ಚಿಕ್ಕಮಗಳೂರು : ನಗರ ಸಭೆ ವ್ಯಾಪ್ತಿಯ ಉಪ್ಪಳ್ಳಿ ಸಮೀಪದ ಕಲ್ದೊಡ್ಡಿಯ ಇಂದಿರಾಗಾಂಧಿ ಬಡಾವಣೆಯಲ್ಲಿ ಗುಡಿಸಲುಗಳನ್ನು ನೆಲಸಮ ಮಾಡಿ ಮುನ್ನೂರು ಕುಟುಂಬಗಳನ್ನು ಬೀದಿ ಪಾಲು ಮಾಡಿದ ಕ್ರಮ ಖಂಡಿಸಿ ಇಲ್ಲಿನ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಯಿತು .
ಗುಡಿಸಲು ದ್ವಂಸಮಾಡಿ ಭೂಮಿ ವಸತಿ ವಂಚಿತ ಬಡವರನ್ನು ಬೀದಿಪಾಲು ಮಾಡಿರುವುದನ್ನು ಖಂಡಿಸಿ, ಎಲ್ಲರಿಗೂ ಕೂಡಲೇ ನಿವೇಶನ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಜಾತ್ಯತೀತ ಜನತಾದಳದ ಎಚ್ ಎಚ್ ದೇವರಾಜ್ , ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಕೆ ಎಲ್ ಅಶೋಕ್ ನಿಲಗುಳಿ ಪದ್ಮನಾಭ ಇತರರು ನೇತೃತ್ವ ವಹಿಸಿದ್ದರು .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ