ಸೋಮವಾರ, ಅಕ್ಟೋಬರ್ 24, 2022

ಸಂಭ್ರಮಕ್ಕೆ ಸಾಕ್ಷಿಯಾಯಿತು ದೇವಿರಮ್ಮ ಬೆಟ್ಟ ; ಸಾವಿರಾರು ಭಕ್ತರಿಂದ ದೇವಿಯ ದರ್ಶನ

 


ಚಿಕ್ಕಮಗಳೂರು : ಜಿಲ್ಲೆಯ ಶಕ್ತಿ ದೇವತೆಗಳಲ್ಲಿ ಒಂದಾದ ಮಲ್ಲೇನಹಳ್ಳಿಯ ದೇವಿರಮ್ಮ ಬೆಟ್ಟ  ಸಂಭ್ರಮಕ್ಕೆ ಸಾಕ್ಷಿಯಾಯಿತು .

ಸಾವಿರಾರು ಭಕ್ತರು ತಂಡೋಪತಂಡವಾಗಿ ಬೆಟ್ಟಕ್ಕೆ ಲಗ್ಗೆ ಇಟ್ಟರು .ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಸೂರ್ಯೋದಯಕ್ಕೆ ಮುನ್ನವೇ ಕಡಿದಾದ ಹಾದಿಯಲ್ಲಿ  ಬೆಟ್ಟ ಏರತೊಡಗಿದರು.

ಕರೋನ ಹಿನ್ನಲೆಯಲ್ಲಿ ಕಳೆದ 2ವರ್ಷಗಳಿಂದ   ದೇವಿರಮ್ಮ ಬೆಟ್ಟಕ್ಕೆ ಭಕ್ತರು  ಏರುವುದನ್ನು ನಿರ್ಬಂಧಿಸಲಾಗಿತ್ತು . ಈ ವರ್ಷ ಎಲ್ಲವೂ ಮುಕ್ತ ಮುಕ್ತ . 

ಬೆಟ್ಟವೇರಿ ದೇವಿಯ ದರ್ಶನ ಪಡೆದು  ಪ್ರಕೃತಿ ಸೌಂದರ್ಯ ಆಹ್ಲಾದಿಸಿ ಹಿಂದಿರುಗಿದರು .ಪುನೀತ್ ಭಾವಚಿತ್ರ ಇದ್ದ ಬಾವುಟದೊಂದಿಗೆ ಆಗಮಿಸಿದ ಪುನೀತ್ ಅಭಿಮಾನಿಗಳು ಎಲ್ಲರ ಗಮನ ಸೆಳೆದರು .

ಪ್ರಕೃತಿಯು ಭಕ್ತರ ಆಶಯಕ್ಕೆ ತಣ್ಣೀರು ಎರಚಲಿಲ್ಲ .ಬೆಟ್ಟ ಪೂರ್ತಿ ಭಕ್ತರಿಂದ ಗಿಜಿಗುಡುತ್ತಿತ್ತು .ಜಿಲ್ಲಾಡಳಿತ ಅಗತ್ಯ ಬಂದೋಬಸ್ತ್ ಮಾಡಿತ್ತು 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...