ಭಾನುವಾರ, ಜನವರಿ 24, 2021

ಸ್ಫೋಟಕ ಸಾಗಣೆ- ಕಠಿಣ ನಿಯಮ ಜಾರಿ: ಸಚಿವ ಅಶೋಕ್


 ಚಿಕ್ಕಮಗಳೂರು :ಇತ್ತೀಚೆಗೆ ನಡೆದ ಶಿವಮೊಗ್ಗ  ಬ್ಲಾಸ್ಟ್ ಪ್ರಕರಣ ತನಿಖೆಗೆ  ತಂಡ ಕಳುಹಿಸಿದ್ದು ನಿಖರ ಕಾರಣಗಳಿಗೋಸ್ಕರ ವರದಿಯನ್ನು ಕಾಯಲಾಗುತ್ತಿದೆ ಎಂದು ಕಂದಾಯ ಸಚಿವ ಆರ್ .ಅಶೋಕ್ ತಿಳಿಸಿದ್ದಾರೆ  ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರುಶಿವಮೊಗ್ಗಕ್ಕೆ ಸ್ಪೋಟಕಗಳು ಆಂಧ್ರದಿಂದ ಬಂದಿದೆ ಎಂಬ ಮಾಹಿತಿ ಇದೆ‌ ಎಂದರು .

ಬೇರೆ ಕಾರ್ಯಕ್ಕೆ ಇದು ಬಳಕೆಯಾಗಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು‌. ಇನ್ನು ಮುಂದೆ ರಾಜ್ಯದ ಎಲ್ಲೆಡೆ ಚೆಕ್ ಪೋಸ್ಡ್ ಗಳನ್ನು ಸ್ಥಾಪಿಸಿ ಪರಿಶೀಲನೆ ನಡೆಸಲಾಗುವುದು.ಇದಕ್ಕಾಗಿ ಬಿಗಿ ನಿಯಮವನ್ನು ತರಲಾಗುತ್ತದೆ ಎಂದು ಹೇಳಿದರು .

ಅಧಿಕಾರಿಗಳ ಸಭೆ ಕರೆದು ಇನ್ನು ಮುಂದೆ ಈ ರೀತಿಯಾಗದಂತೆ ಹೊಸ ಮಾರ್ಗಸೂಚಿ  ರೂಪಿಸಿ ಕಠಿಣ ನಿಯಮ ಜಾರಿಗೆ  ತರಲಾಗುವುದು‌ ಎಂದರು .ಸಿಬಿಐ ತನಿಖೆ ನಡೆಸುವ ಅವಶ್ಯಕತೆಯಿಲ್ಲ‌‌ ರಾಜ್ಯದ ಪೊಲೀಸರು ಸಮರ್ಥರಿದ್ದಾರೆ ಎಂದ ಅಶೋಕ್ 

 ಚಿಕ್ಕಮಗಳೂರಿನಲ್ಲಿ ನಡೆದ ಜಾರಳಿ ಹೊಳೆ ನೇತೃತ್ವದ ಸಭೆ‌ಗೆ ಮಹತ್ವ ನೀಡಬೇಕಾಗಿಲ್ಲ ಎಂದು ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...