ಬುಧವಾರ, ಅಕ್ಟೋಬರ್ 26, 2022

ಪೌರಕಾರ್ಮಿಕರ ಪಾದ ಪೂಜೆ ;ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಿಸಿದ ಶಾಸಕ ಸಿ. ಟಿ. ರವಿ

 


ಚಿಕ್ಕಮಗಳೂರು : ಅತ್ತ ಪ್ರಧಾನಿ ನರೇಂದ್ರ ಮೋದಿ  ಸೈನಿಕರೊಂದಿಗೆ ದೀಪಾವಳಿ ಆಚರಿಸಿದರೆ ಇತ್ತ ಶಾಸಕ      ಸಿ. ಟಿ. ರವಿ ಪೌರಕಾರ್ಮಿಕರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು .

ಪೌರ ಕಾರ್ಮಿಕರ ಬಡಾವಣೆಗೆ ತೆರಳಿ ,ಹಿರಿಯ ಕಾರ್ಮಿಕರಿಗೆ ಆರತಿ ಎತ್ತಿ ಪಾದಪೂಜೆ ಮಾಡಿ,ಹೂವಿನ ಹಾರ ಹಾಕಿ  ಗೌರವ ಸಲ್ಲಿಸಿದರು . ಶಾಸಕರ ವಿಶಿಷ್ಟ ರೀತಿಯ ದೀಪಾವಳಿ ಆಚರಣೆಗೆ ಪೌರಕಾರ್ಮಿಕರು ಮನಸೋತರು.

ಪೌರಕಾರ್ಮಿಕರ ಮಕ್ಕಳೊಂದಿಗೆ ಬೆರೆತು ಪಟಾಕಿ ಸಿಡಿಸಿದರು .ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ,ಸಿಡಿಎ ಅಧ್ಯಕ್ಷ ಆನಂದ್ ,ಪೌರಾಯುಕ್ತ ಬಸವರಾಜ್ ,ನಗರಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್ ,ತಮ್ಮಯ್ಯ  ಇತರರು ಜತೆಗೂಡಿದ್ದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...