ಚಿಕ್ಕಮಗಳೂರು :ರಾಜ್ಯದ ಅನೇಕ ಕಡೆಗಳಲ್ಲಿ ಇಂದು ಅಕಾಲಿಕ ಆಲಿಕಲ್ಲು ಮಳೆ ಬಿದ್ದಿದೆ .
ಮಡಿಕೇರಿ ಹಾಗೂ ಹಾಸನ ಜಿಲ್ಲೆಯ ಅನೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಆಲಿ ಕಲ್ಲುಬಿದ್ದಿದ್ದು ಕೃಷಿಕರು ಕಂಗಲಾಗಿದ್ದಾರೆ .
ರಾಶಿ ರಾಶಿ ಆಲಿಕಲ್ಲುಗಳು ಬಿದ್ದಿದ್ದು ನೆಲಕ್ಕೆ ಹಿಮ ಹೊದಿಸಿದ ಅನುಭವ ಆಗಿದೆ .ಇದನ್ನು ನೋಡಿ ಜನ ಪುಳಕಿತಗೊಂಡಿದ್ದರೆ ಕೃಷಿಕರಿಗೆ ಮುಂದೇನು ಎಂಬ ಆತಂಕ ಎದುರಾಗಿದೆ .
ರಾಶಿ ರಾಶಿ ಬಿದ್ದ ಆಲಿಕಲ್ಲುಗಳನ್ನು ಕೆಲವರು ಪುಟ್ಟಿಗಳಲ್ಲಿ ಸಂಗ್ರಹಿಸಿದರೆ , ಕೆಲವರು ಹಾರೆ ಮೂಲಕ ಎಳೆದು ಹಾಕಿದ್ದಾರೆ.
ಇನ್ನೂ ಹಲವೆಡೆ ರಸ್ತೆಗಳಲ್ಲಿ ಮಲ್ಲಿಗೆ ಹೂ ಹಾಸಿದಂತೆ ಆಲಿಕಲ್ಲು ಬಿದ್ದಿರುವುದು ಕಂಡುಬಂದಿದೆ .ಹೂಕುಂಡಗಳಲ್ಲಿ ಉಪ್ಪನ್ನು ರಾಶಿ ಹಾಕಿದಂತೆ ಕಾಣಿಸುತ್ತಿದೆ .


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ