ಸಾಹಿತಿ ಹಂಪ ನಾಗರಾಜಯ್ಯ ಅವರು ಪೊಲೀಸ್ ಠಾಣೆಯಲ್ಲಿ ಎದುರಿಸಿದ ಪರಿಸ್ಥಿತಿಯೇ ದಲಿತರು, ಮುಸ್ಲೀಮರು ಎದುರಿಸಿದ ಪರಿಸ್ಥಿತಿಯಾಗಿದೆ. ಆಳ್ವಾಸ್, ಧರ್ಮಾಸ್ಥಳ, ಹಿಂದುತ್ವ ನಾಯಕರ ಜೊತೆ ಯಾವ ಮುಲಾಜೂ ಇಲ್ಲದೇ ವೇದಿಕೆ ಹಂಚಿಕೊಳ್ಳುತ್ತಿದ್ದ ಹಂಪ ನಾಗರಾಜಯ್ಯ ಅವರಿಗೆ ಈಗ ವಸ್ತುಸ್ಥಿತಿ ಅರ್ಥ ಆಗಿರಬಹುದು.
ಮಂಡ್ಯ ಪೊಲೀಸರು ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಕರೆಸಿ ವಿಚಾರಣೆ ಮಾಡಿದ್ದು ತಪ್ಪು. ಹಾಗಂತ ಸಾಹಿತಿಗಳು, ಪತ್ರಕರ್ತರಿಗೇನು ಕೊಂಬು ಇರುವುದಿಲ್ಲ. ಈ ಹಿಂದೆ ಸಾಮಾನ್ಯ ಜನರ ಮೇಲೆ, ಅಲ್ಪಸಂಖ್ಯಾತರ ಮೇಲೆ ಇದೇ ರೀತಿ ಹಿಂದುತ್ವವಾದಿಗಳು ದಾಳಿ ನಡೆಸಿದಾಗ ಈ ಸಾಹಿತಿಗಳು, ಪತ್ರಕರ್ತರು ಎಲ್ಲಿದ್ದರು ? ಯಾರ ಜೊತೆ ನಿಂತಿದ್ದರು ? ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರೇ ? ಎಂಬುದು ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಸಾಹಿತಿಗಳು, ಪತ್ರಕರ್ತರ ಜೊತೆ ಸಮಾಜ ನಿಲ್ಲುತ್ತದೆ.
ಮಂಗಳೂರಿನಲ್ಲಿ ಯಥೇಚ್ಚವಾಗಿ ನೈತಿಕ ಪೊಲೀಸ್ ಗಿರಿ, ಮುಸ್ಲೀಮರ ಮೇಲೆ ದಾಳಿ, ಚರ್ಚ್ ಮೇಲೆ ದಾಳಿ ನಡೆಯುವಾಗ ವಿಹಿಂಪ ಗೌರವಾಧ್ಯಕ್ಷ ಆಯೋಜಿಸುವ ಸಾಹಿತ್ಯ ಕೂಟದ ನೇತೃತ್ವ ವಹಿಸುವುದು, ಸೌಜನ್ಯ ಕೊಲೆಯಾದಾಗ ಆರೋಪ ಎದುರಿಸುತ್ತಿರುವ ಮುಂಡಾಸಿನವರ ಪರ ನಿಂತ ಹಂಪ ನಾಗರಾಜಯ್ಯ ಜೊತೆ ಜನ ಯಾಕೆ ನಿಲ್ಲಬೇಕು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಆದರೂ, ಹಂಪ ನಾಗರಾಜಯ್ಯ ಎದುರಿಸಿದ ಪರಿಸ್ಥಿತಿ ಯಾರಿಗೇ ಬಂದರೂ ಖಂಡನೀಯ. ಅದು ಇಂದಿನ ಅಸಹಿಷ್ಣುತೆಯನ್ನು ತೋರಿಸುತ್ತದೆ. ಆದ್ದರಿಂದ ಈ ಅಸಹಿಷ್ಣುತೆಯನ್ನು ನಾವೆಲ್ಲರೂ ಖಂಡಿಸಬೇಕಿದೆ.
- ನವೀನ್ ಸೂರಿಂಜೆ
* ನಾನೊಬ್ಬ ಸಾಹಿತ್ಯ ಅಜ್ಞಾನಿ,
ಹೆಚ್ಚು ಓದಿಲ್ಲ. ಪತ್ರಕರ್ತನಾಗಿ ಮಾಹಿತಿ ಪಡೆಯುವ ಉದ್ದೇಶ ಅಷ್ಟೆ. ಖಂಡಿತ ಇದರಲ್ಲಿ ವ್ಯಂಗ್ಯ ಇಲ್ಲ.
ಹಂಪನಾ ಅವರು ಹಿಂದೆ ಎಂದಾದರೂ ಪ್ರಭುತ್ವದ ವಿರುದ್ದ ಮಾತನಾಡಿದ್ದರೆ ದಯವಿಟ್ಟು ತಿಳಿಸಿ.
*ದಿನೇಶ್ ಅಮಿನ್ ಮಟ್ಟು

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ