ಶನಿವಾರ, ಏಪ್ರಿಲ್ 3, 2021

ಚಾರ್ಮಾಡಿಯ' ದೂದ್ ಸಾಗರ್ '



 ಚಿಕ್ಕಮಗಳೂರು : ಸದಾ ಹಸಿರನ್ನು ಹೊದ್ದು ನಿಂತ ಮಲೆನಾಡನ್ನು ನೋಡುವುದೇ ಒಂದು ಸೊಬಗು ಮಳೆಗಾಲದ ನಂತರ ಅದರ ವೈಭವವೇ ಬೇರೆ . 

ಬೇಸಗೆಯಲ್ಲಿ ಕಾನನದಲ್ಲಿ ಅಡಗಿ ಕುಳಿತು ಮಳೆ ಬಿದ್ದೊಡನೆ ಧುತ್ತೆಂದು  ಹೊರಜಗತ್ತಿಗೆ ಕಾಣಿಸಿಕೊಳ್ಳುವ ಜಲ ಧಾರೆಗಳ ನೋಟ ಒಂದು ಕಾವ್ಯ .

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಲಧಾರೆಗಳಿವೆ ಕೊರತೆಯಿಲ್ಲ . ಚಿಕ್ಕಮಗಳೂರು -ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಜಲಧಾರೆಗಳ ಗಣಿ .

ಜುಲೈನಲ್ಲಿ ಧೋ ಎಂದು ಸುರಿಯುವ ಮಳೆ  ಇಲ್ಲಿನ ಜಲಪಾತಗಳಿಗೆ ಜೀವ ತುಂಬುತ್ತದೆ . ಹೆಜ್ಜೆಗೊಂದರಂತೆ ಸಿಗುವ ಜಲಕನ್ಯೆಯರು ಕಣ್ಮನ ತಣಿಸುತ್ತಾರೆ . ಅಕ್ಟೋಬರ್ ವರೆಗೆ ಈ ಸಂಭ್ರಮ ಇರುತ್ತದೆ .ಮತ್ತೆ ಮಳೆಗಾಲಕ್ಕೆ ಕಾಯಬೇಕು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...