ಚಿಕ್ಕಮಗಳೂರು:ಜಿಲ್ಲಾ ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗಿರಿ ಸ್ವಚ್ಛತಾ ಆಂದೋಲನದ ನಡೆಯಿತು .
ಸೂರ್ಯ ಮೂಡುವ ಮೊದಲೇ ಆಂದೋಲನಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಹಾಕೆ ಚಾಲನೆ ನೀಡಿದರು .
ಪ್ರವಾಸೋದ್ಯಮ ಇಲಾಖೆ, ಸೇವಾದಳ ,ಬ್ರಹ್ಮಕುಮಾರಿ ಸಂಸ್ಥೆ ,ಗೃಹರಕ್ಷಕದಳ ,ಪಶುಪಾಲನಾ ಇಲಾಖೆ ,ಎನ್ ಸಿಸಿ ಸೇರಿದಂತೆ ವಿವಿಧ ಸಂಘಟನೆಗಳ ಅಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು .
ಕೈಮರದಿಂದ ಮುಳ್ಳಯ್ಯನಗಿರಿ ವರೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಬೆಳಗಿನ ಚಳಿಯನ್ನು ಲೆಕ್ಕಿಸದೆ ನೂರಾರು ಜನ ಪಾಲ್ಗೊಂಡಿದ್ದರು .
ರಸ್ತೆಯ ಇಕ್ಕೆಲ ಸೇರಿದಂತೆ ಬೆಟ್ಟದ ತಪ್ಪಲಿನಲ್ಲಿ ಬಿದ್ದಿದ್ದ ರಾಶಿ ರಾಶಿ ಕಸವನ್ನು ಸಂಗ್ರಹಿಸಲಾಯಿತು. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಪರಿಸರವನ್ನು ಸ್ವಚ್ಛ ವಾಗಿ ಇಡುವಂತೆ ಇದೇ ಸಂದರ್ಭದಲ್ಲಿ ಅರಿವು ಮೂಡಿಸಲಾಯಿತು .
## ಚಿಕ್ಕಮಗಳೂರು ಜಿಲ್ಲಾಡಳಿತ ##ಪ್ರವಾಸೋದ್ಯಮ ಇಲಾಖೆ ##ಪೊಲೀಸ್ ಇಲಾಖೆ ##chikmagalur tourism .
## Karnataka tourism
ಚಿತ್ರಕೃಪೆ :ತಾರನಾಥ್ ಕಾಮತ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ