ಚಿಕ್ಕಮಗಳೂರು : ಜಿಲ್ಲೆಯ ಶಕ್ತಿ ದೇವತೆಗಳಲ್ಲಿ ಒಂದಾದ ಮಲ್ಲೇನಹಳ್ಳಿಯ ದೇವಿರಮ್ಮ ಬೆಟ್ಟ ಸಂಭ್ರಮಕ್ಕೆ ಸಾಕ್ಷಿಯಾಯಿತು .
ಸಾವಿರಾರು ಭಕ್ತರು ತಂಡೋಪತಂಡವಾಗಿ ಬೆಟ್ಟಕ್ಕೆ ಲಗ್ಗೆ ಇಟ್ಟರು .ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಸೂರ್ಯೋದಯಕ್ಕೆ ಮುನ್ನವೇ ಕಡಿದಾದ ಹಾದಿಯಲ್ಲಿ ಬೆಟ್ಟ ಏರತೊಡಗಿದರು.
ಕರೋನ ಹಿನ್ನಲೆಯಲ್ಲಿ ಕಳೆದ 2ವರ್ಷಗಳಿಂದ ದೇವಿರಮ್ಮ ಬೆಟ್ಟಕ್ಕೆ ಭಕ್ತರು ಏರುವುದನ್ನು ನಿರ್ಬಂಧಿಸಲಾಗಿತ್ತು . ಈ ವರ್ಷ ಎಲ್ಲವೂ ಮುಕ್ತ ಮುಕ್ತ .
ಬೆಟ್ಟವೇರಿ ದೇವಿಯ ದರ್ಶನ ಪಡೆದು ಪ್ರಕೃತಿ ಸೌಂದರ್ಯ ಆಹ್ಲಾದಿಸಿ ಹಿಂದಿರುಗಿದರು .ಪುನೀತ್ ಭಾವಚಿತ್ರ ಇದ್ದ ಬಾವುಟದೊಂದಿಗೆ ಆಗಮಿಸಿದ ಪುನೀತ್ ಅಭಿಮಾನಿಗಳು ಎಲ್ಲರ ಗಮನ ಸೆಳೆದರು .
ಪ್ರಕೃತಿಯು ಭಕ್ತರ ಆಶಯಕ್ಕೆ ತಣ್ಣೀರು ಎರಚಲಿಲ್ಲ .ಬೆಟ್ಟ ಪೂರ್ತಿ ಭಕ್ತರಿಂದ ಗಿಜಿಗುಡುತ್ತಿತ್ತು .ಜಿಲ್ಲಾಡಳಿತ ಅಗತ್ಯ ಬಂದೋಬಸ್ತ್ ಮಾಡಿತ್ತು

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ