ತಿಕ್ಕಬೇಕಾಗಿದೆ ಎಂದು ಅರಣ್ಯ ಸಚಿವ ಲಿಂಬಾವಳಿ ಕರೆ ನೀಡಿದ್ದಾರೆ .

ಜಿಲ್ಲಾ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು ಭಯೋತ್ಪಾದನೆ 'ಕೋಮು ದಳ್ಳುರಿ ಇನ್ನಿತರ ಅನೇಕ ಸಂಗತಿಗಳು ದೇಶದ ಸಾರ್ವಭೌಮತೆಗೆ ಅಪಾಯವನ್ನು ತಂದೊಡ್ಡುತ್ತವೆ ಎಂದು ಕಳವಳ ಹೊರಹಾಕಿದರು .

ಶಾಸಕ ಸಿ ಟಿ ರವಿ ,ವಿಧಾನ ಪರಿಷತ್ ಸದಸ್ಯ ಭೋಜೇಗೌಡ , ಜಿಲ್ಲಾ ಪರಿಷತ್ ಅಧ್ಯಕ್ಷೆ ಸುಜಾತಕೃಷ್ಣಪ್ಪ,ಉಪಾಧ್ಯಕ್ಷ ಸೋಮಶೇಖರ್  ಪಾಲ್ಗೊಂಡಿದ್ದರು .ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಆಧುನಿಕ ಬೈಕ್ ಗಳನ್ನು ವಿತರಿಸಲಾಯಿತು .



ಲಂಚ ಪ್ರಕರಣ : ಸಬ್ ರಿಜಿಸ್ಟಾರ್ ಗಂಗಾಧರ ಹೇಳಿದ್ದು ಏನು?


 ಚಿಕ್ಕಮಗಳೂರು :ಲಂಚ ಕೇಳದ ಬಗ್ಗೆ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್  ಹೇಳಿಕೆ

20ನೇ ತಾರೀಖು ವಾಟ್ಸಾಪ್ ಮೂಲಕ ಒಂದು ಕರೆ ಬಂದಿತ್ತು.24ನೇ ತಾರೀಖು ಸಚಿವರು ಬರ್ತಾರೆ ಸಿಗಿ ಎಂದರು

24 ನೇ ತಾರೀಖು ಬೆಳಗ್ಗೆ 10.30ಕ್ಕೆ ಫೋನ್ ಸಂಜೆ  ಸಿಗಲು ಹೇಳಿದ್ರು
ನಾನು ಸಂಜೆ 6 ಗಂಟೆಗೆ ಶೃಂಗೇರಿಯ ಆದಿಚುಂಚನಗಿರಿ ಸಭಾ ಭವನಕ್ಕೆ ಹೋದೆ 

ಅವರು 7.30ಕ್ಕೆ ಬಂದ್ರು ಅಲ್ಲೇ ಇದ್ದ ರೂಮಿಗೆ ಹೋದೆವು.
ಅವರು ಯಾರೆಂದು ಗೊತ್ತಿರಲಿಲ್ಲ ನಾನು ಮೊದಲೇ ಪೊಲೀಸರಿಗೆ ಅವರನ್ನ ತೋರಿಸಲು ಕೇಳಿದ್ದೆ

ಪೊಲೀಸರು ಇವರೇ ಕಂದಾಯ ಸಚಿವರ ಪಿಎ ಎಂದು ಹೇಳಿದ್ರು
ಪಕ್ಕದ ರೂಮಿಗೆ ಹೋದ ಕೂಡಲೇ ಏನಿದೆ ಕೊಡಿ ಎಂದರು

ನಾನು ನೇರವಾಗಿ ಹೇಳಿದೆ, ನಾನು ಕೊಡೋದಿಲ್ಲ, ತಗಳೋದು ಇಲ್ಲ ಎಂದು ನೇರವಾಗಿ ಹೇಳಿದೆ
ಆಮೇಲೆ ಆಯ್ತು ಹೋಗಿ ಎಂದರು 

ಕೈಯಲ್ಲಿದ್ದ ಪೇಪರ್ ನೋಡಿ ಏನದು ಎಂದು ಕೇಳಿದ್ರು.ಕರ್ನಾಟಕ ಸೆಕ್ರಟರಿಗೆ ಕಂಪ್ಲೇಟ್ ಮಾಡಿದ್ದೇನೆ ಈ ಲೆಟರ್ ಸಚಿವರಿಗೆ ಕೊಡಿ ಎಂದೇ

ಅದನ್ನ ನೀವೇ ಕೊಟ್ಟಿಕೊಳ್ಳಿ ಎಂದು ಹೇಳಿ ಹೋದರು.ನಿನ್ನೆ ರಾತ್ರಿ ವಾಟ್ಸಾಪ್ ಕಾಲ್ ಬಂದಿತ್ತು, ನಾನು ನೋಡಿರಲಿಲ್ಲ

ಇವತ್ತು ಬೆಳಗ್ಗೆ ಮತ್ತೆ ಕಾಲ್ ಮಾಡಿದ್ದೆ
ಫೈಲ್ ಕೊಡಲಿಲ್ಲ ಎಂದರು, ಯಾವ ಫೈಲ್ ಇಲ್ಲ. ನೀವು ಲಂಚ ಕೇಳಿದ್ರು ನಾನು ಕೊಡಲಿಲ್ಲ ಎಂದೆ

ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ, ಡ್ರಾಫ್ಟ್ ರೆಡಿ ಮಾಡುತ್ತಿದ್ದೇನೆ

ಕಂದಾಯ ಸಚಿವ ಪಿ.ಎ. ವಿರುದ್ಧ ದೂರು ದಾಖಲು

 ಚಿಕ್ಕಮಗಳೂರು : ಲಂಚ ಕೇಳಿದ ಆರೋಪದಡಿ ಕಂದಾಯ ಸಚಿವ ಆರ್.ಅಶೋಕ್  ಆಪ್ತ ಸಹಾಯಕ ಗಂಗಾಧರ್ ವಿರುದ್ಧ   ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಾಗಿದೆ .

ಶೃಂ


ಗೇರಿ ಸಬ್ ರಿಜಿಸ್ಟ್ರಾರ್  ಚೆಲುವರಾಜ್  ಜಿಲ್ಲೆಯ ಶೃಂಗೇರಿಯ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್  ಈ ಆಚರಣೆಗೆ ನೀಡಿದ್ದರು .   

ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದುತನಗೂ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಇದೇ 24ರಂದು ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದ ಸಚಿವ ಆರ್ ಅಶೋಕ್   ಈವೇಳೆ ಸಬ್ ರಿಜಿಸ್ಟ್ರಾರ್ ರಿಂದ ಹಣ ಕೇಳಿರುವ ಆರೋಪ

ಸಚಿವ ಆರ್ ಅಶೋಕ್ ಪಿಎ ಗಂಗಾಧರ್ ವಿರುದ್ಧ ಗಂಭೀರ ಆರೋಪ ಈ ಹಿನ್ನೆಲೆಯಲ್ಲಿ ಠಾಣೆಯಲ್ಲಿ ದೂರು ನೀಡಿರುವ ಚೆಲುವರಾಜ್

ಭಾನುವಾರ, ಜನವರಿ 24, 2021

ಅನ್ನದಾತರ ಹೋರಾಟಕ್ಕೆ 'ಸಮುದಾಯದ' ಸಹಾಯ ಹಸ್ತ


 ಚಿಕ್ಕಮಗಳೂರು :ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ ಇದೇ ತಿಂಗಳ ೨೬ ರಂದು ಬೆಂಗಳೂರಿನಲ್ಲಿ ನಡೆಯುವ ರೈತರ ಹೋರಾಟಕ್ಕೆ ಸಮುದಾಯ ತಂಡ ಬೆಂಬಲವಾಗಿ ನಿಂತಿದೆ .

ಆಹಾರ ನೀರು ಇತರೆ ಅಗತ್ಯ ವಸ್ತುಗಳ ಪೂರೈಕೆಗೆ ತಂಡ ಮುಂದಾಗಿದೆ .ಇದಕ್ಕಾಗಿ ಸಹೃದಯರ ನೆರವಿನ ಹಸ್ತವನ್ನು ಚಾಚಿದೆ.ಹನಿಗೂಡಿದರೆ ಹಳ್ಳವಾಗುತ್ತದೆ ....


ಕಲಾಮಂದಿರದಲ್ಲಿ ಕನ್ನಡದ ಕೊಲೆ


 ಚಿಕ್ಕಮಗಳೂರು :ಇಲ್ಲಿನ ಕುವೆಂಪು ಕಲಾ ಮಂದಿರದಲ್ಲಿ ಅಳವಡಿಸಿರುವ ಫಲಕ ಇದು . ವಿಪರ್ಯಾಸವೆಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯೂ ಇಲ್ಲಿಯೇ ಇದೆ .

ಬಿಜೆಪಿ ಕಚೇರಿಯಲ್ಲಿ ನೇತ್ರ ತಪಾಸಣಾ ಶಿಬಿರ


     ಚಿಕ್ಕಮಗಳೂರು: ಸ್ಥಳೀಯ ಶಾಸಕ ಸಿ ಟಿ ರವಿಯವರ ಮುತುವರ್ಜಿಯ ಫಲವಾಗಿ ಬಿಜೆಪಿ ಕಚೇರಿಯಲ್ಲಿ ಸಬ್ ನೇತ್ರಾಲಯ ತಂಡದಿಂದ ನೇತ್ರ ತಪಾಸಣಾ ಶಿಬಿರ ನಡೆಯಿತು .

ನಗರ ಹಾಗೂ ಗ್ರಾಮೀಣ ಪ್ರದೇಶದ  ಜನ ಆಗಮಿಸಿ ನೇತ್ರ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದರು

    ಕೃಷ್ಣಪ್ರಸಾದ್ ಕೂಡ್ಲು  ,ಡಾ.ರಮ್ಯ ,ಡಾ.ಮೈತ್ರಿ ಹಾಗೂ ೨೦ ಜನರ ತಂಡ ಈ ಶಿಬಿರದಲ್ಲಿ ಪಾಲ್ಗೊಂಡಿತ್ತು . ಉಚಿತವಾಗಿ ಕನ್ನಡಕ ಔಷಧಿಗಳನ್ನು ವಿತರಿಸಲಾಯಿತು .

ಸರಳ ಸಮಾರಂಭವನ್ನು ಡಾ. ಪ್ರಸಾದ್ ಉದ್ಘಾಟಿಸಿದರು .ಶಾಸಕ ಸಿ.ಟಿ.ರವಿ ,ಬೆಳ್ಳಿಪ್ರಕಾಶ್ ,ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ ಇತರರು ಉಪಸ್ಥಿತರಿದ್ದರು  

 

ಸ್ಫೋಟಕ ಸಾಗಣೆ- ಕಠಿಣ ನಿಯಮ ಜಾರಿ: ಸಚಿವ ಅಶೋಕ್


 ಚಿಕ್ಕಮಗಳೂರು :ಇತ್ತೀಚೆಗೆ ನಡೆದ ಶಿವಮೊಗ್ಗ  ಬ್ಲಾಸ್ಟ್ ಪ್ರಕರಣ ತನಿಖೆಗೆ  ತಂಡ ಕಳುಹಿಸಿದ್ದು ನಿಖರ ಕಾರಣಗಳಿಗೋಸ್ಕರ ವರದಿಯನ್ನು ಕಾಯಲಾಗುತ್ತಿದೆ ಎಂದು ಕಂದಾಯ ಸಚಿವ ಆರ್ .ಅಶೋಕ್ ತಿಳಿಸಿದ್ದಾರೆ  ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರುಶಿವಮೊಗ್ಗಕ್ಕೆ ಸ್ಪೋಟಕಗಳು ಆಂಧ್ರದಿಂದ ಬಂದಿದೆ ಎಂಬ ಮಾಹಿತಿ ಇದೆ‌ ಎಂದರು .

ಬೇರೆ ಕಾರ್ಯಕ್ಕೆ ಇದು ಬಳಕೆಯಾಗಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು‌. ಇನ್ನು ಮುಂದೆ ರಾಜ್ಯದ ಎಲ್ಲೆಡೆ ಚೆಕ್ ಪೋಸ್ಡ್ ಗಳನ್ನು ಸ್ಥಾಪಿಸಿ ಪರಿಶೀಲನೆ ನಡೆಸಲಾಗುವುದು.ಇದಕ್ಕಾಗಿ ಬಿಗಿ ನಿಯಮವನ್ನು ತರಲಾಗುತ್ತದೆ ಎಂದು ಹೇಳಿದರು .

ಅಧಿಕಾರಿಗಳ ಸಭೆ ಕರೆದು ಇನ್ನು ಮುಂದೆ ಈ ರೀತಿಯಾಗದಂತೆ ಹೊಸ ಮಾರ್ಗಸೂಚಿ  ರೂಪಿಸಿ ಕಠಿಣ ನಿಯಮ ಜಾರಿಗೆ  ತರಲಾಗುವುದು‌ ಎಂದರು .ಸಿಬಿಐ ತನಿಖೆ ನಡೆಸುವ ಅವಶ್ಯಕತೆಯಿಲ್ಲ‌‌ ರಾಜ್ಯದ ಪೊಲೀಸರು ಸಮರ್ಥರಿದ್ದಾರೆ ಎಂದ ಅಶೋಕ್ 

 ಚಿಕ್ಕಮಗಳೂರಿನಲ್ಲಿ ನಡೆದ ಜಾರಳಿ ಹೊಳೆ ನೇತೃತ್ವದ ಸಭೆ‌ಗೆ ಮಹತ್ವ ನೀಡಬೇಕಾಗಿಲ್ಲ ಎಂದು ಹೇಳಿದರು.

ಶನಿವಾರ, ಜನವರಿ 23, 2021

ಪರೀಕ್ಷೆ ಮುಂದೂಡಿಕೆ: ಭ್ರಷ್ಟ ವ್ಯವಸ್ಥೆಗೆ ಹಿಡಿದ ಕನ್ನಡಿ


 ಚಿಕ್ಕಮಗಳೂರು :ನಾಳೆ ನಡೆಯಬೇಕಾಗಿದ್ದ ಪ್ರಥಮ ದರ್ಜೆ ಸಹಾಯಕ ಹುದ್ದೆ ಪರೀಕ್ಷೆ ರದ್ದಾಗಿದೆ .

ಪ್ರಶ್ನೆ ಪತ್ರಿಕೆ ಬಯಲಾಗಿರುವುದು .ಈ ಸಂಬಂಧ ಈಗಾಗಲೇ 6ಜನರನ್ನು ಬಂಧಿಸಿ ಲಕ್ಷಾಂತರ ರೂ , ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ .

ಇದು ಮುಖ್ಯವಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಹೇಗೆ ಆಯಿತು ಎನ್ನುವುದೇ ಮುಖ್ಯ .ಪ್ರಶ್ನೆಪತ್ರಿಕೆ ಸಿದ್ಧಪಡಿಸಿ , ಮುದ್ರಿಸಿ ರವಾನೆ ಮಾಡುವುದು ಗೌಪ್ಯ ಕಾರ್ಯಾಚರಣೆ 

ಹೀಗಿರುವಾಗ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ ಎಂದರೆ ಇದರಲ್ಲಿ ಅನೇಕ ಅಧಿಕಾರಿ ಸಿಬ್ಬಂದಿ ಶಾಮೀಲಾಗಿರುವುದು  ಸ್ಪಷ್ಟ .

ಪ್ರಶ್ನೆ ಪತ್ರಿಕೆ ಬಯಲು' ಆರೋಪಿಗಳ ಬಂಧನ ,ತನಿಖೆ ಯಾವುದೂ ಹೊಸತಲ್ಲ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಮುಂದೆಯೂ ನಡೆಯಲಿರುವ ನಾಟಕ ಇದು .

ಭ್ರಷ್ಟ  ವ್ಯವಸ್ಥೆಯ ಕಬಂಧ ಬಾಹು  ಎಲ್ಲಿಯವರೆಗೆ ಚಾಚಿರುತ್ತದೆಯೋ ಅಲ್ಲಿಯವರೆಗೆ  ಇದೆಲ್ಲ ಮಾಮೂಲು .ಇದಕ್ಕೆ ಅಧಿಕಾರಿಗಳು ರಾಜಕಾರಣಿಗಳ ಕೃಪಾಕಟಾಕ್ಷವು ಇದ್ದೇ ಇರುತ್ತದೆ .

೧೧೧೭ ಹುದ್ದೆಗೆ ೩.೭೦ ಲಕ್ಷ ಜನ ಪರೀಕ್ಷೆ ಎದುರಿಸಬೇಕಾಗಿತ್ತು . ನಿರುದ್ಯೋಗ ಸಮಸ್ಯೆ ಎಷ್ಟು ಇದೆ ಎಂಬುದಕ್ಕೆ ಇದೇ ಸಾಕ್ಷಿ . ಪಾಪ ಪರೀಕ್ಷೆಗೆ ಸಿದ್ಧತೆ ನಡೆಸಿದವರ  ಪಾಡೇನು  ?

ಎಲ್ಲದಕ್ಕೂ ಸರ್ಕಾರವೇ ಹೊಣೆಯನ್ನು ಹೊರಬೇಕು . ತೋರಿಕೆಯ ತನಿಖೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ.ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು . ಭ್ರಷ್ಟ ವ್ಯವಸ್ಥೆಯಲ್ಲಿ ಇದು ಸಾಧ್ಯವೇ ಎನ್ನುವುದು ಮತ್ತೆ ಮತ್ತೆ ಕಾಡುವ ಪ್ರಶ್ನೆ . 

ಮಂಡ್ಯ ಜೀವಧಾರೆ ಟ್ರಸ್ಟ್ ನಿಂದ ಅರ್ಥಪೂರ್ಣ ಕಾರ್ಯಕ್ರಮ


 ಚಿಕ್ಕಮಗಳೂರು: ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಕುವೆಂಪು ಕಲಾ ಮಂದಿರದಲ್ಲಿ ಮಂಡ್ಯದ ಜೀವಧಾರೆ ಟ್ರಸ್ಟ್ ನಿಂದ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.

ಎರಡನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಪತ್ನಿಯರ ಪಾದಗಳನ್ನು ತೊಳೆದು ಗೌರವ ಸಮರ್ಪಿಸಿದ ಸಂಘಟಕರು ಜಿಲ್ಲೆಯ ೬೦ ಯೋಧರನ್ನು ಗೌರವಿಸಿದರು  .

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರೆ, ಯುವಜನ ಸೇವಾ ಮತ್ತು ಸಂಸ್ಕತಿ ಇಲಾಖೆಯ ಅಧಿಕಾರಿ ಮಂಜುಳಾ ಅರ್ಚಕ ಹಿರೇಮಗಳೂರು ಕಣ್ಣನ್ ಇತರರು ಪಾಲ್ಗೊಂಡಿದ್ದರು .ಯೋಧರ ಸೇವೆಯನ್ನು ಸ್ಮರಿಸಿದರು .


ಜ 26 ರಂದು ದೆಹಲಿ ಮತ್ತು ಬೆಂಗಳೂರಿನಲ್ಲಿ ಜನ ಗಣರಾಜ್ಯೋತ್ಸವ


 ಚಿಕ್ಕಮಗಳೂರು :ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ವಿರೋಧಿ ಕಾಯ್ದೆಗಳನ್ನು ಹಿಂದೆ ಪಡೆಯದೇ ಇದ್ದರೆ ಜನವರಿ ೨೬ ರಂದು ದೆಹಲಿ ಹಾಗೂ ಬೆಂಗಳೂರಿನಲ್ಲಿ ಜನರ ಗಣರಾಜ್ಯೋ ತ್ಸವ ನಡೆಯಲಿದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ .

ಗಣರಾಜ್ಯೋತ್ಸವ ಸಂದೇಶ ಮುಗಿದ ತಕ್ಷಣ ಎರಡೂ ಕಡೆಗಳಲ್ಲಿ ರೈತರು ಸಾವಿರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ನೊಂದಿಗೆ ರಾಷ್ಟ್ರಧ್ವಜ ಹಿಡಿದು ನಗರವನ್ನು ಪ್ರವೇಶಿಸಲಿದ್ದಾರೆ ಎಂದು ಹೇಳಿದರು .

ಕರೋನ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡಿರುವ ಸರ್ಕಾರಗಳು ಜನವಿರೋಧಿ ಕಾಯಿದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿವೆ .ಸಾರ್ವಜನಿಕ ಸೇವಾ ವಲಯಗಳನ್ನು ಖಾಸಗೀಕರಣ ಮಾಡುತ್ತಿವೆ ಎಂದು ಆರೋಪಿಸಿದರು .

ಪ್ರಪಂಚದ ಇತರ ಅನೇಕ ರಾಷ್ಟ್ರಗಳೂ ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿವೆ.  ನಮ್ಮ ಪ್ರಧಾನಿಗಳು ಮೌನವಾಗಿದ್ದಾರೆ ಎಂದು ಕಿಡಿಕಾರಿದರು. 

ಚಿಕ್ಕಮಗಳೂರು ರೆಸಾರ್ಟ್ ನಲ್ಲಿ ಸಚಿವರ ರಹಸ್ಯ ಸಭೆ


 ಚಿಕ್ಕಮಗಳೂರು :ಇಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ರಹಸ್ಯ ಸಭೆ ಅನೇಕ ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ .

ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನೆಪದಲ್ಲಿ ಆಗಮಿಸಿದ ಸಚಿವರು ರೆಸಾರ್ಟ್ ನಲ್ಲಿ ತಂಗಿದ್ದರು .

ಅಲ್ಲಿಗೆ ಸಚಿವರಾದ ಗೋಪಾಲಯ್ಯ ,ಸಿ ಪಿ ಯೋಗೇಶ್ವರ್ ,ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ನಂದೀಶ್ ರೆಡ್ಡಿ ಹಾಗೂ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಆಗಮಿಸಿದ್ದು ರಹಸ್ಯ ಸಭೆ ನಡೆದಿದೆ 

    ಇತ್ತೀಚೆಗೆ ಸಚಿವರ ಖಾತೆ ಬದಲಾವಣೆ ನಂತರದ ಮುನಿಸಿನ ಹಿನ್ನೆಲೆಯಲ್ಲಿ ನಡೆದ ಈ ಸಭೆಗೆ ಸಹಜವಾಗಿಯೇ ಮಹತ್ವ ಬಂದಿದೆ . ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನವೂ ಇದೆ 

ಹಂಪನಾ ಪರ ಏಕೆ ನಿಲ್ಲಬೇಕು ? ಸೂರಿಂಜೆ ಪ್ರಶ್ನೆ


 ಸಾಹಿತಿ ಹಂಪ ನಾಗರಾಜಯ್ಯ ಅವರು ಪೊಲೀಸ್ ಠಾಣೆಯಲ್ಲಿ ಎದುರಿಸಿದ ಪರಿಸ್ಥಿತಿಯೇ ದಲಿತರು, ಮುಸ್ಲೀಮರು ಎದುರಿಸಿದ ಪರಿಸ್ಥಿತಿಯಾಗಿದೆ. ಆಳ್ವಾಸ್, ಧರ್ಮಾಸ್ಥಳ, ಹಿಂದುತ್ವ ನಾಯಕರ ಜೊತೆ ಯಾವ ಮುಲಾಜೂ ಇಲ್ಲದೇ ವೇದಿಕೆ ಹಂಚಿಕೊಳ್ಳುತ್ತಿದ್ದ ಹಂಪ ನಾಗರಾಜಯ್ಯ ಅವರಿಗೆ ಈಗ ವಸ್ತುಸ್ಥಿತಿ ಅರ್ಥ ಆಗಿರಬಹುದು. 

ಮಂಡ್ಯ ಪೊಲೀಸರು ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಕರೆಸಿ ವಿಚಾರಣೆ ಮಾಡಿದ್ದು ತಪ್ಪು. ಹಾಗಂತ ಸಾಹಿತಿಗಳು, ಪತ್ರಕರ್ತರಿಗೇನು ಕೊಂಬು ಇರುವುದಿಲ್ಲ. ಈ ಹಿಂದೆ ಸಾಮಾನ್ಯ ಜನರ ಮೇಲೆ, ಅಲ್ಪಸಂಖ್ಯಾತರ ಮೇಲೆ ಇದೇ ರೀತಿ ಹಿಂದುತ್ವವಾದಿಗಳು ದಾಳಿ ನಡೆಸಿದಾಗ ಈ ಸಾಹಿತಿಗಳು, ಪತ್ರಕರ್ತರು ಎಲ್ಲಿದ್ದರು ? ಯಾರ ಜೊತೆ ನಿಂತಿದ್ದರು ? ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರೇ ? ಎಂಬುದು ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಸಾಹಿತಿಗಳು, ಪತ್ರಕರ್ತರ ಜೊತೆ ಸಮಾಜ ನಿಲ್ಲುತ್ತದೆ. 

ಮಂಗಳೂರಿನಲ್ಲಿ ಯಥೇಚ್ಚವಾಗಿ ನೈತಿಕ ಪೊಲೀಸ್ ಗಿರಿ, ಮುಸ್ಲೀಮರ ಮೇಲೆ ದಾಳಿ, ಚರ್ಚ್ ಮೇಲೆ ದಾಳಿ ನಡೆಯುವಾಗ ವಿಹಿಂಪ ಗೌರವಾಧ್ಯಕ್ಷ ಆಯೋಜಿಸುವ ಸಾಹಿತ್ಯ ಕೂಟದ ನೇತೃತ್ವ ವಹಿಸುವುದು, ಸೌಜನ್ಯ ಕೊಲೆಯಾದಾಗ ಆರೋಪ ಎದುರಿಸುತ್ತಿರುವ ಮುಂಡಾಸಿನವರ ಪರ ನಿಂತ ಹಂಪ ನಾಗರಾಜಯ್ಯ ಜೊತೆ ಜನ ಯಾಕೆ ನಿಲ್ಲಬೇಕು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಆದರೂ, ಹಂಪ ನಾಗರಾಜಯ್ಯ ಎದುರಿಸಿದ ಪರಿಸ್ಥಿತಿ ಯಾರಿಗೇ ಬಂದರೂ ಖಂಡನೀಯ. ಅದು ಇಂದಿನ ಅಸಹಿಷ್ಣುತೆಯನ್ನು ತೋರಿಸುತ್ತದೆ. ಆದ್ದರಿಂದ ಈ ಅಸಹಿಷ್ಣುತೆಯನ್ನು ನಾವೆಲ್ಲರೂ ಖಂಡಿಸಬೇಕಿದೆ.


- ನವೀನ್ ಸೂರಿಂಜೆ

* ನಾನೊಬ್ಬ ಸಾಹಿತ್ಯ ಅಜ್ಞಾನಿ,

ಹೆಚ್ಚು ಓದಿಲ್ಲ. ಪತ್ರಕರ್ತನಾಗಿ ಮಾಹಿತಿ ಪಡೆಯುವ ಉದ್ದೇಶ ಅಷ್ಟೆ. ಖಂಡಿತ ಇದರಲ್ಲಿ ವ್ಯಂಗ್ಯ ಇಲ್ಲ.

ಹಂಪನಾ ಅವರು ಹಿಂದೆ ಎಂದಾದರೂ ಪ್ರಭುತ್ವದ ವಿರುದ್ದ ಮಾತನಾಡಿದ್ದರೆ ದಯವಿಟ್ಟು ತಿಳಿಸಿ.

*ದಿನೇಶ್ ಅಮಿನ್ ಮಟ್ಟು 

ಬದಲಾಗುವುದೇ ಶಕ್ತಿ ಕೇಂದ್ರದ ಹೆಸರು ?


 ಚಿಕ್ಕಮಗಳೂರು :ತಾಲ್ಲೂಕು ಆಡಳಿತ ಶಕ್ತಿ ಕೇಂದ್ರ 'ಮಿನಿ ವಿಧಾನಸೌಧ'ದ ಹೆಸರು ಬದಲಾಗುವುದೇ ?

ಇಂತಹ ಒಂದು ಆಲೋಚನೆ ಚರ್ಚೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ .

    ತಾಲ್ಲೂಕು ಕೇಂದ್ರದಲ್ಲಿ ಇರುವ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು ಮಿನಿ ವಿಧಾನಸೌಧ ಎಂದು ಈಗ ಕರೆಯಲಾಗುತ್ತಿದೆ .

ಕೆಲವರಿಗೆ ಈ ಹೆಸರು ಹಿಡಿಸಿಲ್ಲ. ಬದಲಾಗಿ 'ತಾಲ್ಲೂಕು ಆಡಳಿತ ಸೌಧ 'ಎಂದು  ಮರುನಾಮಕರಣ ಮಾಡಬೇಕು ಎನ್ನುವ ಅಪೇಕ್ಷೆ ಹಲವರದು .

ಇದಕ್ಕೆ ಪೀಠಿಕೆ ಹಾಕಿ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹಾ ಪತ್ರ ಬರೆದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಚಂದ್ರಶೇಖರ್ .

ಈ ಚಿತ್ರಕ್ಕೆ ಈಗ ಜೀವ ಬಂದಿದೆ .ಸಲಹೆಯನ್ನು ಪರಿಗಣಿಸುವಂತೆ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಪರಿಶೀಲಿಸಿ ಪ್ರಸ್ತಾವನೆ ಮಂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .

ಈ ಎಲ್ಲ ಪ್ರಯತ್ನಗಳ ಹಿಂದೆ ಇಲ್ಲಿನ ಕಂದಾಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ ,    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವೀರಣ್ಣ ಶೆಟ್ಟಿ ಪಾತ್ರವೂ ಇದೆ . ಹೆಸರಂತೂ ಬದಲಾಗುವುದು ಖಚಿತ .ಆದರೆ ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿ ಮನಸ್ಥಿತಿ ಬದಲಾಗುವುದು ಮುಖ್ಯ !    

ಶುಕ್ರವಾರ, ಜನವರಿ 22, 2021

ಚಿಕ್ಕಮಗಳೂರು ನಗರಸಭೆ :ಮೀಸಲಾತಿ ಪ್ರಕಟ



 ಚಿಕ್ಕಮಗಳೂರು: ನಗರಸಭೆ ವಾರ್ಡ್ ಮೀಸಲಾತಿ  ಕೊನೆಗೂ ಪ್ರಕಟವಾಗಿದೆ .ಈ ಹಿಂದೆ ಮೀಸಲಾತಿ ಪ್ರಕಟವಾಗಿದ್ದ ಸಂದರ್ಭದಲ್ಲಿ ಆಡಳಿತ ಬಿಜೆಪಿಯ ಕೆಲವರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು . 

ಇದರಿಂದಾಗಿ ಕಳೆದ 2ವರ್ಷಗಳಿಂದ ನಗರಸಭೆಗೆ ಚುನಾವಣೆ ನಡೆಯದೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದವು.

ಕೊನೆಗೂ ಮೀಸಲಾತಿ ಪ್ರಕಟವಾಗಿದ್ದು' ಸದ್ಯದಲ್ಲೇ ಚುನಾವಣೆ ನಡೆಯುವ ನಿರೀಕ್ಷೆಯೂ ಇದೆ .ಜಿಲ್ಲಾ ಕೇಂದ್ರ ಅಭಿವೃದ್ಧಿ ಕಾರ್ಯಗಳಲ್ಲಿ ತೀವ್ರ ಹಿನ್ನಡೆ ಸಾಧಿಸಿದ್ದು , ನಗರಸಭೆ ಚುನಾವಣೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆಗಳು  ಇರುವುದನ್ನು ಗಮನಿಸಿ ಆಡಳಿತ ಪಕ್ಷದವರು ಉದ್ದೇಶಪೂರ್ವಕವಾಗಿ ನ್ಯಾಯಾಲಯದಿಂದ ತಡೆ ತಂದಿದ್ದರು  ಎನ್ನುವ ಆರೋಪವೂ ಇದೆ .

ಕುವೆಂಪು ವಿವಿ :ಪದವಿ ಸೇರಲು ಜ .31ರವರೆಗೆ ಅವಕಾಶ


  ಚಿಕ್ಕಮಗಳೂರು :ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯಎಲ್ಲಾ ಕಾಲೇಜುಗಳಲ್ಲಿ ಪದವಿ ತರಗತಿಗೆ ಸೇರಲು ಜನವರಿ 31 ರವರೆಗೆ ಅವಕಾಶಕಲ್ಪಿಸಲಾಗಿದೆ .

 ಕಡೂರಿನಲ್ಲಿ ನಡೆದವಿವಿಯ ಸಿಂಡಿಕೇಟ್ ಸಭೆಯಲ್ಲಿ  ತೀರ್ಮಾನ ಮಾಡಲಾಗಿದೆ.

ಅನೌಪಚಾರಿಕ ತೆಗೆದುಕೊಂಡ ಈ ತೀರ್ಮಾನ ನೂರಾರು ಪದವಿ ಸೇರುವ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಿದೆ.

ಮಲೆನಾಡಿನ ಮಕ್ಕಳು ಕೋವಿಡ್-19 ಸಂಕಷ್ಟದಿಂದ  ಹಾಸ್ಟೆಲ್ ತೊರೆದು   ಆರ್ಥಿಕ ತೊಂದರೆಗೆ ಸಿಲುಕಿದ್ದ ಮಲೆನಾಡಿನ ವಿದ್ಯಾರ್ಥಿಗಳು ಮೈಗ್ರಷನ್ ಸರ್ಟಿಫಿಕೇಟ್ ಪಡೆದು ಅಡ್ಮಿಷನ್ ಆಗುವಾಗ ಕಾಲೇಜು ಸೇರುವ ಅಂತಿಮದಿನ ಮುಗಿದಿತ್ತು.

ಇದನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರ ಗಮನಕ್ಕೆ  ತಂದಾಗ ಸಚಿವರುವಿವಿಯವಿ.ಸಿ.ಯನ್ನುಕರೆಸಿವಿದ್ಯಾರ್ಥಿಗಳಅಡ್ಮಿಷನ್ ಮಾಡಿಕೊಳ್ಳಲು ಕಾಲಾವಕಾಶ ವಿಸ್ತರಿಸಲು ಸೂಚನೆ ನೀಡಿದ   ಹಿನ್ನೆಲೆ ಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ .

ಅರಣ್ಯ ಹಕ್ಕು ಕಾಯ್ದೆ ಸರಳೀಕರಣಕ್ಕೆ ಒತ್ತಾಯ


 ಚಿಕ್ಕಮಗಳೂರು :ಈಗಾಗಲೇ ಜಾರಿಗೆ ತಂದಿರುವ ಅರಣ್ಯ ಹಕ್ಕು ಕಾಯ್ದೆಯನ್ನು ಇನ್ನಷ್ಟು ಸರಳೀಕರಣ ಗೊಳಿಸುವಂತೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಒತ್ತಾಯಿಸಿದ್ದಾರೆ .

ಮಲೆನಾಡು ಅಭಿವೃದ್ಧಿ ಮಂಡಳಿ ಕಾರ್ಯಚಟುವಟಿಕೆಗಳ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಈಗ ಜಾರಿಯಲ್ಲಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಯವರನ್ನು ಹೊರತುಪಡಿಸಿ ಉಳಿದವರು  3 ತಲೆಮಾರಿನ ದಾಖಲೆ ,ಇಬ್ಬರ ಸಾಕ್ಷಿಯನ್ನು  ನೀಡಬೇಕಾಗಿದೆ ಇದು ಕಷ್ಟದ ಕೆಲಸ ಎಂದರು .

ಕಾಯ್ದೆಯನ್ನು ಸರಳ ಗೊಳಿಸಿ ಕೆಲವೊಂದು ಮಾರ್ಪಾಡು ಮಾಡಿ 5ಎಕರೆ ವರೆಗಿನ ಒತ್ತುವರಿಯನ್ನು  ಸಕ್ರಮಗೊಳಿಸುವುದು ಸೂಕ್ತವೆಂದು ಅಭಿಪ್ರಾಯಿಸಿದರು .   

 ಸಂಸತ್ ಸದಸ್ಯ ರಾಘವೇಂದ್ರ ಅವರ ಜೂತೆ ಮಾತನಾಡಿದ್ದು , ಸಂಸತ್ತಿನಲ್ಲಿ ಚರ್ಚಿಸಿ ಕಾಯ್ದೆ ಜಾರಿಗೊಳಿಸಬೇಕು ಎಂದರು .


ಬುಧವಾರ, ಜನವರಿ 20, 2021

ಜ ೨೬ ರಂದು ಐತಿಹಾಸಿಕ ಹೋರಾಟ :ಕೆ ಎಲ್. ಅಶೋಕ್


 ಚಿಕ್ಕಮಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಕಾಯಿದೆಗಳನ್ನು ವಿರೋಧಿಸಿ  ಜ.೨೬ ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಎಂದು ಸಂಯುಕ್ತ ಹೋರಾಟ ಸಮಿತಿ ಕಾರ್ಯದರ್ಶಿ ಕೆ. ಎಲ್ ಅಶೋಕ್ ತಿಳಿಸಿದ್ದಾರೆ .

ಸುದ್ದಿಗಾರರ ಜೂತೆ ಮಾತನಾಡಿದ ಅವರು ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲ ಸಂಘಟನೆಗಳು ಒಂದಾಗಿ ಈ ಹೋರಾಟವನ್ನು  ನಡೆಸುತ್ತಿದ್ದು ಎರಡನೆ ಸ್ವಾತಂತ್ರ ಸಂಗ್ರಾಮಕ್ಕೆ ಮುನ್ನುಡಿ ಆಗಲಿದೆ ಎಂದು ಹೇಳಿದರು .

ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿ ಹೊಸ ಭಾಷ್ಯವನ್ನು ಬರೆದಿದೆ .ದಿಕ್ಕನ್ನು ತೋರಿಸಿದೆ.ಸುಗ್ರೀವಾಜ್ಞೆಗಳ ಮೂಲಕ ಕಾಯಿದೆಗಳನ್ನು ತಂದು ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು . ಗೌಸ್ ಮೊಯಿದಿನ್ ಇತರರು ಪಾಲ್ಗೊಂಡಿದ್ದರು .

ಮಂಗಳವಾರ, ಜನವರಿ 19, 2021

ಬಣಕಲ್ ಬಂದ್ ಯಶಸ್ವಿ : ಪಕ್ಕಾ ಪೋಡಿ ಭರವಸೆ


 ಚಿಕ್ಕಮಗಳೂರು :ಕೊಟ್ಟಿಗೆಹಾರ: ಬಣಕಲ್ ಗ್ರಾಮದ ಸರ್ವೇ ನಂ 353 ಆಟದ ಮೈದಾನವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಕ್ಕಾ ಪೋಡಿ ಬದಲಾಯಿಸುವಂತೆ ಒತ್ತಾಯಿಸಿ ಕರೆ ನೀಡಿದ್ದ ಬಣಕಲ್ ಪಟ್ಟಣ ಯಶಸ್ವಿಯಾಗಿದೆ.

 ಅಂಗಡಿ ಮುಂಗಟ್ಟುಗಳ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದ್ದರು.

 ಬಣಕಲ್‌ನ ಪೆಟ್ರೋಲ್ ಬಂಕ್‌ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಣಕಲ್‌ನ ಮುಖ್ಯ ಬೀದಿಗಳಲ್ಲಿ ಸಾಗಿ ಆಟದ ಮೈದಾನದಲ್ಲಿ ಧರಣಿ ನಡೆಸಲಾಯಿತು.

 ಸ್ಥಳಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಎಂ ಅಕ್ಷಯ್ ಬೇಟಿ ನೀಡಿ ಧರಣಿ ನಿರತದ ಬಳಿ ಮಾತುಕತೆ ನಡೆಸಿದರು. ನಂತರ ಪೊಲೀಸ್ ವರಿಷ್ಠಾಧಿಕಾರಿ ಪಕ್ಕಾ ಪೋಡಿ ಮಾಡುವ ಕುರಿತು‌ ಭರವಸೆ ನೀಡಿದರು.


ಆಟದ ಮೈದಾನದ ಪಕ್ಕಾ ಪೋಡ್ ಬದಲಾವಣೆಯ ಭರವಸೆ ನೀಡಿದ್ದರಿಂದ ಧರಣಿಯನ್ನು ಹಿಂಪಡೆದುಕೊಂಡಿದ್ದು ಪಕ್ಕಾ ಪೋಡಿ ಬದಲಾವಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಅನಿರ್ದಿಷ್ಟಾವಧಿ ಧರಣಿ ನಡೆಡಲಾಗುವುದು ಎಂದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಝಣ ಝಣ ಕಾಂಚಾಣ


 ಸಿಐಎಸ್ ಎಫ್ ಪೊಲೀಸರು ನಡೆಸಿದ  ಭರ್ಜರಿ ಕಾರ್ಯಾಚರಣೆಯಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 

 ಕಂತೆ ಕಂತೆ ಹಣ ಸಿಕ್ಕಿದೆ .

ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ್ಟಮ್ಸ್ ಅಧಿಕಾರಿ ಇರ್ಫಾನ್ ಅಹಮ್ಮದ್  ಮೊಹಮ್ಮದ್ ಲಕ್ನೋಗೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ  ಪ್ರಕರಣ ಪತ್ತೆಯಾಗಿದೆ .

 ಕೇಂದ್ರ ಸರ್ಕಾರದ ಅಧಿಕಾರಿ ದಂಪತಿ ಬಳಿ ಇತ್ತು ಲಕ್ಷ ಲಕ್ಷ ಹಣ ಇದ್ದು, ಸಿಐಎಸ್ ಎಫ್ ಅಧಿಕಾರಿಗಳ ಪರಿಶೀಲನೆ ವೇಳೆ ಬಾತ್ ರೂಂ ನಲ್ಲಿ ಬಿಸಾಡಿರುವುದು ಬೆಳಕಿಗೆ ಬಂದಿದೆ  .

ಅಧಿಕಾರಿಯ ಪತ್ನಿ ಬಾತ್ ರೂಂ ನಲ್ಲಿ 10 ಲಕ್ಷ ರೂ ಬಿಸಾಡಿದ್ದರೆ ,ಎರಡು ಕಾಸ್ಟ್ಲಿ ಮೊಬೈಲ್, ಆಫಲ್ ವಾಚ್ ಒಂದು ಸೂಟ್ ಕೇಸ್, ಬ್ಯಾಗ್ ನಲ್ಲಿ 74 ಲಕ್ಷ ರೂ ಪತ್ತೆಯಾಗಿದೆ .

ಒಟ್ಟು 74 ಲಕ್ಷದ 81 ಸಾವಿರದ 500 ರೂ ಹಣ ಜಪ್ತಿ ಮಾಡಿದ್ದು ಪ್ರಕರಣವನ್ನು ಸಿಐಎಸ್ ಎಫ್ ಪೊಲೀಸರು ಕೇಸ್ ನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.


ಸೋಮವಾರ, ಜನವರಿ 18, 2021

*ಕಾಫಿಗೆ ಬೆಂಬಲ ಬೆಲೆ ಘೋಷಿಸಿದ ಕೇರಳ ಸರ್ಕಾರ*


 ಕಾಫಿಗೆ ಬೆಂಬಲ ಬೆಲೆ ಘೋಷಿಸುವ ಮೂಲಕ   ಕೇರಳ ಸರ್ಕಾರ ಬೆಳೆಗಾರರ ಮನಗೆದ್ದಿದೆ .ಕೇರಳದ ವೈನಾಡಿನಲ್ಲಿ  ರೋಬಸ್ಟಾ ಕಾಫಿ ಬೆಳೆಯುತ್ತಿದ್ದು ಸರ್ಕಾರದ ಕ್ರಮವನ್ನು ಬೆಳೆಗಾರರು ಸ್ವಾಗತಿಸಿದ್ದಾರೆ 

 ಏರುತ್ತಿರುವ ಉತ್ಪಾದನಾ ವೆಚ್ಚ, ಕಾಫಿ, ಕಾಳು ಮೆಣಸಿನ ಬೆಲೆ ಕುಸಿತ ಮತ್ತು ಪ್ರಾಕೃತಿಕ ವಿಕೋಪಗಳ ಕಾರಣದಿಂದ ದೇಶದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. 

ಬೆಳೆಗಾರರ ಒತ್ತಾಯದ ನಡುವೆಯೂ ವಾಣಿಜ್ಯ ಬೆಳೆಯಾದ ಕಾಫಿಗೆ ಈವರೆಗೂ ಕೇಂದ್ರ ಅಥವಾ ರಾಜ್ಯ ಸರ್ಕಾರವು ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿಲ್ಲ.  ಪಕ್ಕದ  ಕೇರಳ ರಾಜ್ಯವು ಕಾಫಿಗೆ ಬೆಂಬಲ ಬೆಲೆಯನ್ನು ಘೋಷಿಸಿದೆ.

ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಶುಕ್ರವಾರ ತಮ್ಮ ಬಜೆಟ್ ಭಾಷಣದಲ್ಲಿ ಒಂದು ಕೆಜಿ ರೋಬಸ್ಟಾ ಚೆರಿ ಕಾಫಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) 90 ರೂಪಾಯಿಗೆ ಹೆಚ್ಚಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು  ಕಾಫಿ ಬೆಳೆಗಾರ ಸಂಘಟನೆಗಳು ಸ್ವಾಗತಿಸಿವೆ. 

 ಉತ್ಪಾದನಾ ವೆಚ್ಚ ಏರಿಕೆ ಆಗಿ ಜಿಲ್ಲೆಯ ಕಾಫಿ ಬೆಳೆಗಾರರು ತೀವ್ರ ಬಿಕ್ಕಟ್ಟಿನಲ್ಲಿರುವ ಈ ಸಮಯದಲ್ಲಿ, ನಾವು ಈ ಘೋಷಣೆಯನ್ನು ಸ್ವಾಗತಿಸುತ್ತೇವೆ ಎಂದು ವಯನಾಡ್ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಶಾಂತ್ ರಾಜೇಶ್ ತಿಳಿಸಿದ್ದಾರೆ.

ವಯನಾಡಿನಲ್ಲಿ ಶುಕ್ರವಾರ ರೊಬಸ್ಟಾ ಚೆರಿ ಬೆಲೆ ಕೆಜಿಗೆ 64 ರೂ ಆಗಿದ್ದು, ಕಳೆದ ವರ್ಷ ಕೆಜಿಗೆ ಇದೇ ಅವಧಿಯಲ್ಲಿ 72 ರೂಪಾಯಿಗಳಷ್ಟಿತ್ತು. ಎಂ ಎಸ್ ಸ್ವಾಮಿನಾಥನ್ ಆಯೋಗವೂ ಎಂಎಸ್ಪಿಯನ್ನು ಶಿಫಾರಸು ಮಾಡಿರಲಿಲ್ಲ.  ವಯನಾಡ್ ನಲ್ಲಿ ವರ್ಷಕ್ಕೆ 90,000 ಟನ್ಗಿಂತಲೂ ಹೆಚ್ಚು ರೋಬಸ್ಟಾ ಚೆರ್ರಿ ಉತ್ಪಾದಿಸುತ್ತಿದೆ.  ಇದರ  ಜೊತೆಗೆ  ಕೇರಳ ಸರ್ಕಾರ ಬ್ರಹ್ಮಗಿರಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ ಬೆಳೆಗಾರರಿಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ 

 ವಯನಾಡ್ ಕಾಫಿ ಬ್ರಾಂಡ್ ಹೆಸರಿನಲ್ಲಿ ಮೌಲ್ಯವರ್ಧಿತ ಕಾಫಿ ಉತ್ಪನ್ನಗಳನ್ನು ಮಾರಾಟ ಮಾಡಲು ಕುಡುಂಬಶ್ರೀ ಘಟಕಗಳ ಅಡಿಯಲ್ಲಿ ನೂರು ಕಿಯೋಸ್ಕ್ ಗಳನ್ನು ಮತ್ತು 500 ಕಾಫಿ ವೆಂಡಿಂಗ್ ಮೆಷೀನ್ ಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದ್ದು ವಯನಾಡಿನಲ್ಲಿ ಕಾಫಿ ಪಾರ್ಕ್ ಕೂಡ ಸ್ಥಾಪಿಸಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಮಾಜಿ ಸದಸ್ಯ ಡಾ ಸಣ್ಣುವಂಡ ಕಾವೇರಪ್ಪ  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ.  ಕಾಫಿಯಿಂದ ಸರ್ಕಾರ ಕೋಟಿಗಟ್ಟಲೆ ರೂ. ತೆರಿಗೆ ಸಂಗ್ರಹ ಮಾಡುತ್ತಿದ್ದರೂ ಆ ಬೆಳೆಗಾರರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದು ದೂರಿದರು. 

ಇಂದು ದೇಶದಲ್ಲಿ ಎಲ್ಲ ಬೆಳೆಗಳಿಗೂ ವಿಮೆ ಸೌಲಭ್ಯ ಇದೆ.  ಕಾಫಿಗೆ ಮೂರು ವರ್ಷ ಮಾತ್ರ ಅಲ್ಪ ಸಮಯ ಬೆಳೆ ವಿಮೆ ಸೌಲಭ್ಯ ನೀಡಿ ನಂತರ ನಿಲ್ಲಿಸಲಾಗಿದೆ . ಸರ್ಕಾರ ಕಮಾಡಿಟಿ ಬೋರ್ಡ್ ಸ್ಥಾಪಿಸಿ ಬೆಳೆಗಾರರ ನೆರವಿಗೆ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.ಆದರೆ ಏನೇ ಆದರೂ ಯಾವುದೇ ಸರ್ಕಾರವೂ ಈ ರೀತಿ ಬೆಳೆಗಾರನಿಗೆ ನೆರವಿನ ಹಸ್ತ ಚಾಚಿಲ್ಲ.

ಕೇರಳ ಸರ್ಕಾರದ ವ್ಯತ್ಯಾಸ ಸ್ವಾಗತಿಸಿರುವ  ಬಿಳಿಗೇರಿಯ ಕಾಫಿ ಬೆಳೆಗಾರ ಎಂ ಏ ಶ್ಯಾಮ್ ಪ್ರಸಾದ್    ಕರ್ನಾಟಕ ಸರ್ಕಾರವೂ ಇದೇ ಮಾದರಿ ಅನುಸರಿಸಲಿ ಎಂದು ಒತ್ತಾಯಿಸಿದ್ದಾರೆ .  

ಈ ಮಧ್ಯೆ  ಕೇರಳದಲ್ಲಿ ಮುಂದಿನ ಮೇ ತಿಂಗಳಿನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಆ ಹಿನ್ನೆಲೆಯಲ್ಲಿ ಸರ್ಕಾರ ಎಂಎಸ್ಪಿ ಘೋಷಿಸಿದೆ ಎನ್ನಲಾಗಿದ್ದು ಎಂಎಸ್ಪಿ ಅಡಿಯಲ್ಲಿ ಬೆಳೆಗಾರನ ಪೂರ್ಣ ಉತ್ಪನ್ನವನ್ನೂ ಖರೀದಿಸುವುದಿಲ್ಲ. ಬದಲಿಗೆ ಪ್ರತಿಯೊಬ್ಬ ಬೆಳೆಗಾರನಿಂದಲೂ ಸೀಮಿತ ಪ್ರಮಾಣದ ಕಾಫಿ ಖರೀದಿಸಲಿದೆ ಎಂದೂ ಹೇಳಲಾಗುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ.

##ಕರ್ನಾಟಕ ಸರ್ಕಾರ

 #ಕರ್ನಾಟಕ ಬೆಳೆಗಾರರ ಒಕ್ಕೂಟ

 ##ಕಾಫಿ ಮಂಡಳಿ ##ಶೋಭಾ ಕರಂದ್ಲಾಜೆ 

ಕಾಂಗ್ರೆಸ್ ಹೆಗಲ ಮೇಲಿನಿಂದ ಠಾಕ್ರೆ ಕೆಳಗಿಳಿಯಲಿ :ಮಾಜಿ ಸಚಿವ ರವಿ ಸವಾಲು


 ಚಿಕ್ಕಮಗಳೂರು : ಕಾಂಗ್ರೆಸ್ ಹೆಗಲ ಮೇಲೆ ಕುಳಿತು ಬಾಳಾ ಠಾಕ್ರೆ  ಹೇಗೆ ಮಾತನಾಡ್ತಾರೆ ಎಂದು ಪ್ರಶ್ನಿಸಿರುವ ಮಾಜಿ ಸಚಿವ ಸಿ ಟಿ ರವಿ 

ನೈತಿಕತೆ ಇದ್ದರೆ ಅವರಿಗೆ  ಅನ್ಯಾಯ ಮಾಡಿದ ಹೆಗಲಿನಿಂದ ಕೆಳಗಿಳಯಲಿ ಎಂದು ಸವಾಲು ಹಾಕಿದ್ದಾರೆ 

ಮಹಾರಾಷ್ಟ್ರ ಸಿ.ಎಂ. ಉದ್ಧವ್ ಠಾಕ್ರೆ ಗಡಿ ವಿವಾದ ಕುರಿತು ತೆಗೆದಿರುವ ಖ್ಯಾತೆಗೆ ಪ್ರತಿಕ್ರಿಯಿಸಿರುವ ಅವರು

ಗಡಿ ವಿಚಾರವನ್ನು ರಾಜಕೀಯ ಬೆಳೆ ಬೆಯಿಸಿಕೊಳ್ಳುವುದು ಬಹಳ ಹಿಂದಿನಿಂದ ಬಂದಿದೆ ಎಂದು ವಿಷಾದಿಸಿದರು 

ಕನ್ನಡ ಮಾತನಾಡುವವರು ಮಹಾರಾಷ್ಟ್ರ ಗಡಿಯೊಳಗೆ ಇದ್ದಾರೆ.ಮಠಾಠಿ ಮಾತನಾಡುವವರು ಕರ್ನಾಟಕ ದಲ್ಲಿದ್ದಾರೆ.ಇದಕ್ಕೆ ಸಂಬಂಧಿಸಿದ್ದಂತೆ ಹಲವು ಅಯೋಗಗಳು ಬಂದಿದೆ ಎಂದು ಹೇಳಿದರು 

ಭಾಷಾವಾರು ಪ್ರಾಂತ್ಯವಾಗುವಾಗ ಕ್ಷೇತ್ರ ವಿಂಗಡಣೆಯಾಗಿದೆ..ಅವರ ಸಾಂಪ್ರದಾಯಿಕ ಅಸ್ಮಿತೆಯನ್ನು ಉಳಿಸುವ ಕೆಲಸ ಭಾರತೀಯರು ಮಾಡಿಕೊಂಡು ಬಂದಿದ್ದಾರೆ.ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತರುವ ಕೆಲಸ ನಡೆದಿಲ್ಲ ಎಂದರು.

ಭಾಷಾವಾರು ಪ್ರಾಂತ್ಯ ರಚನೆಯಾಗಬೇಕಾದ್ರೆ ಬಿಜೆಪಿ ಅಸ್ಥಿತ್ವದಲ್ಲಿರಲಿಲ್ಲ.

ಅಂದು ದೇಶಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಉದ್ಧವ್ ಠಾಕ್ರೆ ಯಾರ ಬೆಂಬಲಿತದಿಂದ ಅಧಿಕಾರ ನಡೆಸುತ್ತಿದ್ದಾರೂ ಅವರ ವಿರುದ್ದ ಪ್ರಶ್ನೆ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು .


ಮಹಾಜನ್ ವರದಿಯೇ ಅಂತಿಮ: ಸಚಿವ ಮಾಧುಸ್ವಾಮಿ


 

ಚಿಕ್ಕಮಗಳೂರು : ಮಹಾಜನ್ ವರದಿಯೇ  ಅಂತಿಮ ಇದರಿಂದ ರಾಜಿಯಾಗುವ ಪ್ರಶ್ನೆ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ ಸ್ಪಷ್ಟ ಪಡಿಸಿದ್ದಾರೆ 

ಯಾವುದೇ ಕಾನೂನು ರಾಜ್ಯಗಳನ್ನ ಭಾಷಾವಾರು ಮರು ವಿಂಗಡನೆ ಬಗ್ಗೆ ಹೇಳಿಲ್ಲ.ಎರಡೆರಡು ಬಾರಿ ದೇಶವನ್ನು ವಿಂಗಡನೆ ಮಾಡಲು ಸಾಧ್ಯವಿಲ್ಲ ಇದು ಮುಗಿದ ಅಧ್ಯಾಯ  ಎಂದು ಖಂಡತುಂಡವಾಗಿ ಹೇಳಿದ್ದಾರೆ .

ಮಹಾಜನ್ ವರದಿಯನ್ನ ಎಲ್ಲರೂ ಒಪ್ಪಿಯಾಗಿದೆ .ರಾಜಕೀಯ ಅಸ್ಥಿತಕ್ಕಾಗಿ ಬದುಕಲು ಈ ರೀತಿ ಉದ್ಧವ್ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವರು 

ಚಿಕ್ಕಮಗಳೂರಿನಲ್ಲಿ ಕಿಡಿಕಾರಿದ್ದಾರೆ .

ಭಾನುವಾರ, ಜನವರಿ 17, 2021

ಕನ್ನಡದ ನಿರ್ಲಕ್ಷ್ಯ: ವ್ಯಾಪಕ ಅಸಮಾಧಾನ


 ಭದ್ರಾವತಿಯಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆ ಪಡೆಯ ಬೆಟಾಲಿಯನ್ ಭೂಮಿಪೂಜೆ ಕಾರ್ಯಕ್ರಮದಲ್ಲಿ ಕನ್ನಡವನ್ನು ನಿರ್ಲಕ್ಷಿಸಿದ ಕ್ರಮ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ .

ತ್ರಿಭಾಷಾ ಸೂತ್ರದ ಅನ್ವಯ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕಾದ ಸರ್ಕಾರ ಕನ್ನಡವನ್ನು ಸಂಪೂರ್ಣ ಕಡೆಗಣಿಸಿ ಹಿಂದಿ ಮಯ ಮಾಡಿರುವುದು ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ .

ಕೇಂದ್ರ ಗ್ರಹ  ಸಚಿವ ಅಮಿತ್ ಶಾ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

ಶಿಲಾನ್ಯಾಸ ಫಲಕದಲ್ಲಿ ಕನ್ನಡ  ಮಾಯವಾಗಿದ್ದರು ಈ ನಾಯಕರು ತುಟಿ ಬಿಚ್ಚದಿರುವುದು ಕನ್ನಡಿಗರನ್ನು ಕೆರಳಿಸಿದೆ . ಹಿಂದಿ ಹೇರಿಕೆಯ ವ್ಯವಸ್ಥಿತ ಹುನ್ನಾರ ಇದಾಗಿತ್ತು ಮುಂದೊಂದು ದಿನ ಕನ್ನಡವೇ ಮಾಯ ವಾಗುವ ಅಪಾಯ ಎದುರಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಟೀಕೆಗಳು ಹರಿದಾಡುತ್ತಿವೆ .

ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ . ಸರ್ಕಾರದ ಈ ನಿರ್ಧಾರಕ್ಕೆ ಕನ್ನಡಪರ ಸಂಘಟನೆಗಳು ಆಕ್ಷೇಪ ಹೊರಹಾಕಿವೆ .

ಶನಿವಾರ, ಜನವರಿ 16, 2021

ಕೋವಿಡ್ ಲಸಿಕೆ :ಮೊದಲ ದಿನ ಉತ್ತಮ ಪ್ರತಿಕ್ರಿಯೆ


 ಚಿಕ್ಕಮಗಳೂರು: ಜಿಲ್ಲಾ ಕೇಂದ್ರದ 2ಕಡೆ ಸೇರಿದಂತೆ ಜಿಲ್ಲೆಯ 9ಕಡೆಗಳಲ್ಲಿ ಇಂದು ಕೋವಿಡ್ ಲಸಿಕೆ ನೀಡಲಾಯಿತು .

ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸೋಮಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು .

ಪೌರಕಾರ್ಮಿಕ ಗುರಮ್ಮ ಮೊದಲ ಪ್ರಶಸ್ತಿಯನ್ನು ಪಡೆದರು . ಆರಂಭದಿಂದ ೮೦೦ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು 4 ಗಂಟೆ ವೇಳೆಗೆ ಶೇಕಡಾ ೫೦ ರಷ್ಟು  ಸಾಧನೆಯಾಗಿತ್ತು .

ಜಿಲ್ಲೆಯಲ್ಲಿ ಈವರೆಗೆ ೧೦೫೭೯ ಜನ ಲಸಿಕೆ ಪಡೆಯಲು ನೋಂದಣಿ ಮಾಡಿಸಿದ್ದಾರೆ ಇದರಲ್ಲಿ ೭೫೦೦ ಸರ್ಕಾರಿ '೩೦೭೭ ಜನ ಖಾಸಗಿ ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಿದ್ದಾರೆ .

ಲಸಿಕೆ ಪಡೆದವರ ಮೇಲೆ  ೩೦ ನಿಮಿಷಗಳ ಕಾಲ ನಿಗಾ ವಹಿಸಲಾಯಿತು .ಆರಂಭದಲ್ಲಿ ಸದ್ಯಕ್ಕೆ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ .


ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಒತ್ತಾಯ


 ಚಿಕ್ಕಮಗಳೂರು :ಶೇಕಡಾವಾರು ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗ ಜನಾಂಗಕ್ಕೆ ಶೇಕಡ ೧೭ ರಷ್ಟು ಮೀಸಲಾತಿ ನೀಡುವಂತೆ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ .

ಸುದ್ದಿಗಾರರ ಜೊತೆ  ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕ ನಾಗರಾಜ್  ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಮನ ಹರಿಸುವಂತೆ ಒತ್ತಾಯಿಸಿದರು .

ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ರೂಪಿಸುವುದಾಗಿ ತಿಳಿಸಿದ ಅವರು ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಜನಾಂಗದವರಿಗೆ  ಮೀಸಲಾತಿ ನೀಡುವಂತೆ ಮನವಿ ಮಾಡಿದರು . 

ಪದಾಧಿಕಾರಿಗಳಾದ ರಾಜೇಗೌಡ ,ಧರ್ಮರಾಜ್, ಮುಕುಂದ ರಾಜ್ ಉಪಸ್ಥಿತರಿದ್ದರು 

ಶುಕ್ರವಾರ, ಜನವರಿ 15, 2021

ಚಿಕ್ಕಮಗಳೂರು: ಹಲವೆಡೆ ಸಂಭ್ರಮದ ಸಂಕ್ರಾಂತಿ


 ಚಿಕ್ಕಮಗಳೂರು: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು .

ಜಿಲ್ಲಾ ಕೇಂದ್ರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ವತಿಯಿಂದ  ರಾಮ ದೇವಾಲಯದಲ್ಲಿ ಮಹಿಳೆಯರು ರಂಗೋಲಿ ಹಾಕಿ ಪೂಜೆ ಸಲ್ಲಿಸಿ ಪೊಂಗಲ್ ಮಾಡಿ ವಿತರಿಸಿದರು . 

ಕೃಷಿಕರು ಜಮೀನಿಗೆ ತೆರಳಿ ,ಬೆಳೆದ ಫಸಲನ್ನು ಕತ್ತರಿಸಿ ಮನೆಗೆ ತಂದು ರಾಶಿ ಹಾಕಿ ಪೂಜೆ ನೆರವೇರಿಸಿ ಸಿಹಿ ಹಂಚಿದರು ಗೋ ಪೂಜೆಯನ್ನು ನೆರವೇರಿಸಿದರು 


.


ಬುಧವಾರ, ಜನವರಿ 13, 2021

ಯತ್ನಾಳ್ ಆರೋಪ: ಪ್ರತಿಕ್ರಿಯೆಗೆ ಸಿಟಿರವಿ ನಕಾರ


 ಚಿಕ್ಕಮಗಳೂರು : ಸಿಎಂ ಸಿಡಿ ಇಟ್ಕೊಂಡು ಬ್ಲಾಕ್ಮೇಲ್ ಮಾಡಿ ಸಚಿವರಾಗಿದ್ದಾರೆ ಎನ್ನುವ ಶಾಸಕ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನಿರಾಕರಿಸಿದ್ದಾರೆ .

ಯೋಗ ಇರುವವರಿಗೆ ಸಚಿವ ಸ್ಥಾನ ಸಿಕ್ಕಿದೆ.ಯೋಗ್ಯತೆ ಇರೋರು ಬಹಳಷ್ಟು ಮಂದಿ ಇದ್ದಾರೆ .ಅವರಿಗೆಲ್ಲ ಮುಂದಿನ ಬಾರಿ ಅವಕಾಶಗಳು ಸಿಗಲಿವೆ ಎಂದಿದ್ದಾರೆ .

ಸಿಡಿನೂ ಇಲ್ಲ, ಪಾಡಿನೂ ಇಲ್ಲ, ಸುಮ್ನೆ ಹೇಳ್ತಾರೆ ಅಷ್ಟೇ : ಈಶ್ವರಪ್ಪ ಸ್ಪಷ್ಟನೆ


 ಚಿಕ್ಕಮಗಳೂರು: ಸಿಡಿನೂ' ಇಲ್ಲ ಏನೂ ಇಲ್ಲ ಸುಮ್ನೆ ಹೇಳ್ತಾರೆ ಅಷ್ಟೆ ಎಂದು ಸಚಿವ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು

ಯತ್ನಾಳ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು .

ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ನೋವಿನಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದರು 

ಕಾಂಗ್ರೆಸ್, ಜೆಡಿಎಸ್ ನಿಂದ ಬಂದ ಅರ್ಹತೆ ಇದ್ದವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ ,ಮುನಿರತ್ನ, ಹೆಚ್ ವಿಶ್ವನಾಥ್ ಅವರನ್ನು ಹೊರತುಪಡಿಸಿ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದೆ ಎಂದು ತಿಳಿಸಿದರು .

ಸಚಿವ ಸ್ಥಾನ ಸಿಗಲಿಲ್ಲ ಎಂದು ಏನೋ ಪದವನ್ನ ಬಳಸಬಹುದು.ಆದರೆ ಇದು ನಿಮ್ಮ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದರು .

ಎಲ್ಲ ಶಾಸಕರು ಕಲ್ಲುಬಂಡೆಯಂತೆ ಪಕ್ಷದಲ್ಲಿ ಇದ್ದಾರೆ 'ಸರ್ಕಾರ ಬಿಲ್ ಕುಲ್ ಪತನವಾಗಲ್ಲ ಎಂದು ಹೇಳಿದರು 

ಉಡ ಬೇಟೆಗಾರನ ಬಂಧನ

 ಚಿಕ್ಕಮಗಳೂರು :


ಕಡೂರು ವಲಯದ ಯಗಟಿ ಪುರ ಗ್ರಾಮದ ವ್ಯಾಪ್ತಿಯಲ್ಲಿ "ಉಡ" ಬೇಟೆಯಾಡಿದ್ದ  ಪರಮೇಶ್ವರನ್  ಎಂಬಾತನನ್ನು   ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. 

ಎ ಸಿ ಎಫ್ ಮುದ್ದಣ್ಣ ಮಾರ್ಗದರ್ಶನದಲ್ಲಿ ಆರ್ ಎಫ್ ಒ ತನುಜ್ ಕುಮಾರ್  ತಂಡ, ಅಕ್ರಮವಾಗಿ ಬೇಟೆಯಾಡಿದ್ದ ಉಡವನ್ನು ಆರೋಪಿಯಿಂದ ವಶಪಡಿಸಿಕೊಂಡು ವನ್ಯಜೀವಿ ಕಾಯ್ದೆ 1972 ರನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪಿಸಿದ್ದಾರೆ.   


ಮಂಗಳವಾರ, ಜನವರಿ 12, 2021

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು: ಪ್ರಕರಣ ಮುಚ್ಚಿ ಹಾಕಲು ಯತ್ನ


 ಚಿಕ್ಕಮಗಳೂರು: ಜಿಲ್ಲೆಯ  ಕಳಸ ಸಮೀಪದ ಮಾವಿನಕೆರೆಯಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಸುರೇಂದ್ರ ಎನ್ನುವರು ಮೃತಪಟ್ಟಿದ್ದು ಮೃತರ ಸಂಬಂಧಿಕರಿಗೆ ಹಣ ನೀಡಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ .

ಕಾಫಿ ತೋಟದ ವ್ಯವಸ್ಥಾಪಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ .  

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...