ಸೋಮವಾರ, ಅಕ್ಟೋಬರ್ 31, 2022

ಜನಪ್ರತಿನಿಧಿ -ಅಧಿಕಾರಿಗಳ ನಿರ್ಲಕ್ಷ ;ಹೆದ್ದಾರಿಯಲ್ಲಿ ಸರಣಿ ಅಪಘಾತ; ಹಲವರ ಬಲಿ

 

ಚಿಕ್ಕಮಗಳೂರು :ಕೋಟೆ ಕೆರೆಯಿಂದ ಹಿರೇಮಗಳೂರು ಸಂಪರ್ಕಿಸುವ ಹೆದ್ದಾರಿಯಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ ಇಲ್ಲದೆ ಅನೇಕ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ .ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲು ಆವರಿಸಿ ,ಡಿವೈಡರ್ ಗಳು ಕಾಣದೆ ಅನೇಕ ವಾಹನಗಳು ಅಪಘಾತಕ್ಕೆ ಒಳಗಾಗಿವೆ .

ಇಂದು ಅಂತಹದ್ದೇ ಘಟನೆಯೊಂದು ನಡೆದಿದೆ.ವೇಗವಾಗಿ ಬಂದ ಕಾರೊಂದು ,ಡಿವೈಡರ್ ಗೆ ಅಪ್ಪಳಿಸಿ ಎದುರಿನಿಂದ ಹೋಗುತ್ತಿದ್ದ ಆಟೋ ರಿಕ್ಷಾವನ್ನು ಸೀಳಿಕೊಂಡು ಶನಿ ದೇವಸ್ಥಾನದ ಬಳಿ ಹೋಗಿ ನುಜ್ಜುಗುಜ್ಜಾಗಿ  ನಿಂತಿದೆ .

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .ಈ ಹಿಂದೆ  ನಡೆದ ಅಪಘಾತದಲ್ಲಿ ಇಬ್ಭರು ಸಾವಪ್ಪಿದ್ದು , ಇಂದು ಪಾದಚಾರಿಯೊಬ್ಬರು ಜಸ್ಟ್  ಮಿಸ್ ಆಗಿದ್ದಾರೆ .

ಈ ರಸ್ತೆಗೆ ಅಗತ್ಯ ವಿದ್ಯುತ್ ದೀಪ ಸೌಲಭ್ಯ ಕಲ್ಪಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದರೂ ಸಂಬಂಧಪಟ್ಟ ಅಧಿಕಾರಿ ಜನಪ್ರತಿನಿಧಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ .

ನಗರಸಭೆ ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳು ಪರಸ್ಪರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದು ಇನ್ನಾದರೂ ಸಮಸ್ಯೆ ಬಗೆಹರಿಸಿ ಮುಂದೆ ಆಗುವ ಅನಾಹುತಗಳಿಗೆ ಕಡಿವಾಣ ಹಾಕಲಿ ಎಂದು ಒತ್ತಾಯಿಸಿದ್ದಾರೆ 

ಭಾನುವಾರ, ಅಕ್ಟೋಬರ್ 30, 2022

ಕೃಷಿ ಕ್ಷೇತ್ರದಲ್ಲಿ ಸಾಧನೆ: ರಾಜ್ಯೋತ್ಸವ ಪ್ರಶಸ್ತಿ ಗೆ ಚಂದ್ರಶೇಖರ ನಾರಾಯಣಪುರ

 


ಚಿಕ್ಕಮಗಳೂರು :ರಾಜ್ಯ ಸರ್ಕಾರ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ,ಜಿಲ್ಲೆಯ ಚಂದ್ರಶೇಖರ ನಾರಾಯಣಪುರ ಪ್ರಶಸ್ತಿಗೆ ಭಾಜನರಾಗಿದ್ದಾರೆ .

ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತರೀಕೆರೆ ತಾಲ್ಲೂಕಿನ ನಾರಾಯಣಪುರದ ಚಂದ್ರಶೇಖರ್  ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿ ಬಳಿಕ ತಮ್ಮ ಕ್ಷೇತ್ರವನ್ನು ಕೃಷಿಯತ್ತ ಬದಲಾಯಿಸಿದ್ದರು 

ಮೂಗ್ತಿಹಳ್ಳಿ  ಬಳಿ  ಜಮೀನು ಖರೀದಿಸಿ ನೈಸರ್ಗಿಕ ಕೃಷಿಗೆ ವಿಶೇಷ ಗಮನ ನೀಡಿ ಅಪಾರ ಸಾಧನೆ ಮಾಡಿ ಮನ್ನಣೆ ಗಳಿಸಿದ್ದರು .

ಇವರ ನೈಸರ್ಗಿಕ ಕೃಷಿ ಕ್ಷೇತ್ರಕ್ಕೆ ಹತ್ತು ಹಲವು ಗಣ್ಯರು ಭೇಟಿ ನೀಡಿ ಪ್ರಶಂಸೆ ಹೊರಹಾಕಿದ್ದರು .

ಧರ್ಮಗ್ರಂಥಗಳನ್ನು ಪೂರ್ಣವಾಗಿ ಅಧ್ಯಯನ ಮಾಡಿದವನು ಕೋಮುವಾದಿ ಆಗುವುದಿಲ್ಲ : ಸಿನಾನ್ ಫೈಝಿ

 



ಬಣಕಲ್ : ಧರ್ಮಗ್ರಂಥಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿದವನು ಎಂದಿಗೂ ಕೋಮವಾದಿ ಆಗುವುದಿಲ್ಲ ಎಂದು ಚಕಮಕ್ಕಿಯ ಖಲಂದರಿಯ ಅನಾಥಾಶ್ರಮದ ಪ್ರಾಂಶುಪಾಲ ಮೌಲಾನಾ ಸಿನಾನ್ ಫೈಝಿ ಹೇಳಿದರು.

ಬಣಕಲ್ ನಲ್ಲಿ ನಡೆದ ವಾರ್ಷಿಕ ಈದ್ ಮಿಲಾದ್ ಕಾರ್ಯಕ್ರಮದಲ್ಲಿ  ಮಾತನಾಡಿ ಕುರಾನ್, ಭಗವದ್ಗೀತೆ, ಬೈಬಲ್ ಧರ್ಮ ಗ್ರಂಥಗಳನ್ನು  ಪೂರ್ಣವಾಗಿ ಅರಿತವನು ಕೋಮುವಾದಿಯಾಗಲು ಸಾಧ್ಯವಿಲ್ಲ , ಪ್ರವಾದಿ ಮಹಮ್ಮದ್ ಪೈಗಂಬರ್ ಜಗತ್ತಿಗೆ ಬೆಳಕು ನೀಡಿದ ಮಹಾನ್ ವ್ಯಕ್ತಿ  ಎಂದರು.

ಬಣಕಲ್ ಸುನ್ನೀ ಜಾಮಿಯಾ ಜುಮ್ಮ ಮಸೀದಿಯ ಧರ್ಮಗುರು ಜನಾಬ್ ಮೌಲಾನ ಮಹಮ್ಮದ್ ಶಾಕೀಬ್ ರಜ್ವಿ ನೂರಿ  ಮಾತನಾಡಿದರು  . ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು . 

ಕೊಟ್ಟಿಗೆಹಾರ ಬದ್ರಿಯ ಜುಮ್ಮಾ ಮಸೀದಿಯ ಧರ್ಮ ಗುರುಅಬ್ದುಲ್ ರೆಹಮಾನ್ ಫೈಝಿ,  ಮೋಹಿದ್ದೀನ್ ಜುಮ್ಮಾ ಮಸೀದಿಯ ಧರ್ಮ ಗುರು ಜುಬೇರ್ ಧಾರಿಮಿ,  ಹೋಬಳಿ ಮಿಲಾದ್ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಆಲಿ ಹಾಜಿ ಪಾಲ್ಗೊಂಡಿದ್ದರು 

ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ : ಪೋಕ್ಸೊ ಕಾಯ್ದೆ ಅಡಿ ಶಿಕ್ಷಕನ ಬಂಧನ

 ಚಿ


ಕ್ಕಮಗಳೂರು :ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕೊಪ್ಪದ ಸರ್ಕಾರಿ ಶಾಲೆ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ .

ಕೊಪ್ಪ ಸರ್ಕಾರಿ ಶಾಲೆ ಶಿಕ್ಷಕ ಸತೀಶ್ ಬಂಧಿತ ಆರೋಪಿ .ಈತನ ವಿರುದ್ಧ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ .

ಈ ಶಿಕ್ಷಕ ಈ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆ ಮುಚ್ಚಲು ಈತನ ಅನುಚಿತ ವರ್ತನೆ ಕಾರಣ ಎನ್ನುವ ಆರೋಪವೂ ಇದೆ .ಶಿಕ್ಷಕನನ್ನು ಈಗಾಗಲೇ  ಅಮಾನತುಪಡಿಸಲಾಗಿದೆ

 ಅನುದಾನ ಹಂಚಿಕೆ ತಾರತಮ್ಯ ಆರೋಪ : ಪಿಡಿಒ -ಸದಸ್ಯರ ಮಧ್ಯೆ ಜಟಾಪಟಿ ;ರಸ್ತೆ ತಡೆ ಪ್ರತಿಭಟನೆ 


ಚಿಕ್ಕಮಗಳೂರು :ಅನುದಾನ ಹಂಚಿಕೆ ವಿಚಾರವಾಗಿ ಗ್ರಾಮ ಪಂಚಾಯತಿ ಸದಸ್ಯ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ .

ಕಡೂರು ತಾಲ್ಲೂಕಿನ ನಾಗನಹಳ್ಳಿ ಗ್ರಾಮ ಪಂಚಾಯಿತಿ  ಸದಸ್ಯ ವಸಂತ್ ಕುಮಾರ್ ಮತ್ತು ಪಿಡಿಒ ಪದ್ದಣ್ಣ ಗಾವಾಡಿಯ ನಡುವೆ  ಚರಂಡಿ ಸ್ವಚ್ಛತೆ ವಿಚಾರದಲ್ಲಿ ಆರಂಭವಾದ ಜಗಳ ಅನುದಾನ ಹಂಚಿಕೆ ವಿಷಯಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ .

ಈ ಬಗ್ಗೆ ಸಖರಾಯಪಟ್ಟಣ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು ಪಿಡಿಒ ತಲೆಮರೆಸಿಕೊಂಡಿದ್ದಾರೆ . 

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ರಾಜಿ ಪಂಚಾಯಿತಿ ಮಾಡಲು ಯತ್ನಿಸಿದ್ದರೂ ಪಂಚಾಯಿತಿ ಕಾರ್ಯದರ್ಶಿ ವೆಂಕಟೇಶ್ ಉದ್ದೇಶಪೂರ್ವಕವಾಗಿ ಪಿಡಿಓರವರನ್ನು ತಲೆಮರೆಸಿಕೊಳ್ಳಲು ಸಹಕಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ .

ವಿಷಯ ತಿಳಿಯುತ್ತಿದ್ದಂತೆ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಖರಾಯಪಟ್ಟಣ ಠಾಣೆ ಎದುರು ರಸ್ತೆ ತಡೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು .ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದಿದ್ದು ಎಲ್ಲಿಗೆ ಹೋಗಿ ನಿಲ್ಲುತ್ತದೆೊ ಕಾದು ನೋಡಬೇಕು 


9ನೇ ತರಗತಿ ವಿದ್ಯಾರ್ಥಿನಿ ಅಕಾಲಿಕ ಮೃತ್ಯು- ನೇತ್ರದಾನ

 


ಮೂಡಿಗೆರೆ: ಇಲ್ಲಿನ ಬೆಥನಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ನಿನ್ನೆ ರಾತ್ರಿ  ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.  ಈಕೆಯ ಪೋಷಕರು ಎಂ.ಜಿ ರಸ್ತೆಯ ರಾಮೇಶ್ವರ ಮೆಡಿಕಲ್  ಅಂಗಡಿ ಬಳಿ ಚಿನ್ನ ಬೆಳ್ಳಿ  ಆಭರಣ  ರಿಪೇರಿ ಮಾಡುತ್ತಿದ್ದು ಮಹಾರಾಷ್ಟ್ರದ ಮೂಲದವರಾಗಿದ್ದಾರೆ .ವಿದ್ಯಾರ್ಥಿನಿ ಅಕಾಲಿಕ ನಿಧನದ ವಿಷಯ ತಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ, ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.  ಆಕೆಯ ಎರಡೂ ಕಣ್ಣುಗಳನ್ನು ಹಾಸನದ ನೇತ್ರ ಬ್ಯಾಂಕಿಗೆ   ದಾನ ಮಾಡಲು  ತಂದೆ ತಾಯಿ ನಿರ್ಧರಿಸಿದ್ದಾರೆ. 

ಶನಿವಾರ, ಅಕ್ಟೋಬರ್ 29, 2022

ಕ್ಯಾನ್ಸರ್ ; ಮುಕ್ತ ಚರ್ಚೆ ಅಗತ್ಯ : ಡಾ.ಮಂಜುನಾಥ್

 ಚಿಕ್ಕಮಗಳೂರು:- ಕ್ಯಾನ್ಸರ್  ಬಗ್ಗೆ ವೈದ್ಯರೊಂದಿಗೆ  ಮುಕ್ತವಾಗಿ ಚರ್ಚಿಸಿ   ಪರಿಹಾರ ಕಂಡುಕೊಳ್ಳುವಂತೆ  ಜಿಲ್ಲಾ ವಿಚಕ್ಷಣಾಧಿಕಾರಿ ಡಾ. ಹೆಚ್.ಕೆ.ಮಂಜುನಾಥ್ ಹೇಳಿದರು.    ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಬೆಂಗಳೂರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ  ಕ್ಯಾನ್ಸರ್ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ  ಭಾಗವಹಿಸಿ  ಮಾತನಾಡಿದರು.      ಅಧ್ಯಕ್ಷತೆಯನ್ನು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಆರ್.ಶ್ರೀನಿವಾಸ್ ವಹಿಸಿದ್ದರು. ಕಿದ್ವಾಯಿ ಆಸ್ಪತ್ರೆಯ ವೈದ್ಯರಾದ ಡಾ .ಮಹಾಂತೇಶ್, ವಿಘ್ನೇಶ್  ತಪಾಸಣೆ ನಡೆಸಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರದೀಪ್‌ಗೌಡ, ಆರೋಗ್ಯ ಸಮಿತಿ ಅಧ್ಯಕ್ಷ ಡಾ .ಕೆ.ಸುಂದರಗೌಡ,  ನಿರ್ದೇಶಕರಾದ ರಸೂಲ್‌ಖಾನ್, ಕೋಟೆ ಸೋಮಣ್ಣ, ಪವನ್, ಲಿಖಿತ್, ವಿನಾಯಕ್, ಬ್ರಹ್ಮಕುಮಾರಿ  ಭಾಗ್ಯಕ್ಕ   ಹಾಜರಿದ್ದರು.                      

ನಟ ಪುನೀತ್‌ರಾಜ್‌ಕುಮಾರ್ ಗೆ ಪುಷ್ಪನಮನ    ಚಿಕ್ಕಮಗಳೂರು :- ನಟ ಪುನೀತ್‌ರಾಜ್‌ಕುಮಾರ್  ಮೃತರಾಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಜಿಲ್ಲಾ ಡಾ| ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಆಜಾದ್‌ಪಾರ್ಕ್ ವೃತ್ತದಲ್ಲಿ ಪುನೀತ್ ಭಾವಚಿತ್ರಕ್ಕೆ ಶಾಲಾ ಮಕ್ಕಳೊಂದಿಗೆ ಪುಷ್ಪನಮನ ಸಲ್ಲಿಸಲಾಯಿತು.

 ಸಂಘದ ಜಿಲ್ಲಾಧ್ಯಕ್ಷ ಐ.ಕೆ.ಓಂಕಾರೇಗೌಡ  , ಸಂಘದ ಗೌರವಾಧ್ಯಕ್ಷ ಎಲ್.ವಿ.ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಲೋಕೇಗೌಡ, ಆಜಾದ್‌ಪಾರ್ಕ್ ಶಾಲೆ ಶಿಕ್ಷಕ ಲೋಕೇಶ್ವರಾಚಾರ್ ಹಾಗೂ ಶಾಲಾಮಕ್ಕಳು ಉಪಸ್ಥಿತರಿದ್ದರು.        



ಸಮುದಾಯ ಭವನ  -ಗುಣಮಟ್ಟಕ್ಕೆ ಮೆಚ್ಚುಗೆ         
ಚಿಕ್ಕಮಗಳೂರು: ರಾಜ್ಯ ಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಡಿಯಲ್ಲಿ ಹಿರೇಮಗಳೂರು ವ್ಯಾಪ್ತಿಯ ಲಕ್ಷ್ಮಿ ಪುರದ ಗೌರೇಶ್ವರ ಸಮುದಾಯ ಭವನದ ಮೇಲಂತಸ್ತಿನ ಕಾಮಗಾರಿ ಗುಣಮಟ್ಟ ವೀಕ್ಷಿಸಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.            ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾಹಿತಿ ನೀಡಿ,  ಶಾಸಕಿಯಾಗಿದ್ದ ಎ.ವಿ.ಗಾಯತ್ರಿ ಶಾಂತೇಗೌಡ ೩ ಲಕ್ಷ ರೂ. ವಿಧಾನ ಪರಿಷತ್ ಶಾಸಕ  ಗೋವಿಂದರಾಜು ೩ ಲಕ್ಷ ರೂ  ಶಾಸಕ ಸಿ.ಟಿ.ರವಿ  ೨ ಲಕ್ಷ ರೂ  ರಾಜ್ಯಸಭಾ ಸದಸ್ಯ ರೇಹಮಾನ್ ಖಾನ್  ೩ ಲಕ್ಷ ರೂ. ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಗಡೆ  ೧ ಲಕ್ಷ ರೂ.ಅನುದಾನ ನೀಡಿದ್ದಾರೆಂದರು .          

  

ಶುಕ್ರವಾರ, ಅಕ್ಟೋಬರ್ 28, 2022

ಜನವರಿ ೧೮ರಿಂದ ೨೨ವರೆಗೆ ಚಿಕ್ಕಮಗಳೂರು ಜಿಲ್ಲಾ ಉತ್ಸವ:

 ಚಿಕ್ಕಮಗಳೂರು : ಜನವರಿ ೧೮ರಿಂದ ೨೨ವರೆಗೆ ೪ ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾ  ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತದೆ. ಎಲ್ಲರೂ ಕೈಜೋಡಿಸಿ, ಒಗ್ಗಟ್ಟಾಗಿ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಹೇಳಿದ್ದಾರೆ.


ಉತ್ಸವದ ಹಿನ್ನೆಲೆಯಲ್ಲಿ ಶಾಸಕ ಸಿ ಟಿ ರವಿ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು .


ಕೆಂಪೇಗೌಡ ಪ್ರತಿಮೆಗೆ ಮೃತ್ತಿಕೆ ಸಂಗ್ರಹ                      

ಚಿಕ್ಕಮಗಳೂರು,  ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಪ್ರತೀ ಜಿಲ್ಲೆಯಿಂದ ಮೃತ್ತಿಕೆ ಸಂಗ್ರಹಿಸುವ ಅಭಿಯಾನಕ್ಕೆ ಜಿಲ್ಲೆಯಲ್ಲಿ  ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಚಾಲನೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ  ನ.೧೧ರಂದು ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಸರ್ಕಾರವು ಪ್ರತಿ ಜಿಲ್ಲೆಯ ಪ್ರತಿ ಗ್ರಾಮಗಳಿಂದ ಮಣ್ಣು ಸಂಗ್ರಹ ಅಭಿಯಾನವನ್ನು ಕೈಗೊಂಡಿದ್ದು, ಪ್ರತಿ ಜಿಲ್ಲೆಗೆ ತೆರಳಿ ಮಣ್ಣು ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿಸಿದರು.


ಬೀರಲಿಂಗೇಶ್ವರ ಸಮುದಾಯ ಭವನ ಉದ್ಘಾಟನೆ




ಚಿಕ್ಕಮಗಳೂರು :  ಕಡೂರು ತಾಲ್ಲೂಕು ನಿಡಘಟ್ಟ ಗ್ರಾಮದಲ್ಲಿ ನಿರ್ಮಿಸಲಾದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನವನ್ನು  ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ(ಬೈರತಿ) ಉದ್ಘಾಟನೆಗೊಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವ ಯಾವ 
ಕಾಗಿನೆಲೆ ಕನಕ ಗುರು ಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಮಹಾಸ್ವಾಮಿ . ನಿಡಘಟ್ಟ ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಎನ್.ಆರ್.ರೇಣುಕಮೂರ್ತಿ ,
 ಶಾಸಕ ಸಿ.ಟಿ.ರವಿ, ಮಾಜಿ ವಿಧಾನ ಪರಿಷತ್ ಸದಸ್ಯೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಿ.ಗಾಯತ್ರಿ ಶಾಂತೇಗೌಡ, ಮಾಜಿ ಸಚಿವ ಎಚ್.ಎಂ.ರೇವಣ್ಣ, ನಿಡಘಟ್ಟ ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ಎನ್.ಕೆ.ನಂಜುಂಡಪ್ಪ  ಉಪಸ್ಥಿತರಿದ್ದರು.





ಕೋಟಿಕಂಠ ಗಾಯನಕ್ಕೆ ಧ್ವನಿಯಾದ ವಿದ್ಯಾರ್ಥಿಗಳು ;ಉಸ್ತುವಾರಿ ಸಚಿವರು ಭಾಗಿ - ಶಾಸಕ ಸಿ ಟಿ ರವಿ ಸ್ಟೆಪ್ಸ್

 


ಚಿಕ್ಕಮಗಳೂರು: ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಕೋಟಿ ಕಂಠ ಕನ್ನಡ ಗಾಯನಕ್ಕೆ ಜಿಲ್ಲಾ ಕೇಂದ್ರ ಚಿಕ್ಕಮಗಳೂರು ಇಂದು ಸಾಕ್ಷಿಯಾಯಿತು .

ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಕನ್ನಡದ 6 ಹಾಡುಗಳನ್ನು ಸಾಮೂಹಿಕವಾಗಿ  ಹಾಡಿ ಮನಸೂರೆಗೊಂಡರು .

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಇತರರು ಪಾಲ್ಗೊಂಡಿದ್ದರು .ಹುಟ್ಟಿದರೆ ಕನ್ನಡ ನಾಡು ಹಾಡಿಗೆ ಶಾಸಕ ಸಿ ಟಿ ರವಿ ಇತರರು ಸ್ಟೆಪ್ಸ್ ಹಾಕಿದರು 

ದಲಿತರ ಮೇಲೆ ದೌರ್ಜನ್ಯ : ಕಾಫಿ ತೋಟದ ಮಾಲಿಕನ ಬಂಧನಕ್ಕೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ

 


ಚಿಕ್ಕಮಗಳೂರು :ತಾಲ್ಲೂಕು ಹುಣಸೆಹಳ್ಳಿ ಪುರದಲ್ಲಿ ತೋಟ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿ ಮಹಿಳೆಯೊಬ್ಬರ ಗರ್ಭಪಾತಕ್ಕೆ ಕಾರಣವಾಗಿರುವ ತೋಟದ ಮಾಲೀಕ ಮತ್ತು ಆತನ ಪುತ್ರನನ್ನು ಬಂಧಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಮುಖಂಡರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಘಟನೆ ನಡೆದು 15 ದಿನಗಳು ಕಳೆದರೂ ಈವರೆಗೂ ತೋಟದ ಮಾಲೀಕ ಜಗದೀಶ ಗೌಡ ಮತ್ತು ತಿಲಕ್ ಗೌಡನನ್ನು ಬಂಧಿಸಿಲ್ಲವೆಂದು ಮುಷ್ಕರ ನಿರತರು ಆರೋಪಿಸಿದ್ದಾರೆ .

ತೋಟ ಕಾರ್ಮಿಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವ ಬಾಳೆಹೊನ್ನೂರು  ಪೊಲೀಸರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳದಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ .

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ.

ಆರೋಪಿ ಬಿಜೆಪಿ ಮುಖಂಡ ನಾಗಿದ್ದು ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ .

ದಂಟರಮಕ್ಕಿ ಶ್ರೀನಿವಾಸ್, ಹೊನ್ನೇಶ್, ಗಿರೀಶ, ಅಂಗಡಿ ಚಂದ್ರು ,ಕೂದುವಳ್ಳಿ ಮಂಜುನಾಥ್,ಗೌಸ್ ಮುನೀರ್  ಸೇರಿದಂತೆ ಹಲವರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ .

ಕುಗ್ರಾಮಕ್ಕೆ 47ಲಕ್ಷ ರೂ. ಅನುದಾನ ;ಶಾಸಕರಿಗೆ ಕರಡಿ ಕುಣಿತದ ಮೂಲಕ ಸ್ವಾಗತ

ಕೊಪ್ಪ: ತಾಲ್ಲೂಕಿನ ಮೇಗುಂದಾ ಹೋಬಳಿಯ ಗುಡ್ಡೇತೋಟ ಗ್ರಾಮ ಪಂಚಾಯತಿ ಯಡಗುಂದ  ಗ್ರಾಮಕ್ಕೆ  ವಿವಿಧ  ಅಭಿವೃದ್ಧಿ ಗೆ ಸುಮಾರು 47 ಲಕ್ಷ ರೂ . ಅನುದಾನ ಮಂಜೂರು ಮಾಡಲಾಗಿದೆ .

ಯಡಗುಂದ , ಗೋಳುಗೋಡು ಅಂಗನವಾಡಿಗೆ ತಲಾ 12ಲಕ್ಷ  ಕಾರೋಳಿ ರಸ್ತೆಗೆ  8 ಲಕ್ಷ ರೂ ಮಂಜೂರು ಮಾಡಿದ್ದು ಕಾಮಗಾರಿಗಳ ಗುದ್ದಲೀ ಪೂಜೆಗೆ ಆಗಮಿಸಿದ  ಶಾಸಕ ಟಿ .ಡಿ. ರಾಜೇಗೌಡರನ್ನು   ಕರಡಿ ಕುಣಿತ , ಹಳ್ಳಿ ವಾದ್ಯಗಳೊಂದಿಗೆ  ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು.  


ಮೇಗುಂದಾ ಹೋಬಳಿಯ ಮುಖಂಡರು ಗಡ್ಡೇತೋಟ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಬೂತ್ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

ದೊಡ್ಡವರ ಸಣ್ಣತನ ; ಪಾರ್ಕಿಂಗ್ ಶುಲ್ಕ ಕಟ್ಟಲು ಶೃಂಗೇರಿಯಲ್ಲಿ ಕಂದಾಯ ಸಚಿವರ ಪಿ ಎ. ಕಿರಿಕಿರಿ ಆಡಿಯೋ ವೈರಲ್


ಚಿಕ್ಕಮಗಳೂರು : ಸಾವಿರ ರೂ ಸಂಬಳ, ಓಡಾಡಲು ಸರ್ಕಾರಿ ವಾಹನ ,ಆ ನಡುವೆ ಒಂದಿಷ್ಟು ಗೋಲ್ಮಾಲ್ ವ್ಯವಹಾರ . ಹೀಗಿದ್ದರೂ ಪಾರ್ಕಿಂಗ್ -ಟೋಲ್ ಇತರೆ  ಶುಲ್ಕ ಕಟ್ಟಲು ತಕರಾರು . ಇದು ಕೆಲ ಉನ್ನತ ಹುದ್ದೆಗಳಲ್ಲಿ ಇರುವವರ ರೋಗ .

ಶೃಂಗೇರಿಯಲ್ಲಿ ಇಂಥಹದೇ ಘಟನೆ ನಡೆದಿದೆ .ಆತ ಕಂದಾಯ ಸಚಿವ ಆರ್. ಅಶೋಕ್ ರವರ ಆಪ್ತ ಸಹಾಯಕ ಹನುಮಂತ ರಾಜು.
ಶೃಂಗೇರಿ ಮಠಕ್ಕೆ ಬಂದಿದ್ದ ಈ ವ್ಯಕ್ತಿ ಗಾಂಧಿ ಮೈದಾನದ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ್ದಾನೆ . ಶುಲ್ಕ 50 ರೂ.ನೀಡುವಂತೆ ಅಲ್ಲಿನ ವ್ಯಕ್ತಿ ತಿಳಿಸಿದ್ದಾನೆ .
ಆಗ ತನ್ನನ್ನು  ಪರಿಚಯಿಸಿಕೊಂಡ ಈ ವ್ಯಕ್ತಿ ಶುಲ್ಕ ಕೊಡುವ ಬದಲಾಗಿ ಯಾರಿಗೋ ಫೋನ್ ಮಾಡುವುದಾಗಿ ಹೇಳಿದ್ದಾನೆ.
ಇದಕ್ಕೆ ಒಪ್ಪದೆ ಶುಲ್ಕ  ಪಾವತಿಸುವಂತೆ ತಿಳಿಸಿದ್ದರೂ ಪಾವತಿಸದೆ ಹಾಗೇ ಹೋಗಿದ್ದಾನೆ ಈ ದೊಡ್ಡ ವ್ಯಕ್ತಿ  !! .ಈ ಘಟನೆಯ ಆಡಿಯೋ ಈಗ ವೈರಲ್ ಆಗಿದೆ .

ಗುರುವಾರ, ಅಕ್ಟೋಬರ್ 27, 2022

ಕಾಂತಾರ ಚಿತ್ರದಲ್ಲಿಯೂ ಜಾನಪದಕ್ಕೆ ಮಾತ್ರವಲ್ಲ ದೈವಗಳಿಗೂ ಅವಮಾನವಾಗಿದೆ ಎಂಬ ಆರೋಪಗಳಿವೆ :ಸಚಿವ ಸುನಿಲ್ ಕುಮಾರ್ ಗೆ ಅಮಿನ್ ಮಟ್ಟು ಪ್ರಶ್ನೆ

              ಹೆಡ್ ಬುಷ್ ಚಿತ್ರದಲ್ಲಿ  ನಮ್ಮ ಜನಪದ ಕಲೆಯಾದ ವೀರಗಾಸೆಗೆ ಅಪಮಾನವಾಗಿದೆ ಎಂಬ ಆರೋಪದ ಬಗ್ಗೆ ನಮ್ಮ   ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ವ್ಯಕ್ತಪಡಿಸಿದ ಕಾಳಜಿ ಅಭಿನಂದನಾರ್ಹ.ಸಚಿವರ ಟ್ವೀಟ್ ನೋಡಿಸಿನೆಮಾವನ್ನು ಸಿನೆಮಾವಾಗಿಯೇ ನೋಡಬೇಕು‌ ಎನ್ನುವ ನನ್ನ ಅಭಿಪ್ರಾಯವನ್ನು‌ ಪುನರ್ ಪರಿಶೀಲನೆಗೆ ಒಡ್ಡಿದ್ದೇನೆ.  'ಕಾಂತಾರ' ಚಿತ್ರ ನೋಡಿದ ಮುಂಬೈನ ನನ್ನ ಗೆಳೆಯನೊಬ್ಬ ಇತ್ತೀಚೆಗೆ ತನ್ನ ಮನಸ್ಸಲ್ಲಿ ಮೂಡಿರುವ ಪ್ರಶ್ನೆಗಳನ್ನು ನನ್ನಲ್ಲಿ ಹಂಚಿಕೊಂಡಿದ್ದ. ನನ್ನ ಅರಿವಿನ ಮಿತಿಯಲ್ಲಿ ಆ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೆ.ಆ ಪ್ರಶ್ನೋತ್ತರ ಇಲ್ಲಿದೆ:ಪಂಜುರ್ಲಿ-ಗುಳಿಗ ಭೂತಗಳು ಮನುಷ್ಯನ ಜೀವ ತೆಗೆಯುವಷ್ಟು ವಯಲೆಂಟ್ ಭೂತವೇ? ಎನ್ನುವುದು ಆ ಗೆಳೆಯನ ಮೊದಲ ಪ್ರಶ್ನೆ


.“  ಉಗ್ರಸ್ವರೂಪದ ಭೂತಗಳು ಇರುವುದು‌ ನಿಜ. ಆದರೆ  ನನಗೆ ತಿಳಿದ ಹಾಗೆ ದೈವ ಮೈಮೇಲೆ ಬಂದ ನಂತರ ಜೀವ ತೆಗೆದ ಉದಾಹರಣೆಗಳಿಲ್ಲ ಇಲ್ಲ ಎಂದೆ. ತಪ್ಪು ಮಾಡಿದವರು ಭೂತಗಳ ಭಯದಿಂದ ಸತ್ತ ಉದಾಹರಣೆಗಳಿವೆ.  ಪಂಜುರ್ಲಿ-ಗುಳಿಗ ಮಾತ್ರವಲ್ಲ ಸಾವಿರಕ್ಕೂ ಮಿಕ್ಕಿ ಭೂತಗಳಿವೆಯಲ್ಲಾ, ಅವು ಯಾವುದೂ ಕೂಡಾ ಭೂತದ ವೇಷದಲ್ಲಿದ್ದಾಗ ಮನುಷ್ಯನ ಕಿರುಬೆರಳಿಗೆ ಕೂಡಾ ಬೇನೆ ಮಾಡಿಲ್ಲ. ಪಾಡ್ದನಗಳಲ್ಲಿ ಹೇಳುವಂತೆ ಅದು ತಾಯಿ ರೀತಿ ಸಾಕುತ್ತಾ, ಮಾವನಂತೆ ರಕ್ಷಿಸುತ್ತಾ ಬಂದಿವೆಯೇ ಹೊರತು ಯಾರನ್ನೂ ಸಾಯಿಸಿಲ್ಲ” ಎಂದೆ.

“ಹಾಗಿದ್ದರೆ ಕಾಂತಾರ ಚಿತ್ರದಲ್ಲಿ ತೋರಿಸಿರುವುದು ದೈವಕ್ಕೆ ಮಾಡಿದ ಅಪಚಾರವಲ್ಲವೇ? ಎಂದು ಆತ ಕೇಳಿದ."ಭೂತ-ದೈವಗಳು ಕಟ್ಟು-ಕ್ರಮ ಇಲ್ಲದೆ ಇದ್ದಕ್ಕಿದ್ದ ಹಾಗೆ ಯಾರ ಮೈಮೇಲೆ ಆವಾಹನೆ ಬರುತ್ತಾ? ಎನ್ನುವುದು ಗೆಳೆಯನ ಎರಡನೇ ಪ್ರಶ್ನೆ.“ ಹಾಗೆಲ್ಲ ಎಲ್ಲರೂ ಭೂತ-ದೈವಗಳ ಪಾತ್ರಿಗಳಾಗಲು ಸಾಧ್ಯವಿಲ್ಲ. ಅವರಿಗೆ ಅಧಿಕೃತವಾಗಿ ಊರ ಸಮಸ್ತರು ಸೇರಿ ಎಣ್ಣೆಬೂಳ್ಯ ಕೊಡಬೇಕು. ಅದರ ನಂತರ ಅವನು ಕೋಲದ ಚಪ್ಪರದಡಿ ನಿಂತಾಗ ಮಧ್ಯಸ್ತಗಾರರು ದೈವದ ಇತಿಹಾಸವನ್ನು ಹೇಳಿ ಪಾತ್ರಿಯ ಮೈಮೇಲೆ ದೈವ ಬರುವಂತೆ ಎಲ್ಲರ ಜೊತೆ ಪ್ರಾರ್ಥಿಸುತ್ತಾರೆ. ಹಾಗೆ ಹೀಗೆ ಯಾರೋ ಬಿದ್ದಲ್ಲಿಂದ ಎದ್ದು ಭೂತ ಮೈಮೇಲೆ ಬಂದಿದೆ ಎಂದು ಹೇಳುವುದು ಸಂಪ್ರದಾಯಕ್ಕೆ ವಿರುದ್ದವಾಗಿರುವುದು. ಹಾಗೆ ಸಿಕ್ಕಸಿಕ್ಕವರ ಮೈಮೇಲೆ ಬರುವುದು ಸತ್ತು ಹೋದ ಸಂಬಂಧಿಕರ ಕುಲೆಗಳು ಮಾತ್ರ” ಎಂದೆ.ಹಾಗಿದ್ದರೆ   ಗಾಯಗೊಂಡು ಬಿದ್ದಿರುವ ಶಿವನ ಮೈಮೇಲೆ ಗುಳಿಗ ಬಂದಿರುವುದು ಅಪಚಾರ ಅಲ್ವಾ ಎಂದು ಗೆಳೆಯ ಕೇಳಿದ. ‘” ಭೂತ ಕಟ್ಟುವವರು ಎಂದಾದರೂ ವೇಷ ಹಾಕಿದ ನಂತರ ಸ್ವಾರ್ಥಿಗಳಾಗಿ ನಡೆದುಕೊಂಡದ್ದು, ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿದ್ದು ಇದೆಯೇ? ಎನ್ನುವುದು ಆತನ ಇನ್ನೊಂದು ಪ್ರಶ್ನೆ. “ಭೂತಗಳ ಕತೆಯಲ್ಲಿ ಇಂತಹ ಸೇಡು ತೀರಿಸಿಕೊಳ‍್ಳುವ ಘಟನಾವಳಿಗಳು ಇವೆ. ಆದರೆ ವೇಷ ಹಾಕುವ ನಲಿಕೆಯವರು, ಪಂಬದರು, ಪಾಣಾರ್ ಗಳು ತಮ್ಮ ಸ್ವಾರ್ಥಕ್ಕಾಗಿ ಭೂತಗಳನ್ನು ದುರುಪಯೋಗ ಮಾಡಿಕೊಂಡ ಉದಾಹರಣೆಗಳು ಕಡಿಮೆ,‌ ಆ ರೀತಿ ನಡೆದುಕೊಂಡವರಿಗೆ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ಇದೆ. ಅವರು ವೇಷ ಹಾಕಿದ ನಂತರ ದೈವಗಳಾಗಿ ನಡೆದುಕೊಳ್ಳುತ್ತಾರೆಯೇ ಹೊರತು ಪಾತ್ರಿಗಳಾಗಿ ಅಲ್ಲ” ಎಂದೆ.

“ ಆದರೆ ಕಾಂತಾರ ಚಿತ್ರದಲ್ಲಿ ದೈವ ನರ್ತಕ ತಮ್ಮ ಪರಿವಾರದ ಭೂಮಿಯ ರಕ್ಷಣೆಗಾಗಿ ಗುಳಿಗ ಭೂತದ ಆವಾಹನೆಯಲ್ಲಿ ಸೇಡು ತೀರಿಸಿಕೊಳ್ಳುವ ಘಟನೆ ಇದೆ ಇದು ಕೂಡಾ ಆ ಜನಾಂಗಕ್ಕೆ ಮಾಡಿರುವ ಅಪಚಾರ ಅಲ್ಲವೇ” ಎಂದು ನನ್ನ ಗೆಳೆಯ ಪ್ರಶ್ನಿಸಿದ. ಆತನೇ ಮುಂದುವರಿದು  “ ಕಂಬಳವನ್ನು ಜಂಟಲ್ ಮೆನ್ ಗೇಮ್ ಎನ್ನುತ್ತೀರಾ? ಕಾಂತಾರ ಚಿತ್ರದಲ್ಲಿ ವಂಚನೆ, ಹೊಡೆದಾಟ ಇದೆಯಲ್ಲ ಎಂದು ನಾಲ್ಕನೆಯ ಪ್ರಶ್ನೆ ಹಾಕಿದ.

“ ಕಂಬಳದ ಜೊತೆ ಕೆಲವೊಂದು ಮೂಡನಂಬಿಕೆಗಳು ಥಳಕು ಹಾಕಿರುವುದು ಮತ್ತು ಅದು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ನಿಜವಾದರೂ ಅದು ಈಗಲೂ ಜಂಟಲ್ ಮೆನ್ ಗೇಮ್. ಈಗಿನ ರೀತಿಯಲ್ಲಿ ಓಟದ ಸಮಯ ಅಳೆಯಲು ವೈಜ್ಞಾನಿಕವಾದ ವ್ಯವಸ್ಥೆ ಇಲ್ಲದಿದ್ದಾಗಲೂ ಮೋಸ-ವಂಚನೆಗಳು ನಡೆದಿರುವುದು ಮತ್ತು ಅದಕ್ಕಾಗಿ ಹೊಡೆದಾಟಗಳು ನಡೆದದ್ದು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು”’ ಎಂದೆ. 

“ಹಾಗಿದ್ದರೆ ಇದು ಕಂಬಳ ಕ್ರೀಡೆಯಲ್ಲಿನ ಜಗಳ/ಹೊಡೆದಾಟವೆಲ್ಲ  ಅಪಚಾರ ಅಲ್ಲವೇ?”” ಎಂದು ಗೆಳೆಯ ಕೇಳಿದ.ಭೂ ಸುಧಾರಣೆಯ ಫಲಾನುಭವಿಯೂ ಆಗಿರುವ ಗೆಳೆಯ ಕೇಳಿದ   ಕೊನೆಯ ಪ್ರಶ್ನೆ ಜೊತೆ ಉತ್ತರವನ್ನೂ ಹೇಳಿದ್ದ:“  ನೋಡು ಮಾರಾಯ ನೀನು ಏನೇ ಹೇಳು, ನಮ್ಮೂರಿನ ಭೂಮಾಲೀಕರು, ಉತ್ತರಪ್ರದೇಶ-ಬಿಹಾರದವರ ರೀತಿ ಗುಡಿಸಲುಗಳ ಮುಂದೆ ಕಾಲು ಮೇಲೆ ಕಾಲು ಹಾಕಿ ಒಕ್ಕಲಿನ ಮನೆಗಳಿಗೆ ಬೆಂಕಿ ಹಚ್ಚುವವರಲ್ಲ, ಅದೂ ಒಂದು ಮಗುವಿಗೂ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುವಷ್ಟು ನಿರ್ದಯರಲ್ಲವಲ್ಲಾ’ ಎಂದು ಹೇಳಿದ.

“” ಹೌದು,  ಜಮೀನಿಗೆ ಸಿಕ್ಕಾಪಟ್ಟೆ ಬೆಲೆ ಬಂದಿರುವ ಈ ಕಾಲದಲ್ಲಿ ಭೂಸುಧಾರಣೆ ಜಾರಿಗೆ ತಂದಿದ್ದರೆ ಸ್ವಲ್ಪ ರಕ್ತಪಾತವಾಗುತ್ತಿತ್ತೋ ಏನೋ? ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶೇಕಡಾ 90ರಷ್ಟು ಧಣಿಗಳು ಬೇರೆ ಜಿಲ್ಲೆಗಳ ಧಣಿಗಳಂತೆ ಭೂ ಸುಧಾರಣೆ ಕಾಯ್ದೆಯ ಕಣ್ಣಿಗೆ ಮಣ್ಣೆರೆಚಿ ನೂರಾರು ಎಕರೆ ಭೂಮಿ ಉಳಿಸಿಕೊಂಡವರಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 70-80ರಷ್ಟು ಭೂ ಸುಧಾರಣೆ ಜಾರಿಗೆ ಬಂದಿದೆ. 

ಭೂಮಾಲೀಕರು ಒಂದು ಹಸುಳೆಯನ್ನು ಕೊಲ್ಲುವಷ್ಟು ಕ್ರೂರಿಗಳಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಚಿತ್ರದಲ್ಲಿ ಧಣಿಗಳ ಜಾತಿಯನ್ನು ನೇರವಾಗಿ ಹೇಳದೆ ಇದ್ದರೂ ಆ ಧಣಿ ಬಂಟ ಸಮುದಾಯದವರು ಎಂದು ಊಹಿಸಿಕೊಳ್ಳಬಹುದು. ದಕ್ಷಿಣ ಕನ್ನಡದ ಬಹುತೇಕ ಜಮೀನ್ದಾರರು ಬಂಟ,ಬ್ರಾಹ್ಮಣ ಮತ್ತು ಜೈನರು. 

ಇವರಲ್ಲಿ ಬಂಟರು ಮಾತ್ರ ಮಾಂಸಹಾರಿಗಳು. ಚಿತ್ರದ ಧಣಿ ಕೋಳಿ-ಹಂದಿಪ್ರಿಯನಾದ ಕಾರಣ ಆತ ಬಂಟ ಜಾತಿಯವನೆಂದು ಹೇಳಬಹುದು ಎಂದು ಹೇಳಿದೆ.(ಹಾಗಿದ್ದರೆ ಇದು ಬಂಟ ಸಮಾಜಕ್ಕೆ ಮಾಡಿರುವ ಅಪಚಾರ ಅಲ್ವೇ? ಎನ್ನುವುದು ನನ್ನ ಗೆಳೆಯನ ಪ್ರಶ್ನೆ.ಈ  ಪ್ರಶ್ನೆಗಳಿಗೆ  ತಿಳಿದಮಟ್ಟಿಗೆ ನಾನು ಉತ್ತರಿಸಿದ್ದೇನೆ. ಉಳಿದಂತೆ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಉತ್ತರಿಸಬೇಕು

ಹೆಡ್ ಬುಷ್ ನಲ್ಲಿನ ವೀರಗಾಸೆಯ ಬಗೆಗಿನ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕೃತಿಗೆ ಅವಮಾನವಾಗದಂತೆ ನೋಡಿಕೊಳ‍್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿರುವ ಸುನೀಲ್ ಕುಮಾರ್ ಅವರೇ, ಕಾಂತಾರ ಚಿತ್ರದಲ್ಲಿಯೂ ತುಳುನಾಡಿನ ಜಾನಪದಕ್ಕೆ ಮಾತ್ರವಲ್ಲ ದೈವಗಳಿಗೂ ಅವಮಾನವಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಚಿತ್ರ ನಿರ್ಮಾಪಕ-ನಿರ್ದೇಶಕರಿಗೂ ಮರು ಚಿಂತನೆ ನಡೆಸಲು ಕರೆ ನೀಡುತ್ತೀರಾ?- ದಿನೇಶ್ ಅಮಿನ್ ಮಟ್ಟು

ಬಾತ್ ಟವೆಲ್ ಉಟ್ಟು ಕಾಲೇಜಿಗೆ ಹೋಗುವ ವಿದ್ಯಾರ್ಥಿ !!

  19 ವರ್ಷ ಪ್ರಾಯದ ಈ ಭೂಪನಿಗೆ ಡ್ರೆಸ್ ಅಂದರೆ ಆಗದು. ಎಷ್ಟೆಂದರೆ, ಯಾರಾದರೂ ಧರಿಕೊಳ್ಳು ಅಂತ ಒತ್ತಾಯ ಮಾಡಿ ಡ್ರೆಸ್ ಗ್ರಿಸ್ ಕೊಟ್ಟರೆ ಅದನ್ನು ಹರಿದು ಚಿಂದಿ ಮಾಡಿ ಹಾಕುತ್ತಾನೆ.

 ಆದರೆ, ಕಾಲೇಜಿಗೆ ಹೋಗಬೇಕಲ್ಲ, ಹೌದು, ಬಿಎ ಕಲಿಯಲು ಕಾಲೇಜಿಗೆ ಹೋಗುತ್ತಾನೆ, ಕಾಲೇಜಿಗೆ ಹೋಗುವಾಗ ಅಂಡರ್ ವೇರ್ ಮತ್ತು ಅದರ ಮೇಲೆ ಒಂದು ಬಾತ್ ಟವೆಲ್ ಹೊದ್ದುಕೊಂಡು ಹೋಗುತ್ತಾನೆ. ಮಧ್ಯಪ್ರದೇಶದ ಪಿಚ್ಚೋಡಿ ಹಳ್ಳಿಯ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಣ್ಣಯ್ಯ ಅಭಾಶಿಗೆ ಚಿಕ್ಕಂದಿನಿಂದಲೂ ಬಟ್ಟೆ ಅಂದರೆ ಆಗದು. 

ಇಷ್ಟು ವರ್ಷಗಳ ಕಾಲ ಅವನ ಬಡ ತಾಯಿ ಅವನಿಗೆ ಬಟ್ಟೆ ಹಾಕಲು ಶತಾಯಗತಾಯ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆದರೆ, ಅವನನ್ನು ವಿದ್ಯಾವಂತನಾಗಿ ಮಾಡಲು ಪಣ ತೊಟ್ಟ ಆಕೆ ಶಾಲೆಯ ಶಿಕ್ಷಕರು, ಅಧಿಕಾರಿಗಳಳ ಕೈಕಾಲು ಹಿಡಿದು, ಹೇಗೋ 12ನೇ ತರಗತಿ ತನಕ ಅಂಡರ್ ವೇರಲ್ಲಿ ಅವನನ್ನು ಶಾಲೆಗೆ ಕಳಿಸಿ, ಓದಿಸುವಲ್ಲಿ ಸಫಲಳಾದಳು. 

ಆದರೆ, ಡಿಗ್ರಿ ಮಾಡಲು ಕಾಲೇಜಿಗೆ ಸೇರಿಸುವ ಸಮಯದಲ್ಲಿ ಕಣ್ಣಯ್ಯನ ಆ ವಿಚಿತ್ರ ನಡವಳಿಕೆಯಿಂದಾಗಿ ಸಮಸ್ಯೆ ಎದುರಾಯಿತು. ಕಣ್ಣಯ್ಯ ಓದಿನಲ್ಲಿ ತುಂಬಾ ಹುಷಾರಿದ್ದಾನೆ. ಅವನ ಕೈಬರಹವೂ ಬಹು ಸುಂದರ. ಅಂತೆಯೇ ಅವನ ನಡವಳಿಕೆ ಕೂಡಾ. ಪಾಠೇತರ ಚಟುವಟಿಕೆಗಳಲ್ಲೂ ಮುಂದಿದ್ದಾನೆ. ಹೀಗಾಗಿ ಶಿಕ್ಷಕರಿಗೆ ಅವನು ಅಚ್ಚುಮೆಚ್ಚಿನ ಶಿಷ್ಯನಾಗಿರುವುದರಿಂದ ಅವರೆಲ್ಲ ಸೇರಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡು, ಅವನನ್ನು ಒಂದು ಸ್ಪೆಷಲ್ ಕೇಸಾಗಿ ಪರಿಗಣಿಸಿ ಕಾಲೇಜಿಗೆ ಸೇರಿಸಿಕೊಳ್ಳಲು ಒಪ್ಪಿಸಿದರು. ಕಣ್ನಯ್ಯ ಈಗ ಎರಡನೇ ವರ್ಷದ ಬಿಎ ಮಾಡುತ್ತಿದ್ದಾನೆ. ಪ್ರತೀದಿನ ಚಪ್ಪಲಿ, ಬ್ಯಾಕ್ ಪ್ಯಾಕ್, ಅಂಡರ್ ವೇರ್ ಮತ್ತು ಬಾತ್ ಟವಲಲ್ಲಿ ಕಾಲೇಜಿಗೆ ಹೋಗಿ ಬರುತ್ತಾನೆ. ಶಿಕ್ಷಕರಂತೆ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಅವನನ್ನು ಒಪ್ಪಿಕೊಂಡಿದ್ದಾರೆ

(


G.T.satish ವಾಲ್ ನಿಂದ ).Panju Ganguli

ಅಪ್ಪು ಚಿತ್ರ ಗಂಧದ ಗುಡಿಯ ಪ್ರಚಾರಕ್ಕೆ ಇಳಿದ ಕಾಫಿನಾಡು ಚಂದು


  ಚಿಕ್ಕಮಗಳೂರು : ಅಪ್ಪು ಅಭಿನಯದ ಗಂಧದಗುಡಿ ಚಿತ್ರದ ಪ್ರಚಾರಕ್ಕೆ  ಕಾಫಿನಾಡ ಚಂದು ಇಳಿದಿದ್ದಾನೆ .ತಲೆಯಲ್ಲಿ ಗಂಧದ ಗುಡಿ ಹೆಸರು ಹಾಕಿಸಿಕೊಂಡು  ಚಿಕ್ಕಮಗಳೂರು ನಗರದಲ್ಲಿ ಪ್ರಚಾರ ಮಾಡುತ್ತಿದ್ದಾನೆ  ಪುನೀತ್ ಅಣ್ಣನ ಸಿನಿಮಾ ಎತ್ತರಕ್ಕೆ ಬೆಳೆಯಲಿ ಎಂದು ಮನವಿ     ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ವಿಶ್ ಮೂಲಕ  ಹೆಸರಾಗಿರೋ ಚಂದುತನ್ನ ವಿಭಿನ್ನ ಶೈಲಿಯಲ್ಲಿ ಪ್ರಚಾರಕ್ಕೆ ಇಳಿದು ಗಮನ ಸೆಳೆದಿದ್ದಾನೆ 

ಬುಧವಾರ, ಅಕ್ಟೋಬರ್ 26, 2022

ಪೌರಕಾರ್ಮಿಕರ ಪಾದ ಪೂಜೆ ;ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಿಸಿದ ಶಾಸಕ ಸಿ. ಟಿ. ರವಿ

 


ಚಿಕ್ಕಮಗಳೂರು : ಅತ್ತ ಪ್ರಧಾನಿ ನರೇಂದ್ರ ಮೋದಿ  ಸೈನಿಕರೊಂದಿಗೆ ದೀಪಾವಳಿ ಆಚರಿಸಿದರೆ ಇತ್ತ ಶಾಸಕ      ಸಿ. ಟಿ. ರವಿ ಪೌರಕಾರ್ಮಿಕರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು .

ಪೌರ ಕಾರ್ಮಿಕರ ಬಡಾವಣೆಗೆ ತೆರಳಿ ,ಹಿರಿಯ ಕಾರ್ಮಿಕರಿಗೆ ಆರತಿ ಎತ್ತಿ ಪಾದಪೂಜೆ ಮಾಡಿ,ಹೂವಿನ ಹಾರ ಹಾಕಿ  ಗೌರವ ಸಲ್ಲಿಸಿದರು . ಶಾಸಕರ ವಿಶಿಷ್ಟ ರೀತಿಯ ದೀಪಾವಳಿ ಆಚರಣೆಗೆ ಪೌರಕಾರ್ಮಿಕರು ಮನಸೋತರು.

ಪೌರಕಾರ್ಮಿಕರ ಮಕ್ಕಳೊಂದಿಗೆ ಬೆರೆತು ಪಟಾಕಿ ಸಿಡಿಸಿದರು .ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ,ಸಿಡಿಎ ಅಧ್ಯಕ್ಷ ಆನಂದ್ ,ಪೌರಾಯುಕ್ತ ಬಸವರಾಜ್ ,ನಗರಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್ ,ತಮ್ಮಯ್ಯ  ಇತರರು ಜತೆಗೂಡಿದ್ದರು .

ಸೋಮವಾರ, ಅಕ್ಟೋಬರ್ 24, 2022

ಸಂಭ್ರಮಕ್ಕೆ ಸಾಕ್ಷಿಯಾಯಿತು ದೇವಿರಮ್ಮ ಬೆಟ್ಟ ; ಸಾವಿರಾರು ಭಕ್ತರಿಂದ ದೇವಿಯ ದರ್ಶನ

 


ಚಿಕ್ಕಮಗಳೂರು : ಜಿಲ್ಲೆಯ ಶಕ್ತಿ ದೇವತೆಗಳಲ್ಲಿ ಒಂದಾದ ಮಲ್ಲೇನಹಳ್ಳಿಯ ದೇವಿರಮ್ಮ ಬೆಟ್ಟ  ಸಂಭ್ರಮಕ್ಕೆ ಸಾಕ್ಷಿಯಾಯಿತು .

ಸಾವಿರಾರು ಭಕ್ತರು ತಂಡೋಪತಂಡವಾಗಿ ಬೆಟ್ಟಕ್ಕೆ ಲಗ್ಗೆ ಇಟ್ಟರು .ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಸೂರ್ಯೋದಯಕ್ಕೆ ಮುನ್ನವೇ ಕಡಿದಾದ ಹಾದಿಯಲ್ಲಿ  ಬೆಟ್ಟ ಏರತೊಡಗಿದರು.

ಕರೋನ ಹಿನ್ನಲೆಯಲ್ಲಿ ಕಳೆದ 2ವರ್ಷಗಳಿಂದ   ದೇವಿರಮ್ಮ ಬೆಟ್ಟಕ್ಕೆ ಭಕ್ತರು  ಏರುವುದನ್ನು ನಿರ್ಬಂಧಿಸಲಾಗಿತ್ತು . ಈ ವರ್ಷ ಎಲ್ಲವೂ ಮುಕ್ತ ಮುಕ್ತ . 

ಬೆಟ್ಟವೇರಿ ದೇವಿಯ ದರ್ಶನ ಪಡೆದು  ಪ್ರಕೃತಿ ಸೌಂದರ್ಯ ಆಹ್ಲಾದಿಸಿ ಹಿಂದಿರುಗಿದರು .ಪುನೀತ್ ಭಾವಚಿತ್ರ ಇದ್ದ ಬಾವುಟದೊಂದಿಗೆ ಆಗಮಿಸಿದ ಪುನೀತ್ ಅಭಿಮಾನಿಗಳು ಎಲ್ಲರ ಗಮನ ಸೆಳೆದರು .

ಪ್ರಕೃತಿಯು ಭಕ್ತರ ಆಶಯಕ್ಕೆ ತಣ್ಣೀರು ಎರಚಲಿಲ್ಲ .ಬೆಟ್ಟ ಪೂರ್ತಿ ಭಕ್ತರಿಂದ ಗಿಜಿಗುಡುತ್ತಿತ್ತು .ಜಿಲ್ಲಾಡಳಿತ ಅಗತ್ಯ ಬಂದೋಬಸ್ತ್ ಮಾಡಿತ್ತು 


ಶನಿವಾರ, ಅಕ್ಟೋಬರ್ 22, 2022

ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ದೇಣಿಗೆ ಸಂಗ್ರಹದ ಸುತ್ತೋಲೆ: ಸಿಪಿಐ ತೀವ್ರ ಟೀಕೆ

 ಚಿಕ್ಕಮಗಳೂರು :ಶಾಲೆಗಳಲ್ಲಿನ ಮೂಲ ಸೌಕರ್ಯಗಳನ್ನು ಒದಗಿಸಲು ಶಾಲಾ ಮಕ್ಕಳ ಪೋಷಕರಿಂದ ದೇಣಿಗೆ ಸಂಗ್ರಹಿಸುವ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆಯ ಕ್ರಮ ರಾಜ್ಯ ಸರ್ಕಾರ ಆರ್ಥಿಕ ದಿವಾಳಿತನ ಎದುರಿಸುತ್ತಿರುವುದರ ಸಂಕೇತವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಟೀಕಿಸಿದೆ .

 ಈ ಕೂಡಲೆ ದೇಣಿಗೆ ಸಂಗ್ರಹದ ಸುತ್ತೋಲೆ ಹಿಂಪಡೆಯಬೇಕೆಂದು  ಪಕ್ಷ (ಸಿಪಿಐ) ಆಗ್ರಹ ಪಡಿಸಿದ್ದು ಶಾಲಾ ಶಿಕ್ಷಣ ಮಕ್ಕಳ ಸಂವಿಧಾನ ಬದ್ಧ ಮೂಲಭೂತ ಹಕ್ಕಾಗಿದೆ.ಮಕ್ಕಳ ಕಲಿಕೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಾಗರೀಕ ಸರ್ಕಾರದ ಜವಾಬ್ದಾರಿ ಯಾಗಿದೆ. ಸುತ್ತೋಲೆ ಹಿಂಡೆಯದಿದ್ದರೆ   ರಾಜ್ಯಾದ್ಯಂತ ಚಳವಳಿ ರೂಪಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ  ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್ ಎಚ್ಚರಿಸಿದ್ದಾರೆ 


ಕಾಡೂಗೊಲ್ಲರ ಸಂಘಟಿತ ಹೋರಾಟಕ್ಕೆ ಶಾಸಕರ ಬೆಂಬಲ

 ಚಿಕ್ಕಮಗಳೂರು-ಕಾಡುಗೊಲ್ಲರ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು,ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು. ಕಾಡೂಗೊಲ್ಲರ  ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. . 

ಎಸ್‌ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸುವ  ಹೋರಾಟದಲ್ಲಿ  ಗುರಿ ಮುಟ್ಟಿಸುವವರೆಗೆ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.  


 ಶಾಸಕ ಬೆಳ್ಳಿ ಪ್ರಕಾಶ್  ಕಾಡುಗೊಲ್ಲರ ಬೇಡಿಕೆ ಈಡೇರಿಕೆಗೆ ಶ್ರಮಿಸುತ್ತೇನೆ ಎಂದು ಭರವಸೆ ಕೊಟ್ಟರು 

ರಾಜ್ಯದಲ್ಲಿ 'ಫಸಲ್‌ ಬಿಮಾ ಯೋಜನೆ' ಫೇಲ್‌ : ಪಾವತಿಸಿದ ಹಣದಷ್ಟೂ ಬಂದಿಲ್ಲ !! ;

 


 ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣ ಫೇಲ್‌ ಆಗಿದೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳೂ ಬೆಳೆ ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಕಷ್ಟಕಾಲದಲ್ಲಿ ರೈತರ ನೆರವಿಗೆ ಬರಬೇಕಿದ್ದ ಬೆಳೆ ವಿಮೆ ಯೋಜನೆಯು ರಾಜ್ಯದಲ್ಲಿ ಅನ್ನದಾತರ ವಿಶ್ವಾಸವನ್ನು ಕಳೆದುಕೊಂಡು ವರ್ಷಗಳೇ ಸಂದಿವೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳೂ  ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ 'ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ' ಸಂಪೂರ್ಣ ಫೇಲ್‌ ಆಗಿದೆ.ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿ, ನೆರೆ ಹಾವಳಿಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, 2019-20ನೇ ಸಾಲಿನಿಂದ ಈವರೆಗೆ ಒಟ್ಟು 53.94 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾಳಾಗಿದೆ. ಇಂತಹ ಸಂಕಷ್ಟ ಕಾಲದಲ್ಲಿ ಬೆಳೆ ವಿಮೆ ಆಸರೆಯಾಗಬೇಕಿತ್ತು. ಆದರೆ, ರೈತರು ತಮ್ಮ ಬೆವರು ಸುರಿಸಿ ಕಟ್ಟಿದ ಪ್ರೀಮಿಯಂ ಕೂಡ ಕೈಗೆ ಸಿಗುತ್ತಿಲ್ಲ..!ಬೆಳೆ ಹಾಳಾದ ಸಂದರ್ಭದಲ್ಲಿ ನಿಗದಿತ ಪರಿಹಾರದ (ಸಮ್‌ ಅಶ್ಯೂರ್ಡ್‌) ಬದಲಿಗೆ ಕಟ್ಟಿದ ಪ್ರೀಮಿಯಂ ಕೂಡ ರೈತರಿಗೆ ಸಿಗುತ್ತಿಲ್ಲ. ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟಕ್ಕೆ ಪರಿಹಾರ ಪಾವತಿಸಬೇಕಿದೆ. ಆದರೆ, ಆಣೆವಾರು ಮಾಡುವಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವಿಮೆ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿರುವುದು, ವಿಮಾ ಷರತ್ತುಗಳಲ್ಲಿ ಲೋಪವಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ರೈತರು ಸಂತ್ರಸ್ತರಾಗಿದ್ದಾರೆ. ರೈತರು ತಮ್ಮ ಈ ಎಲ್ಲ ಕಷ್ಟವನ್ನು ಹೇಳಿಕೊಳ್ಳಲು ವಿಮೆ ಕಂಪೆನಿಗಳ ಟೋಲ್‌ ಫ್ರೀ ಸಂಖ್ಯೆಗಳೇ ಕೆಲಸ ಮಾಡುತ್ತಿಲ್ಲ.*ಸಾಲದಲ್ಲೇ ಕಂತು ಕಡಿತ:*ಬ್ಯಾಂಕ್‌, ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ರೈತರಿಗೆ ಸಾಲದ ಮೊತ್ತ ನೀಡಲಾಗುತ್ತದೆ. ಕಡ್ಡಾಯ ವ್ಯವಸ್ಥೆಯಂತಾಗಿರುವ ಈ ವಿಮೆ ಕಂತು ಬಹುತೇಕ ವಿಮಾ ಕಂಪೆನಿಗಳ ಪಾಲು ಎಂಬಂತಾಗಿದೆ. ಬೆಳೆ ಸಾಲ ಪಡೆಯುವ ರೈತರ ಹೊರತಾಗಿ, ಉಳಿದ ಬಹುತೇಕ ರೈತರು ವಿಮೆ ಯೋಜನೆ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.ಪರಿಣಾಮ ರಾಜ್ಯದಲ್ಲಿ 2019ರಿಂದ ಈವರೆಗೆ ಒಟ್ಟಾರೆ 38,31,749 ರೈತರಿಗೆ ಸೇರಿದ ಒಟ್ಟು 53,94,575 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ. ಈ ಎಲ್ಲ ರೈತರೂ ಬೆಳೆ ವಿಮೆಯನ್ನೇ ಮಾಡಿಸಿರಲಿಲ್ಲ. ಬೆಳೆ ವಿಮೆ ಕೈಹಿಡಿಯುತ್ತದೆ ಎಂಬ ಭರವಸೆಯನ್ನೇ ಈ ರೈತರು ಕಳೆದುಕೊಂಡಿದ್ದಾರೆ..                      ಶಬರೀಶ್  ಸದಸ್ಯರು  ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಶೃಂಗೇರಿ

ಕಾರ್ಮಿಕರ ಮೇಲೆ ಹಲ್ಲೆ ಖಂಡಿಸಿ ಅ.27 ರಂದು ಜಿಲ್ಲಾ ಕೇಂದ್ರದಲ್ಲಿ ಅಹೋರಾತ್ರಿ ಪ್ರತಿಭಟನೆ


ಚಿಕ್ಕಮಗಳೂರು :ಇತ್ತೀಚೆಗೆ ಬಾಳೆಹೊನ್ನೂರಿನ ಸಮೀಪ ಕಾರ್ಮಿಕರ ಮೇಲೆ ಬಿಜೆಪಿ ಮುಖಂಡ ನಡೆಸಿದ ದೌರ್ಜನ್ಯ ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅ.27 ರಂದು ಚಿಕ್ಕಮಗಳೂರಿನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ದಲಿತ ಸಂಘರ್ಷ ಸಮಿತಿ ನಿರ್ಧರಿಸಿದೆ ಎಂದು ಮುಖಂಡ ಶ್ರೀನಿವಾಸ್ ಹೇಳಿದ್ದಾರೆ .

ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಮೀನಮೇಷ ನಡೆಸಿದೆಯಲ್ಲದೆ ,ಬಾಳೆಹೊನ್ನೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಚಳವಳಿ ಹತ್ತಿಕ್ಕಲು 144 ನೇ.ಸೆಕ್ಷನ್ ಜಾರಿ ಗೊಳಿಸಿ ದ್ದಾರೆ ಎಂದು ಆರೋಪಿಸಿದ್ದಾರೆ .ಕೂಲಿ ಕಾರ್ಮಿಕರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ದ್ದಾರೆ .
ದತ್ತಮಾಲೆ ಅಭಿಯಾನ : ನವೆಂಬರ್ 7 ರಿಂದ 13 ರವರೆಗೆ ದತ್ತಮಾಲೆ ಅಭಿಯಾನ ನಡೆಸಲು ಶ್ರೀರಾಮ ಸೇನೆ ನಿರ್ಧರಿಸಿದ್ದು , ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು .
ದತ್ತಮಾಲಾ ಧಾರಣೆ , ಮೆರವಣಿಗೆ ,ದತ್ತ ಪಾದುಕೆ  ದರ್ಶನ  ಕಾರ್ಯಕ್ರಮಗಳನ್ನು   ಶ್ರೀರಾಮಸೇನೆ  ಆಯೋಜಿಸಿದೆ .

ದೀಪೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
ಚಿಕ್ಕಮಗಳೂರು,: ಬಿಂಡಿಗ ಮಲ್ಲೇನಹಳ್ಳಿ ಆದಿಶಕ್ತ್ಯಾತ್ಮಕ ಶ್ರೀ ದೇವಿರಮ್ಮ ಜಾತ್ರೆಯ ಪ್ರಯುಕ್ತ ಅ. ೨೩ ರಿಂದ ೨೭ ರ ವರೆಗೆ ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ
ಚಿಕ್ಕಮಗಳೂರು ಬಸ್ ನಿಲ್ದಾಣ, ಸಿಂಡಿಕೆಟ್ ಬ್ಯಾಂಕ್, (ಶೃಂಗಾರ್ ಸರ್ಕಲ್) ಸರ್ಕಾರಿ ಡಿಪ್ಲೋಮ ಕಾಲೇಜ್ (ಟೌನ್ ಕ್ಯಾಂಟೀನ್) ಕೈಮರ, ಕಡೂರು ವಾಹನ ನಿಲ್ದಾಣ, ಬೀರೂರು ವಾಹನ ನಿಲ್ದಾಣ, ಹಾಗೂ ತರೀಕೆರೆ ವಾಹನ ನಿಲ್ದಾಣ(ಲಿಂಗದಹಳ್ಳಿ-ಶಾಂತವೇರಿ ಮಾರ್ಗ) ದಿಂದ ಮಲ್ಲೇನಹಳ್ಳಿಗೆ ವಿಶೇಷ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ

ಶುಕ್ರವಾರ, ಅಕ್ಟೋಬರ್ 21, 2022

೪ ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾ ಉತ್ಸವ

  ಚಿಕ್ಕಮಗಳೂರು :  ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ  ಚಿಕ್ಕಮಗಳೂರು ಜಿಲ್ಲಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.   


ಜಾನಪದ ಜಾತ್ರೆ, ಸಿನಿಮೋತ್ಸವ, ನೃತ್ಯೋತ್ಸವ, ಪುಸ್ತಕ ಮೇಳ, ವಸ್ತುಪ್ರದರ್ಶನ, ಕೃಷಿಮೇಳ, ಆಹಾರ ಮೇಳ ಇನ್ನಿತರೆ  ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು  ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ  ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಮಾಹಿತಿ ನೀಡಿದರು .  ಶಾಸಕ ಸಿ.ಟಿ.ರವಿ ಮಾತನಾಡಿ, ಕಳೆದ ಬಾರಿಯ ಕಾರ್ಯಕ್ರಮದ ಲೋಗೋ, ಶೀರ್ಷಿಕೆ, ಅಡಿಬರಹವನ್ನು ಈ ಬಾರಿಯೂ ಮುಂದುವರಿಸಲಾಗುತ್ತದೆ  ಪ್ರಯುಕ್ತ ಪ್ರೋ ಕಬಡ್ಡಿ ಮಾದರಿಯಲ್ಲಿ ಕಬಡ್ಡಿ ಸ್ಪರ್ಧೆ ಆಯೋಜಿಸುವ ಕುರಿತು ಪ್ರೋ ಕಬಡ್ಡಿ ಆಯೋಜಕರಲ್ಲಿ ಚರ್ಚಿಸಲಾಗಿದೆ. ಜಾನಪದ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ ಎಂದು  ತಿಳಿಸಿದರು.

ವೈಯುಕ್ತಿಕ ಜೀವನ ಬದಿಗೊತ್ತಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಗುರುತಿಸಬೇಕು: ಶಾಸಕ ಸಿ.ಟಿ.ರವಿ

 


 ಚಿಕ್ಕಮಗಳೂರು, ಅ.೨೧:   ತಮ್ಮ ವೈಯುಕ್ತಿಕ ಜೀವನ ಬದಿಗೊತ್ತಿ ಕಷ್ಟದ ಸಂದರ್ಭಗಳಲ್ಲಿಯೂ ಒತ್ತಡಗಳನ್ನು ಎದುರಿಸಿ ದಿನದ ೨೪ ಗಂಟೆ ಕಾರ್ಯನಿರ್ವಹಿಸುವ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಗುರುತಿಸಬೇಕು ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದರು.   ನಾವೆಲ್ಲರೂ ಸುರಕ್ಷಿತವಾಗಿರಬೇಕಾದರೆ ಪ್ರಾಣವನ್ನು ಪಣಕ್ಕಿಟ್ಟು ದೇಶ ಕಾಯುವ ಸೈನಿಕರು ಹಾಗೂ ನಾಗರೀಕ ಸಮಾಜದ ಒಳಗೆ ರಕ್ಷಣೆ ನೀಡುವ ಪೊಲೀಸರು ಕಾರಣ ಎಂದರು.   

ಪೊಲೀಸ್ ಹುತಾತ್ಮರ ದಿನಾಚರಣೆ  ಉದ್ದೇಶಿಸಿ  ಮಾತನಾಡಿ  ನೈತಿಕ ಮೌಲ್ಯಗಳ ಆಧಾರದಲ್ಲಿ  ನಡೆದುಕೊಳ್ಳುವ ಸಮಾಜ ನಿರ್ಮಾಣ ಆಗುವುದಿಲ್ಲವೋ ಅಲ್ಲಿಯವರೆಗೆ ಕಾನೂನು , ಪೊಲೀಸ್ ವ್ಯವಸ್ಥೆಯ ಮೂಲಕ ಸುಸ್ಥಿರ ಸಮಾಜ ನಿರ್ಮಾಣದ ಕಡೆಗೆ ಹೆಜ್ಜೆ ಹಾಕಬೇಕಾಗುತ್ತದೆ. ಸಮಾಜದಲ್ಲಿ ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಅನಾಥಾಲಯಗಳು ಹೆಚ್ಚಾಗುವುದು ಒಳ್ಳೆಯ ಸಂಗತಿಯಲ್ಲ ಎಂದರು . 

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿದರು,   ಪೊಲೀಸ್ ಹುತಾತ್ಮರನ್ನು ಸಂಸ್ಮರಣೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್    ಜಿಲ್ಲೆಯ ೭ ಕರ್ನಾಟಕದ ೧೧ ಪೊಲೀಸರು ಸೇರಿ  ದೇಶದಲ್ಲಿ ಈ ವರ್ಷ ೨೬೪ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್  ಉಪಸ್ಥಿತರಿದ್ದರು.

ಗುರುವಾರ, ಅಕ್ಟೋಬರ್ 20, 2022

ಅ 24 ರಿಂದ ಬಿಂಡಿಗ ದೇವೀರಮ್ಮನವರ ದೀಪೋತ್ಸವ; ಭಾರಿ ಪ್ರಮಾಣದ ಭಕ್ತರ ನಿರೀಕ್ಷೆ

 ಚಿಕ್ಕಮಗಳೂರು,:  ತಾಲ್ಲೂಕಿನ ಬಿಂಡಿಗ ಮಲ್ಲೇನಹಳ್ಳಿಯ  ದೇವೀರಮ್ಮ ದೇವಸ್ಥಾನದಲ್ಲಿ ಬಿಂಡಿಗ ಆದಿಶಕ್ತ್ಯಾತ್ಮಕ ಶ್ರೀ ದೇವೀರಮ್ಮನವರ ದೀಪೋತ್ಸವವು ಅಕ್ಟೋಬರ್ ೨೪ರಿಂದ ೨೭ರವರೆಗೆ ನಡೆಯಲಿದೆ. 

ಕೊರೋನ ಹಿನ್ನೆಲೆಯಲ್ಲಿ  ಕಳೆದ 2 ವರ್ಷಗಳಿಂದ ಕಳೆಗುಂದಿದ್ದ ದೇವಿರಮ್ಮ ಉತ್ಸವ ಈ ಬಾರಿ ಕಳೆಗಟ್ಟಲಿದೆ .ರಾಜ್ಯದ ವಿವಿಧ ಭಾಗಗಳಿಂದ ಬೆಟ್ಟವೇರಲು ಭಾರೀ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆಯಿದ್ದು ,ಪ್ರತಿಕೂಲ ಹವಾಮಾನ ಉತ್ಸಾಹಕ್ಕೆ ತಣ್ಣೀರು ಎರಚುವ ಸಾಧ್ಯತೆಯೂ ಇದೆ .   

ಅ.೨೪ರಂದು ಬೆಳಿಗ್ಗೆ ಶ್ರೀ ದೇವೀರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜೆ ಪ್ರಾರಂಭವಾಗಲಿದ್ದು, ರಾತ್ರಿ ೭ ಗಂಟೆಗೆ ದೀಪೋತ್ಸವ. ೨೫ ರಂದು ಬೆಳಿಗ್ಗೆ ಗಂಟೆ ೮.೪೫ಕ್ಕೆ ಶ್ರೀ ದೇವಿಯವರಿಗೆ ಉಡುಗೆ, ಪೂಜೆ, ಸಂಜೆ ಬೆಣ್ಣೆ ಬಟ್ಟೆ ಸುಡುವುದು ನಂತರ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. 

೨೬ರಂದು ರಾತ್ರಿ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ, ಅಗ್ನಿಕುಂಡ ಪೂಜೆ, ಕಲಶ ಸ್ಥಾಪನೆ

ಕುಂಕುಮಾರ್ಚನೆ ಇತ್ಯಾದಿ ಪೂಜೆ ನಡೆಯಲಿದೆ. ೨೭ರಂದು ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ ನಡೆಯಲಿವೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ.

ಚಿಕ್ಕಮಗಳೂರಿನಲ್ಲಿ ರಾಜ್ಯಮಟ್ಟದ ಯುವಜನೋತ್ಸವ


ಚಿಕ್ಕಮಗಳೂರು:  ರಾಜ್ಯಮಟ್ಟದ ಯುವಜನೋತ್ಸವನ್ನು ಚಿಕ್ಕಮಗಳೂರಿನಲ್ಲಿ  ಡಿ. ೧೬, ೧೭ ಮತ್ತು ೧೮ ಅಥವಾ ಡಿ. ೨೧, ೨೨ ಮತ್ತು ೨೩ರಂದು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.  ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ  ಮಾತನಾಡಿ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಪ್ರತಿ ಜಿಲ್ಲೆಯಿಂದ ೫೭ ಜನ ಕಲಾವಿದರಂತೆ ಒಟ್ಟು ೧೭೬೭ ಕಲಾಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದಿದ್ದಾರೆ .   

ಅಧ್ಯಕ್ಷತೆ ವಹಿಸಿದ್ದ  ಶಾಸಕ ಸಿ.ಟಿ.ರವಿ ಮಾತನಾಡಿ, ರಾಜ್ಯಮಟ್ಟದ  ಯುವಜನೋತ್ಸವವನ್ನು ಸಣ್ಣ ಕೊರತೆಯೂ ಆಗದಂತೆ ಅದ್ಧೂರಿಯಾಗಿ ಆಯೋಜಿಸಲಾಗುತ್ತದೆ. ಹವಾಮಾನ, ಮಳೆಯ ವರದಿಗಳನ್ನು ಗಮನಿಸಿಕೊಂಡು ಕಾರ್ಯಕ್ರಮದ ದಿನಾಂಕವನ್ನು ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.  

ಕರ್ನಾಟಕ ರಾಜ್ಯ ಸಫಾಯಿ ಕರ್ಮಾಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್.ಸಿ, ಉಪವಿಭಾಗಾಧಿಕಾರಿ ರಾಜೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಡಾ. ಮಂಜುಳಾ,  ಉಪಸ್ಥಿತರಿದ್ದರು.

ಗಂಧ ಕಳ್ಳತನ ಆರೋಪ: ಬಂಧಿತ ವ್ಯಕ್ತಿ ಶೌಚಾಲಯದಲ್ಲಿ ಸಾವು- ಕೊಲೆ ಶಂಕೆ ;ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

ಚಿಕ್ಕಮಗಳೂರು :
 ಗಂಧ ಕಳ್ಳತನದ ಆರೋಪದ ಮೇಲೆ ಬಂಧಿತ ವ್ಯಕ್ತಿಯೋರ್ವ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ .

ತಾಲ್ಲೂಕಿನ ಹೊಸಪೇಟೆ ಸಮೀಪದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ .ಶಿವಮೊಗ್ಗದಿಂದ ಐವರು ಗಂಧ ಕಳ್ಳತನ ಮಾಡಲು ಈ ಭಾಗಕ್ಕೆ ಬಂದಿದ್ದರು ಎನ್ನಲಾಗಿದೆ .

ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು ಮೂವರು ಪರಾರಿಯಾಗಿದ್ದಾರೆ .

ಬಂಧಿತರಲ್ಲಿ ರವಿ ಎಂಬಾತನ ಶವ ಆನೆ ಶಿಬಿರದ ಬಳಿಯ ಶೌಚಾಲಯದಲ್ಲಿ ಪತ್ತೆಯಾಗಿದ್ದು ಇದು ಕೊಲೆ ಎಂದು ಸಾರ್ವಜನಿಕರು ಸಂಶಯ ಹೊರಹಾಕಿದ್ದಾರೆ .

ಗಂಧ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿದ್ದು ,ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನುವ ಸಬೂಬು ಅರಣ್ಯ ಇಲಾಖೆಯದ್ದಾಗಿದೆ .

ಇಂದು ಬೆಳಿಗ್ಗೆ ಸ್ಥಳಕ್ಕೆ ಆ್ಯಂಬುಲೆನ್ಸ್  ಕರೆಸಿದ್ದು 'ವ್ಯಕ್ತಿ ಮೃತಪಟ್ಟಿರುವುದು ದೃಢವಾಗುತ್ತಿದ್ದಂತೆ ಶವ ತೆಗೆದುಕೊಂಡು ಹೋಗಲು ನಿರಾಕರಿಸಿ ಆ್ಯಂಬ್ಯುಲೆನ್ಸ್ ಹಿಂದೆ  ಬಂದಿದೆ .

ಹೊತ್ತು ಸರಿದಂತೆ ವಿಷಯ ಬಹಿರಂಗಗೊಂಡು ಸ್ಥಳದಲ್ಲಿ ಜಮಾಯಿಸಿದ ಜನ ಅರಣ್ಯ ಇಲಾಖೆ ವಿರುದ್ಧ ಕೊಲೆ ಆರೋಪವನ್ನು ಹೊರೆಸಿ ತೀವ್ರ ಆಕ್ರೋಶ ಹೊರ ಹಾಕಿದೆ.

ವ್ಯಕ್ತಿ ಸಾವಿಗೆ ಕಾರಣವಾಗಿರುವ ಓರ್ವ ಅರಣ್ಯಾಧಿಕಾರಿ ಮತ್ತು ಇಬ್ಬರು ಸಿಬ್ಬಂದಿಯನ್ನು ತಕ್ಷಣ ವಜಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಮಾಡಿ ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ .

ಪರಿಸ್ಥಿತಿಯನ್ನು ನಿಭಾಯಿಸಲು ಅರಣ್ಯ ಮತ್ತು ಪೊಲೀಸ್ ಇಲಾಖೆ ಹರಸಾಹಸ ಪಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮಜಾಯಿಷಿಯನ್ನು ಒಪ್ಪದ ಜನ ಇದೊಂದು ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ .

ಬಂಧಿತ ವ್ಯಕ್ತಿಯನ್ನು ತೀವ್ರವಾಗಿ ಥಳಿಸಿದ್ದು, ಆತನ ಕೈ ಕಾಲುಗಳು ಊದಿದ್ದು ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯವೇ ವ್ಯಕ್ತಿ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ .ತಪ್ಪನ್ನು ಮುಚ್ಚಿಕೊಳ್ಳಲು ಅರಣ್ಯ ಇಲಾಖೆ ಯತ್ನಿಸುತ್ತಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ 

ಸಂಜೆ ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಜನ ಪಟ್ಟು ಹಿಡಿದಿದ್ದಾರೆ .

 ಗಂಧ ಕಳ್ಳತನ ಆರೋಪ ಹೊರೆಸಿರುವ ಅರಣ್ಯ ಇಲಾಖೆಗೆ ವಶಪಡಿಸಿ ಕೊಂಡಿರುವ ಗಂಧವನ್ನು ತೋರಿಸಲು ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದ್ದು ಮರಣೋತ್ತರ ಪರೀಕ್ಷೆಯಿಂದ ಸತ್ಯ ಹೊರ ಬರಬೇಕಾಗಿದೆ .

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...