ಶನಿವಾರ, ಫೆಬ್ರವರಿ 27, 2021

ಚಿಕ್ಕಮಗಳೂರಿನಲ್ಲಿ ಹಾಡು ಹಗಲೇ ಕಳ್ಳತನಕ್ಕೆ : ಇಬ್ಬರು ಅಂದರ್


 ಚಿಕ್ಕಮಗಳೂರು :ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಹಾಡುಹಗಲೇ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ .

ಕಲ್ಯಾಣ ನಗರದ ವಾಸಿ ಚಂದ್ರೇಗೌಡ ಮನೆಯಲ್ಲಿದ್ದ  ಸಮಯದಲ್ಲಿ ಹಿಂದಿನಿಂದ ಬಂದ ಇಬ್ಬರು ಬಾಯಿಗೆ ಬಟ್ಟೆಯನ್ನು ಕಟ್ಟಿ ,ಬೆದರಿಸಿ ಚಿನ್ನ ಹಾಗೂ ನಗದನ್ನು ಅಪಹರಿಸಿದ್ದಾರೆ .
ಆ ಸಂದರ್ಭದಲ್ಲಿ ಚಂದ್ರೇಗೌಡರ ಮಗ ಮನೆಗೆ ಬಂದು ಬೆಲ್ಲನ್ನು ಮಾಡಿದ್ದು, ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಕೂಗಿಕೊಂಡಾಗ ಕಳ್ಳರು ಪರಾರಿಯಾಗಲು ಯತ್ನಿಸಿದ್ದಾರೆ .
ಅಕ್ಕಪಕ್ಕದವರು ಸೆರೆ ಹಿಡಿಯಲು ಯತ್ನಿಸಿದ್ದು ಕಳ್ಳರು ಪರಾರಿಯಾಗಿದ್ದು ನಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .ಬಂಧಿತ ಇಬ್ಬರು ಚಂದ್ರೇಗೌಡರ ಸಂಬಂಧಿಕರಾಗಿರುವುದು ವಿಶೇಷ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...