ಶುಕ್ರವಾರ, ಫೆಬ್ರವರಿ 19, 2021

ರಾಜ್ಯದ ಹಲವೆಡೆ ಆಲಿಕಲ್ಲು ಮಳೆ: ರೈತ ಕಂಗಾಲು


 ಚಿಕ್ಕಮಗಳೂರು :ರಾಜ್ಯದ ಅನೇಕ ಕಡೆಗಳಲ್ಲಿ ಇಂದು ಅಕಾಲಿಕ ಆಲಿಕಲ್ಲು ಮಳೆ ಬಿದ್ದಿದೆ .

ಮಡಿಕೇರಿ ಹಾಗೂ ಹಾಸನ ಜಿಲ್ಲೆಯ ಅನೇಕ ಕಡೆಗಳಲ್ಲಿ ಭಾರೀ  ಪ್ರಮಾಣದಲ್ಲಿ ಆಲಿ ಕಲ್ಲುಬಿದ್ದಿದ್ದು ಕೃಷಿಕರು ಕಂಗಲಾಗಿದ್ದಾರೆ .

ರಾಶಿ ರಾಶಿ ಆಲಿಕಲ್ಲುಗಳು ಬಿದ್ದಿದ್ದು ನೆಲಕ್ಕೆ ಹಿಮ ಹೊದಿಸಿದ ಅನುಭವ ಆಗಿದೆ .ಇದನ್ನು ನೋಡಿ ಜನ ಪುಳಕಿತಗೊಂಡಿದ್ದರೆ ಕೃಷಿಕರಿಗೆ ಮುಂದೇನು ಎಂಬ ಆತಂಕ ಎದುರಾಗಿದೆ .

ರಾಶಿ ರಾಶಿ ಬಿದ್ದ ಆಲಿಕಲ್ಲುಗಳನ್ನು ಕೆಲವರು ಪುಟ್ಟಿಗಳಲ್ಲಿ ಸಂಗ್ರಹಿಸಿದರೆ , ಕೆಲವರು ಹಾರೆ ಮೂಲಕ ಎಳೆದು ಹಾಕಿದ್ದಾರೆ. 

ಇನ್ನೂ ಹಲವೆಡೆ ರಸ್ತೆಗಳಲ್ಲಿ ಮಲ್ಲಿಗೆ ಹೂ ಹಾಸಿದಂತೆ ಆಲಿಕಲ್ಲು ಬಿದ್ದಿರುವುದು ಕಂಡುಬಂದಿದೆ .ಹೂಕುಂಡಗಳಲ್ಲಿ ಉಪ್ಪನ್ನು ರಾಶಿ ಹಾಕಿದಂತೆ ಕಾಣಿಸುತ್ತಿದೆ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...