ಚಿಕ್ಕಮಗಳೂರು :ತಾಲ್ಲೂಕು ಆಡಳಿತ ಶಕ್ತಿ ಕೇಂದ್ರ 'ಮಿನಿ ವಿಧಾನಸೌಧ'ದ ಹೆಸರು ಬದಲಾಗುವುದೇ ?
ಇಂತಹ ಒಂದು ಆಲೋಚನೆ ಚರ್ಚೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ .
ತಾಲ್ಲೂಕು ಕೇಂದ್ರದಲ್ಲಿ ಇರುವ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು ಮಿನಿ ವಿಧಾನಸೌಧ ಎಂದು ಈಗ ಕರೆಯಲಾಗುತ್ತಿದೆ .
ಕೆಲವರಿಗೆ ಈ ಹೆಸರು ಹಿಡಿಸಿಲ್ಲ. ಬದಲಾಗಿ 'ತಾಲ್ಲೂಕು ಆಡಳಿತ ಸೌಧ 'ಎಂದು ಮರುನಾಮಕರಣ ಮಾಡಬೇಕು ಎನ್ನುವ ಅಪೇಕ್ಷೆ ಹಲವರದು .
ಇದಕ್ಕೆ ಪೀಠಿಕೆ ಹಾಕಿ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹಾ ಪತ್ರ ಬರೆದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಚಂದ್ರಶೇಖರ್ .
ಈ ಚಿತ್ರಕ್ಕೆ ಈಗ ಜೀವ ಬಂದಿದೆ .ಸಲಹೆಯನ್ನು ಪರಿಗಣಿಸುವಂತೆ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಪರಿಶೀಲಿಸಿ ಪ್ರಸ್ತಾವನೆ ಮಂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .
ಈ ಎಲ್ಲ ಪ್ರಯತ್ನಗಳ ಹಿಂದೆ ಇಲ್ಲಿನ ಕಂದಾಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವೀರಣ್ಣ ಶೆಟ್ಟಿ ಪಾತ್ರವೂ ಇದೆ . ಹೆಸರಂತೂ ಬದಲಾಗುವುದು ಖಚಿತ .ಆದರೆ ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿ ಮನಸ್ಥಿತಿ ಬದಲಾಗುವುದು ಮುಖ್ಯ !

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ