ಶುಕ್ರವಾರ, ಅಕ್ಟೋಬರ್ 28, 2022

ದೊಡ್ಡವರ ಸಣ್ಣತನ ; ಪಾರ್ಕಿಂಗ್ ಶುಲ್ಕ ಕಟ್ಟಲು ಶೃಂಗೇರಿಯಲ್ಲಿ ಕಂದಾಯ ಸಚಿವರ ಪಿ ಎ. ಕಿರಿಕಿರಿ ಆಡಿಯೋ ವೈರಲ್


ಚಿಕ್ಕಮಗಳೂರು : ಸಾವಿರ ರೂ ಸಂಬಳ, ಓಡಾಡಲು ಸರ್ಕಾರಿ ವಾಹನ ,ಆ ನಡುವೆ ಒಂದಿಷ್ಟು ಗೋಲ್ಮಾಲ್ ವ್ಯವಹಾರ . ಹೀಗಿದ್ದರೂ ಪಾರ್ಕಿಂಗ್ -ಟೋಲ್ ಇತರೆ  ಶುಲ್ಕ ಕಟ್ಟಲು ತಕರಾರು . ಇದು ಕೆಲ ಉನ್ನತ ಹುದ್ದೆಗಳಲ್ಲಿ ಇರುವವರ ರೋಗ .

ಶೃಂಗೇರಿಯಲ್ಲಿ ಇಂಥಹದೇ ಘಟನೆ ನಡೆದಿದೆ .ಆತ ಕಂದಾಯ ಸಚಿವ ಆರ್. ಅಶೋಕ್ ರವರ ಆಪ್ತ ಸಹಾಯಕ ಹನುಮಂತ ರಾಜು.
ಶೃಂಗೇರಿ ಮಠಕ್ಕೆ ಬಂದಿದ್ದ ಈ ವ್ಯಕ್ತಿ ಗಾಂಧಿ ಮೈದಾನದ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ್ದಾನೆ . ಶುಲ್ಕ 50 ರೂ.ನೀಡುವಂತೆ ಅಲ್ಲಿನ ವ್ಯಕ್ತಿ ತಿಳಿಸಿದ್ದಾನೆ .
ಆಗ ತನ್ನನ್ನು  ಪರಿಚಯಿಸಿಕೊಂಡ ಈ ವ್ಯಕ್ತಿ ಶುಲ್ಕ ಕೊಡುವ ಬದಲಾಗಿ ಯಾರಿಗೋ ಫೋನ್ ಮಾಡುವುದಾಗಿ ಹೇಳಿದ್ದಾನೆ.
ಇದಕ್ಕೆ ಒಪ್ಪದೆ ಶುಲ್ಕ  ಪಾವತಿಸುವಂತೆ ತಿಳಿಸಿದ್ದರೂ ಪಾವತಿಸದೆ ಹಾಗೇ ಹೋಗಿದ್ದಾನೆ ಈ ದೊಡ್ಡ ವ್ಯಕ್ತಿ  !! .ಈ ಘಟನೆಯ ಆಡಿಯೋ ಈಗ ವೈರಲ್ ಆಗಿದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...