ಶುಕ್ರವಾರ, ನವೆಂಬರ್ 18, 2022

ಜನ ಬಳಕೆ ದೇಶದಲ್ಲಿ ಮೀಸಲು ಅರಣ್ಯ; ಸಾರ್ವಜನಿಕರ ವಿರೋಧ ರಸ್ತೆ ತಡೆ

 



ಚಿಕ್ಕಮಗಳೂರು: ಜನ ಬಳಕೆ ಮಾರ್ಗದಲ್ಲಿ ಮೀಸಲು ಅರಣ್ಯ ಜಾರಿ  ಪ್ರತಿಭಟಿಸಿ ರಾಜ್ಯ ಹೆದ್ದಾರಿ ತಡೆದು ನೂರಾರು ಜನ ಪ್ರತಿಭಟನೆ ಮಾಡಿದ್ದಾರೆ.

ಕೊಪ್ಪ ತಾಲೂಕು ಮೇಗುಂದ ಹೋಬಳಿ ಹೆಗ್ಗಾರು ಗ್ರಾಮದ ಬ್ಲಾಕ್ -1ರಿಂದ  4ರ ವರೆಗೆ  ಒಟ್ಟು 1175.02 ಎಕರೆ ಮತ್ತು ಹರಳಾನೆ ಗ್ರಾಮದ ಗೋಮಾಳ ಮತ್ತು ಸೊಪ್ಪಿನ ಬೆಟ್ಟದ ಪ್ರದೇಶವನ್ನು ಮೀಸಲು ಅರಣ್ಯವಾಗಿ ಘೋಷಿಸುವ ಪ್ರಸ್ತಾವನೆಯನ್ನು  ಸಲ್ಲಿಸಿದ್ದಾರೆ ಎಂದು ಜನ ಆರೋಪಿಸಿದರು.

ಮಲೆನಾಡಿನ ಭಾಗದ ಜನರು ಈಗಾಗಲೇ ಕೃಷಿಗೆ ಬಾಧಿಸಿರುವ ರೋಗಗಳಿಂದ ಹೈರಾಣಗಿದ್ದು ಈ ಅಧಿಸೂಚನೆಯು ಮೊದಲೇ ಆತಂಕದಲ್ಲಿದ್ದ ಜನರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಲೆನಾಡಿನ ಜನರು ನಾವು ಉಳಿಸಿ ಬೆಳೆಸಿದ ಭೂಮಿ, ಕೃಷಿ, ಪರಿಸರಕ್ಕೆ ಧಕ್ಕೆಯುಂಟಾದಾಗ ಎಲ್ಲವನ್ನು ಬದಿಗಿಟ್ಟು ಒಂದಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದರು

ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಗಡಿಕಲ್ಲು  ಸಮೀಪ ನಾಗರಿಕ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ



ರಸ್ತೆ ತಡೆ ಹಿನ್ನೆಲೆ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್  ಆಗಿ ವಾಹನ ಸಂಚಾರ ಸ್ಥಗಿತ ಗೊಂಡಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...