ಚಿಕ್ಕಮಗಳೂರು : ಸದಾ ಹಸಿರನ್ನು ಹೊದ್ದು ನಿಂತ ಮಲೆನಾಡನ್ನು ನೋಡುವುದೇ ಒಂದು ಸೊಬಗು ಮಳೆಗಾಲದ ನಂತರ ಅದರ ವೈಭವವೇ ಬೇರೆ .
ಬೇಸಗೆಯಲ್ಲಿ ಕಾನನದಲ್ಲಿ ಅಡಗಿ ಕುಳಿತು ಮಳೆ ಬಿದ್ದೊಡನೆ ಧುತ್ತೆಂದು ಹೊರಜಗತ್ತಿಗೆ ಕಾಣಿಸಿಕೊಳ್ಳುವ ಜಲ ಧಾರೆಗಳ ನೋಟ ಒಂದು ಕಾವ್ಯ .
ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಲಧಾರೆಗಳಿವೆ ಕೊರತೆಯಿಲ್ಲ . ಚಿಕ್ಕಮಗಳೂರು -ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಜಲಧಾರೆಗಳ ಗಣಿ .
ಜುಲೈನಲ್ಲಿ ಧೋ ಎಂದು ಸುರಿಯುವ ಮಳೆ ಇಲ್ಲಿನ ಜಲಪಾತಗಳಿಗೆ ಜೀವ ತುಂಬುತ್ತದೆ . ಹೆಜ್ಜೆಗೊಂದರಂತೆ ಸಿಗುವ ಜಲಕನ್ಯೆಯರು ಕಣ್ಮನ ತಣಿಸುತ್ತಾರೆ . ಅಕ್ಟೋಬರ್ ವರೆಗೆ ಈ ಸಂಭ್ರಮ ಇರುತ್ತದೆ .ಮತ್ತೆ ಮಳೆಗಾಲಕ್ಕೆ ಕಾಯಬೇಕು .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ