ಚಿಕ್ಕಮಗಳೂರು ನಗರದ ಸಂತೆ ಮಾರುಕಟ್ಟೆಯ ಒಳಗಿರುವ ಬಾಡಿಗೆ ಹಣ ಕಟ್ಟದ ಕೋಳಿ ಮಳಿಗೆಗಳಿಗೆ ಬೀಗ ಹಾಕಲಾಗಿದೆ.
ಅನೇಕ ತಿಂಗಳುಗಳಿಂದ ಬಾಡಿಗೆ ಕಟ್ಟದೆ ಲಕ್ಷ ರೂಗಳಿಗೂ ಹೆಚ್ಚು ಬಾಡಿಗೆ ಬಾಕಿ ಉಳಿದಿದ್ದು ಅನೇಕ ಬಾರಿ ಹೇಳಿದರೂ ನಗರಸಭೆಗೆ ಬಾಡಿಗೆ ಕಟ್ಟಿಲ್ಲ.
ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಬಾಡಿಗೆ ನೀಡದೆ ಇರುವ ಮಳಿಗೆಗಳನ್ನು ನಗರಸಭೆಯ ವತಿಯಿಂದ ಬಾಗಿಲು ಮುಚ್ಚಿಸಿ ಬೀಗ ಹಾಕಿಸುವ ಕೆಲಸವನ್ನು ನಡೆಸಿದರು,
ನಗರಸಭಾ ಎಂಜಿನಿಯರ್ ಚಂದನ್ ಕಂದಾಯ ನಿರೀಕ್ಷಕರಾದ ಶಿವಾನಂದ್, ಜಗದೀಶ್, ಬಿಲ್ ಕಲೆಕ್ಟರ್ ಸಂತೋಷ್, ಪ್ರದೀಪ್, ಸತೀಶ್, ಸೂಪರ್ವೈಸರ್ ಮುರುಗೇಶ್, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ