ಚಿಕ್ಕಮಗಳೂರು :ಕಡೂರು ವಲಯದ ಹಾದಿ
ಗೆರೆ ಗ್ರಾಮದ ಬಳಿ ಅಂದಾಜು 1 ಒಂದು ವರ್ಷದ ಚಿರತೆ ಮರಿ ಸಾವನ್ನಪ್ಪಿದೆ. ಯಾವುದೋ ಅಪರಿಚಿತ ವಾಹನಕ್ಕೆ ಸಿಲುಕಿ ಸತ್ತಿರುವ ಸಾಧ್ಯತೆ ಇದೆ.
ಭದ್ರ ವನ್ಯಜೀವಿ ವಿಭಾಗದ ಪಶವೈದ್ಯಾಧಿಕಾರಿ ಯಶಸ್ ಮತ್ತು ಅಸಂದಿ ಗ್ರಾಮ ಪಶವೈದ್ಯಾಧಿಕಾರಿ ಭರತ್ ನೇತೃತವದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲ , ಕಡೂರು ವಲಯ ಅರಣ್ಯಾಧಿಕಾರಿ ತನುಜ್ ಕುಮಾರ್ , ಗೌರವ ವನ್ಯಜೀವಿ ಪರಿಪಾಲಕ ಜಿ. ವೀರೇಶ್ ಸಿಬ್ಬಂದಿಗಳು ಇದ್ದರು .ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ