ಗುರುವಾರ, ಅಕ್ಟೋಬರ್ 27, 2022

ಬಾತ್ ಟವೆಲ್ ಉಟ್ಟು ಕಾಲೇಜಿಗೆ ಹೋಗುವ ವಿದ್ಯಾರ್ಥಿ !!

  19 ವರ್ಷ ಪ್ರಾಯದ ಈ ಭೂಪನಿಗೆ ಡ್ರೆಸ್ ಅಂದರೆ ಆಗದು. ಎಷ್ಟೆಂದರೆ, ಯಾರಾದರೂ ಧರಿಕೊಳ್ಳು ಅಂತ ಒತ್ತಾಯ ಮಾಡಿ ಡ್ರೆಸ್ ಗ್ರಿಸ್ ಕೊಟ್ಟರೆ ಅದನ್ನು ಹರಿದು ಚಿಂದಿ ಮಾಡಿ ಹಾಕುತ್ತಾನೆ.

 ಆದರೆ, ಕಾಲೇಜಿಗೆ ಹೋಗಬೇಕಲ್ಲ, ಹೌದು, ಬಿಎ ಕಲಿಯಲು ಕಾಲೇಜಿಗೆ ಹೋಗುತ್ತಾನೆ, ಕಾಲೇಜಿಗೆ ಹೋಗುವಾಗ ಅಂಡರ್ ವೇರ್ ಮತ್ತು ಅದರ ಮೇಲೆ ಒಂದು ಬಾತ್ ಟವೆಲ್ ಹೊದ್ದುಕೊಂಡು ಹೋಗುತ್ತಾನೆ. ಮಧ್ಯಪ್ರದೇಶದ ಪಿಚ್ಚೋಡಿ ಹಳ್ಳಿಯ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಣ್ಣಯ್ಯ ಅಭಾಶಿಗೆ ಚಿಕ್ಕಂದಿನಿಂದಲೂ ಬಟ್ಟೆ ಅಂದರೆ ಆಗದು. 

ಇಷ್ಟು ವರ್ಷಗಳ ಕಾಲ ಅವನ ಬಡ ತಾಯಿ ಅವನಿಗೆ ಬಟ್ಟೆ ಹಾಕಲು ಶತಾಯಗತಾಯ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆದರೆ, ಅವನನ್ನು ವಿದ್ಯಾವಂತನಾಗಿ ಮಾಡಲು ಪಣ ತೊಟ್ಟ ಆಕೆ ಶಾಲೆಯ ಶಿಕ್ಷಕರು, ಅಧಿಕಾರಿಗಳಳ ಕೈಕಾಲು ಹಿಡಿದು, ಹೇಗೋ 12ನೇ ತರಗತಿ ತನಕ ಅಂಡರ್ ವೇರಲ್ಲಿ ಅವನನ್ನು ಶಾಲೆಗೆ ಕಳಿಸಿ, ಓದಿಸುವಲ್ಲಿ ಸಫಲಳಾದಳು. 

ಆದರೆ, ಡಿಗ್ರಿ ಮಾಡಲು ಕಾಲೇಜಿಗೆ ಸೇರಿಸುವ ಸಮಯದಲ್ಲಿ ಕಣ್ಣಯ್ಯನ ಆ ವಿಚಿತ್ರ ನಡವಳಿಕೆಯಿಂದಾಗಿ ಸಮಸ್ಯೆ ಎದುರಾಯಿತು. ಕಣ್ಣಯ್ಯ ಓದಿನಲ್ಲಿ ತುಂಬಾ ಹುಷಾರಿದ್ದಾನೆ. ಅವನ ಕೈಬರಹವೂ ಬಹು ಸುಂದರ. ಅಂತೆಯೇ ಅವನ ನಡವಳಿಕೆ ಕೂಡಾ. ಪಾಠೇತರ ಚಟುವಟಿಕೆಗಳಲ್ಲೂ ಮುಂದಿದ್ದಾನೆ. ಹೀಗಾಗಿ ಶಿಕ್ಷಕರಿಗೆ ಅವನು ಅಚ್ಚುಮೆಚ್ಚಿನ ಶಿಷ್ಯನಾಗಿರುವುದರಿಂದ ಅವರೆಲ್ಲ ಸೇರಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡು, ಅವನನ್ನು ಒಂದು ಸ್ಪೆಷಲ್ ಕೇಸಾಗಿ ಪರಿಗಣಿಸಿ ಕಾಲೇಜಿಗೆ ಸೇರಿಸಿಕೊಳ್ಳಲು ಒಪ್ಪಿಸಿದರು. ಕಣ್ನಯ್ಯ ಈಗ ಎರಡನೇ ವರ್ಷದ ಬಿಎ ಮಾಡುತ್ತಿದ್ದಾನೆ. ಪ್ರತೀದಿನ ಚಪ್ಪಲಿ, ಬ್ಯಾಕ್ ಪ್ಯಾಕ್, ಅಂಡರ್ ವೇರ್ ಮತ್ತು ಬಾತ್ ಟವಲಲ್ಲಿ ಕಾಲೇಜಿಗೆ ಹೋಗಿ ಬರುತ್ತಾನೆ. ಶಿಕ್ಷಕರಂತೆ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಅವನನ್ನು ಒಪ್ಪಿಕೊಂಡಿದ್ದಾರೆ

(


G.T.satish ವಾಲ್ ನಿಂದ ).Panju Ganguli

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...