ಚಿಕ್ಕಮಗಳೂರು :ಅಂತರ ರಾಜ್ಯ ಮಹಿಳಾ ಏಕದಿನ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ನಗರದ ಶಿಶಿರ ಗೌಡ ಆಯ್ಕೆಯಾಗಿದ್ದಾರೆ .
ಎಡಗೈ ಬ್ಯಾಟಿಂಗ್ ಹಾಗೂ ಬಲಗೈ ವೇಗದ ಬೌಲರ್ ವಿಭಾಗದಲ್ಲಿ ಖ್ಯಾತಿ ಪಡೆದಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ .
೨೦೧೫ ರಿಂದ ವಿವಿಧ ವಿಭಾಗಗಳಲ್ಲಿ ಪ್ರತಿನಿಧಿಸಿರುವ ಶಿಶಿರಗೌಡ ಆರ್. ಪಿ .ಕ್ರಿಕೆಟ್ ಅಕಾಡಮಿಯ ರಾಮದಾಸ್ ಪ್ರಭು ಅವರಲ್ಲಿ ತರಬೇತಿ ಪಡೆದಿದ್ದಾರೆ .ಡಾಕ್ಟರ್ ಅಶ್ವತ್ ಬಾಬು ತ್ರಿವೇಣಿ ದಂಪತಿಗಳ ಪುತ್ರಿ ಈಕೆ . ಈಕೆಯ ಆಯ್ಕೆ ಕಾಫಿ ನಾಡಿನ ಕ್ರಿಕೆಟ್ ವಲಯದಲ್ಲಿ ಹರ್ಷವನ್ನು ಉಂಟುಮಾಡಿದೆ .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ