ಗುರುವಾರ, ಫೆಬ್ರವರಿ 11, 2021

200 ಎಕರೆ ಕಾಫಿ ತೋಟ ಸೀಝ್


 ಚಿಕ್ಕಮಗಳೂರು : ಕೊಟ್ಟ ಸಾಲ ಹಿಂದಿರುಗಿಸದ ಹಿನ್ನೆಲೆಯಲ್ಲಿ ಸುಮಾರು ೨೦೦ ಎಕರೆ ಕಾಫಿ ತೋಟವನ್ನು ಬ್ಯಾಂಕ್ ವಶಪಡಿಸಿಕೊಂಡ ಘಟನೆ ನಡೆದಿದೆ .

ಹಿರೇಕೊಳಲೆ ಸಮೀಪದ ವಾಟೇಕಾನ್ ತೋಟದ ಮಾಲಿಕರು 2005 ರಲ್ಲಿ ಯೂನಿಯನ್ ಬ್ಯಾಂಕಿನಿಂದ   ೨೨ ಕೋಟಿ ರೂ ಸಾಲವನ್ನು ಪಡೆದಿದ್ದರು ಎನ್ನಲಾಗಿದೆ .

ಸಾಲ ಮರುಪಾವತಿಸ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯ ಬ್ಯಾಂಕಿನ ಪರ ತೀರ್ಪು ನೀಡಿದ್ದು ,  ಪೊಲೀಸ್ ನೆರವಿನೊಂದಿಗೆ ತೋಟವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ .

ರಮೇಶ್ ರಾವ್ ,ದಿನಕರ ರಾವ್ ಎನ್ನುವವರಿಗೆ ಸೇರಿದ ತೋಟ ಇದು ಎನ್ನಲಾಗಿದೆ .ತೋಟ ಕಾರ್ಮಿಕರು ಹಾಗೂ ಸಾಕಷ್ಟು ಹಣ ಪಾವತಿ ಮಾಡಿಲ್ಲ ಎಂಬ ಆರೋಪವೂ ಇದೆ .

ತೋಟಕ್ಕೆ ಬೀಗ ಮುದ್ರೆ ಹಾಕಿದ್ದು ಕಾರ್ಮಿಕರನ್ನು  ಖಾಲಿ ಮಾಡುವಂತೆ ತಿಳಿಸಲಾಗಿದೆ. ಈ ಪ್ರಕರಣ ಬೆಳೆಗಾರರಲ್ಲಿ ಆತಂಕವನ್ನು ಉಂಟು ಮಾಡಿದೆ . 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...