ಶನಿವಾರ, ಜನವರಿ 23, 2021

ಬದಲಾಗುವುದೇ ಶಕ್ತಿ ಕೇಂದ್ರದ ಹೆಸರು ?


 ಚಿಕ್ಕಮಗಳೂರು :ತಾಲ್ಲೂಕು ಆಡಳಿತ ಶಕ್ತಿ ಕೇಂದ್ರ 'ಮಿನಿ ವಿಧಾನಸೌಧ'ದ ಹೆಸರು ಬದಲಾಗುವುದೇ ?

ಇಂತಹ ಒಂದು ಆಲೋಚನೆ ಚರ್ಚೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ .

    ತಾಲ್ಲೂಕು ಕೇಂದ್ರದಲ್ಲಿ ಇರುವ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು ಮಿನಿ ವಿಧಾನಸೌಧ ಎಂದು ಈಗ ಕರೆಯಲಾಗುತ್ತಿದೆ .

ಕೆಲವರಿಗೆ ಈ ಹೆಸರು ಹಿಡಿಸಿಲ್ಲ. ಬದಲಾಗಿ 'ತಾಲ್ಲೂಕು ಆಡಳಿತ ಸೌಧ 'ಎಂದು  ಮರುನಾಮಕರಣ ಮಾಡಬೇಕು ಎನ್ನುವ ಅಪೇಕ್ಷೆ ಹಲವರದು .

ಇದಕ್ಕೆ ಪೀಠಿಕೆ ಹಾಕಿ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹಾ ಪತ್ರ ಬರೆದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಚಂದ್ರಶೇಖರ್ .

ಈ ಚಿತ್ರಕ್ಕೆ ಈಗ ಜೀವ ಬಂದಿದೆ .ಸಲಹೆಯನ್ನು ಪರಿಗಣಿಸುವಂತೆ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಪರಿಶೀಲಿಸಿ ಪ್ರಸ್ತಾವನೆ ಮಂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .

ಈ ಎಲ್ಲ ಪ್ರಯತ್ನಗಳ ಹಿಂದೆ ಇಲ್ಲಿನ ಕಂದಾಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ ,    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವೀರಣ್ಣ ಶೆಟ್ಟಿ ಪಾತ್ರವೂ ಇದೆ . ಹೆಸರಂತೂ ಬದಲಾಗುವುದು ಖಚಿತ .ಆದರೆ ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿ ಮನಸ್ಥಿತಿ ಬದಲಾಗುವುದು ಮುಖ್ಯ !    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...