ಚಿಕ್ಕಮಗಳೂರು ಕಡೂರು ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ರೈತರಿಗೆ ವಂಚಿಸಿದ್ದಾರೆ ಎಂದು ಹಿರೇಗೌಜ ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆ ಕಾಮಗಾರಿ ವೇಳೆ ಹಿರೇಗೌಜ ಗ್ರಾಮದ ಕೆಲವು ರೈತರ ಜಮೀನಿನಿಂದ ಉಚಿತವಾಗಿ ಗ್ರಾವೆಲ್ ಮಣ್ಣು ತೆಗೆದಿದ್ದು ಬದಲಿಗೆ ಗೋಡು ಮಣ್ಣು ಹಾಕಿಸಿಕೊಡುವುದಾಗಿ ನೂರಾರು ಲೋಡ್ ಮಣ್ಣು ತೆಗೆದಿದ್ದಾರೆ ಎಂದು ಹೇಳಿದ್ದಾರೆ
ಇದುವರೆಗೂ ರೈತರ ಜಮೀನಿಗೆ ಬದಲಿ ಮಣ್ಣು ಹಾಕಿಸಿಲ್ಲ. ಇದರಿಂದಾಗಿ ರೈತರು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರನಿಗೆ ಕರೆ ಮಾಡಿದರು ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ದೂರಿದ್ದಾರೆ .
ಸಣ್ಣ ನಿಲ್ದಾಣ :ಹಿರೇಗೌಜ ಗ್ರಾಮದ ಮುಖ್ಯ ರಸ್ತೆಯಲ್ಲಿ 50 ಜನ ನಿಲ್ಲುವಂತಹ ನಿಲ್ದಾಣ ತೆರವು ಮಾಡಿ ಬದಲಿಗೆ ಇದೀಗ ಶೆಡ್ ಮಾದರಿಯಲ್ಲಿ ಸಣ್ಣದಾದ ನಿಲ್ದಾಣ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ 1ವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಗಡುವು ನೀಡಿದ್ದಾರೆ .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ