ಚಿಕ್ಕಮಗಳೂರು : ಅತ್ತ ಪ್ರಧಾನಿ ನರೇಂದ್ರ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರೆ ಇತ್ತ ಶಾಸಕ ಸಿ. ಟಿ. ರವಿ ಪೌರಕಾರ್ಮಿಕರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು .
ಪೌರ ಕಾರ್ಮಿಕರ ಬಡಾವಣೆಗೆ ತೆರಳಿ ,ಹಿರಿಯ ಕಾರ್ಮಿಕರಿಗೆ ಆರತಿ ಎತ್ತಿ ಪಾದಪೂಜೆ ಮಾಡಿ,ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು . ಶಾಸಕರ ವಿಶಿಷ್ಟ ರೀತಿಯ ದೀಪಾವಳಿ ಆಚರಣೆಗೆ ಪೌರಕಾರ್ಮಿಕರು ಮನಸೋತರು.
ಪೌರಕಾರ್ಮಿಕರ ಮಕ್ಕಳೊಂದಿಗೆ ಬೆರೆತು ಪಟಾಕಿ ಸಿಡಿಸಿದರು .ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ,ಸಿಡಿಎ ಅಧ್ಯಕ್ಷ ಆನಂದ್ ,ಪೌರಾಯುಕ್ತ ಬಸವರಾಜ್ ,ನಗರಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್ ,ತಮ್ಮಯ್ಯ ಇತರರು ಜತೆಗೂಡಿದ್ದರು .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ