ಶನಿವಾರ, ಅಕ್ಟೋಬರ್ 22, 2022

ಕಾರ್ಮಿಕರ ಮೇಲೆ ಹಲ್ಲೆ ಖಂಡಿಸಿ ಅ.27 ರಂದು ಜಿಲ್ಲಾ ಕೇಂದ್ರದಲ್ಲಿ ಅಹೋರಾತ್ರಿ ಪ್ರತಿಭಟನೆ


ಚಿಕ್ಕಮಗಳೂರು :ಇತ್ತೀಚೆಗೆ ಬಾಳೆಹೊನ್ನೂರಿನ ಸಮೀಪ ಕಾರ್ಮಿಕರ ಮೇಲೆ ಬಿಜೆಪಿ ಮುಖಂಡ ನಡೆಸಿದ ದೌರ್ಜನ್ಯ ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅ.27 ರಂದು ಚಿಕ್ಕಮಗಳೂರಿನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ದಲಿತ ಸಂಘರ್ಷ ಸಮಿತಿ ನಿರ್ಧರಿಸಿದೆ ಎಂದು ಮುಖಂಡ ಶ್ರೀನಿವಾಸ್ ಹೇಳಿದ್ದಾರೆ .

ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಮೀನಮೇಷ ನಡೆಸಿದೆಯಲ್ಲದೆ ,ಬಾಳೆಹೊನ್ನೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಚಳವಳಿ ಹತ್ತಿಕ್ಕಲು 144 ನೇ.ಸೆಕ್ಷನ್ ಜಾರಿ ಗೊಳಿಸಿ ದ್ದಾರೆ ಎಂದು ಆರೋಪಿಸಿದ್ದಾರೆ .ಕೂಲಿ ಕಾರ್ಮಿಕರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ದ್ದಾರೆ .
ದತ್ತಮಾಲೆ ಅಭಿಯಾನ : ನವೆಂಬರ್ 7 ರಿಂದ 13 ರವರೆಗೆ ದತ್ತಮಾಲೆ ಅಭಿಯಾನ ನಡೆಸಲು ಶ್ರೀರಾಮ ಸೇನೆ ನಿರ್ಧರಿಸಿದ್ದು , ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು .
ದತ್ತಮಾಲಾ ಧಾರಣೆ , ಮೆರವಣಿಗೆ ,ದತ್ತ ಪಾದುಕೆ  ದರ್ಶನ  ಕಾರ್ಯಕ್ರಮಗಳನ್ನು   ಶ್ರೀರಾಮಸೇನೆ  ಆಯೋಜಿಸಿದೆ .

ದೀಪೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
ಚಿಕ್ಕಮಗಳೂರು,: ಬಿಂಡಿಗ ಮಲ್ಲೇನಹಳ್ಳಿ ಆದಿಶಕ್ತ್ಯಾತ್ಮಕ ಶ್ರೀ ದೇವಿರಮ್ಮ ಜಾತ್ರೆಯ ಪ್ರಯುಕ್ತ ಅ. ೨೩ ರಿಂದ ೨೭ ರ ವರೆಗೆ ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ
ಚಿಕ್ಕಮಗಳೂರು ಬಸ್ ನಿಲ್ದಾಣ, ಸಿಂಡಿಕೆಟ್ ಬ್ಯಾಂಕ್, (ಶೃಂಗಾರ್ ಸರ್ಕಲ್) ಸರ್ಕಾರಿ ಡಿಪ್ಲೋಮ ಕಾಲೇಜ್ (ಟೌನ್ ಕ್ಯಾಂಟೀನ್) ಕೈಮರ, ಕಡೂರು ವಾಹನ ನಿಲ್ದಾಣ, ಬೀರೂರು ವಾಹನ ನಿಲ್ದಾಣ, ಹಾಗೂ ತರೀಕೆರೆ ವಾಹನ ನಿಲ್ದಾಣ(ಲಿಂಗದಹಳ್ಳಿ-ಶಾಂತವೇರಿ ಮಾರ್ಗ) ದಿಂದ ಮಲ್ಲೇನಹಳ್ಳಿಗೆ ವಿಶೇಷ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...