ಚಿಕ್ಕಮಗಳೂರು : ಕೊಟ್ಟ ಸಾಲ ಹಿಂದಿರುಗಿಸದ ಹಿನ್ನೆಲೆಯಲ್ಲಿ ಸುಮಾರು ೨೦೦ ಎಕರೆ ಕಾಫಿ ತೋಟವನ್ನು ಬ್ಯಾಂಕ್ ವಶಪಡಿಸಿಕೊಂಡ ಘಟನೆ ನಡೆದಿದೆ .
ಹಿರೇಕೊಳಲೆ ಸಮೀಪದ ವಾಟೇಕಾನ್ ತೋಟದ ಮಾಲಿಕರು 2005 ರಲ್ಲಿ ಯೂನಿಯನ್ ಬ್ಯಾಂಕಿನಿಂದ ೨೨ ಕೋಟಿ ರೂ ಸಾಲವನ್ನು ಪಡೆದಿದ್ದರು ಎನ್ನಲಾಗಿದೆ .
ಸಾಲ ಮರುಪಾವತಿಸ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯ ಬ್ಯಾಂಕಿನ ಪರ ತೀರ್ಪು ನೀಡಿದ್ದು , ಪೊಲೀಸ್ ನೆರವಿನೊಂದಿಗೆ ತೋಟವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ .
ರಮೇಶ್ ರಾವ್ ,ದಿನಕರ ರಾವ್ ಎನ್ನುವವರಿಗೆ ಸೇರಿದ ತೋಟ ಇದು ಎನ್ನಲಾಗಿದೆ .ತೋಟ ಕಾರ್ಮಿಕರು ಹಾಗೂ ಸಾಕಷ್ಟು ಹಣ ಪಾವತಿ ಮಾಡಿಲ್ಲ ಎಂಬ ಆರೋಪವೂ ಇದೆ .
ತೋಟಕ್ಕೆ ಬೀಗ ಮುದ್ರೆ ಹಾಕಿದ್ದು ಕಾರ್ಮಿಕರನ್ನು ಖಾಲಿ ಮಾಡುವಂತೆ ತಿಳಿಸಲಾಗಿದೆ. ಈ ಪ್ರಕರಣ ಬೆಳೆಗಾರರಲ್ಲಿ ಆತಂಕವನ್ನು ಉಂಟು ಮಾಡಿದೆ .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ