ಮಂಗಳವಾರ, ಜನವರಿ 19, 2021

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಝಣ ಝಣ ಕಾಂಚಾಣ


 ಸಿಐಎಸ್ ಎಫ್ ಪೊಲೀಸರು ನಡೆಸಿದ  ಭರ್ಜರಿ ಕಾರ್ಯಾಚರಣೆಯಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 

 ಕಂತೆ ಕಂತೆ ಹಣ ಸಿಕ್ಕಿದೆ .

ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ್ಟಮ್ಸ್ ಅಧಿಕಾರಿ ಇರ್ಫಾನ್ ಅಹಮ್ಮದ್  ಮೊಹಮ್ಮದ್ ಲಕ್ನೋಗೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ  ಪ್ರಕರಣ ಪತ್ತೆಯಾಗಿದೆ .

 ಕೇಂದ್ರ ಸರ್ಕಾರದ ಅಧಿಕಾರಿ ದಂಪತಿ ಬಳಿ ಇತ್ತು ಲಕ್ಷ ಲಕ್ಷ ಹಣ ಇದ್ದು, ಸಿಐಎಸ್ ಎಫ್ ಅಧಿಕಾರಿಗಳ ಪರಿಶೀಲನೆ ವೇಳೆ ಬಾತ್ ರೂಂ ನಲ್ಲಿ ಬಿಸಾಡಿರುವುದು ಬೆಳಕಿಗೆ ಬಂದಿದೆ  .

ಅಧಿಕಾರಿಯ ಪತ್ನಿ ಬಾತ್ ರೂಂ ನಲ್ಲಿ 10 ಲಕ್ಷ ರೂ ಬಿಸಾಡಿದ್ದರೆ ,ಎರಡು ಕಾಸ್ಟ್ಲಿ ಮೊಬೈಲ್, ಆಫಲ್ ವಾಚ್ ಒಂದು ಸೂಟ್ ಕೇಸ್, ಬ್ಯಾಗ್ ನಲ್ಲಿ 74 ಲಕ್ಷ ರೂ ಪತ್ತೆಯಾಗಿದೆ .

ಒಟ್ಟು 74 ಲಕ್ಷದ 81 ಸಾವಿರದ 500 ರೂ ಹಣ ಜಪ್ತಿ ಮಾಡಿದ್ದು ಪ್ರಕರಣವನ್ನು ಸಿಐಎಸ್ ಎಫ್ ಪೊಲೀಸರು ಕೇಸ್ ನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...