ಚಿಕ್ಕಮಗಳೂರು: ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತನನ್ನು ಯುಪಿ ಪೊಲೀಸರು ಅಪಹರಿಸಿದ ಕ್ರಮವನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದರು .
ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿ ಪಿಎಫ್ಐ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹಾಕಿ ಕಿರುಕುಳ ನೀಡುವ ಕ್ರಮ ದೇಶದ ವಿವಿಧ ಕಡೆಗಳಲ್ಲಿ ಪೋಲಿಸರು ಮಾಡುತ್ತಿದ್ದು ಇದು ಖಂಡನೀಯ ಎಂದರು .
ದೇಶದ ಯಾವುದೇ ಭಾಗದಲ್ಲಿ ಗಲಭೆಗಳು ನಡೆದಾಗ ಪಿಎಫ್ಐ ಸಂಘಟನೆಯನ್ನು ಥಳಕು ಹಾಕುವ ಪ್ರವೃತ್ತಿಯನ್ನು ಕೆಲವು ರಾಜಕೀಯ ಪಕ್ಷದ ಮುಖಂಡರು ಮಾಡುತ್ತಿದ್ದು ಇದನ್ನು ತೀವ್ರವಾಗಿ ಖಂಡಿಸುವುದಾಗಿ ಮುಖಂಡರು ಹೇಳಿದರು .
ಪೊಲೀಸರಿಂದ ಅಪಹರಣಕ್ಕೆ ಒಳಗಾದ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು .
(ಚಿತ್ರ ತಾರನಾಥ್ ಕಾಮತ್)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ