ಚಿಕ್ಕಮಗಳೂರು :ಇಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ರಹಸ್ಯ ಸಭೆ ಅನೇಕ ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ .
ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನೆಪದಲ್ಲಿ ಆಗಮಿಸಿದ ಸಚಿವರು ರೆಸಾರ್ಟ್ ನಲ್ಲಿ ತಂಗಿದ್ದರು .
ಅಲ್ಲಿಗೆ ಸಚಿವರಾದ ಗೋಪಾಲಯ್ಯ ,ಸಿ ಪಿ ಯೋಗೇಶ್ವರ್ ,ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ನಂದೀಶ್ ರೆಡ್ಡಿ ಹಾಗೂ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಆಗಮಿಸಿದ್ದು ರಹಸ್ಯ ಸಭೆ ನಡೆದಿದೆ
ಇತ್ತೀಚೆಗೆ ಸಚಿವರ ಖಾತೆ ಬದಲಾವಣೆ ನಂತರದ ಮುನಿಸಿನ ಹಿನ್ನೆಲೆಯಲ್ಲಿ ನಡೆದ ಈ ಸಭೆಗೆ ಸಹಜವಾಗಿಯೇ ಮಹತ್ವ ಬಂದಿದೆ . ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನವೂ ಇದೆ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ