ಭಾನುವಾರ, ಫೆಬ್ರವರಿ 21, 2021

ಗಿರಿ ಸ್ವಚ್ಚತೆ :ರಾಶಿ ರಾಶಿ ಕಸ ಸಂಗ್ರಹ


 ಚಿಕ್ಕಮಗಳೂರು:ಜಿಲ್ಲಾ ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ  ಗಿರಿ ಸ್ವಚ್ಛತಾ ಆಂದೋಲನದ ನಡೆಯಿತು .

ಸೂರ್ಯ ಮೂಡುವ ಮೊದಲೇ ಆಂದೋಲನಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಹಾಕೆ ಚಾಲನೆ ನೀಡಿದರು  .

ಪ್ರವಾಸೋದ್ಯಮ ಇಲಾಖೆ, ಸೇವಾದಳ ,ಬ್ರಹ್ಮಕುಮಾರಿ ಸಂಸ್ಥೆ ,ಗೃಹರಕ್ಷಕದಳ ,ಪಶುಪಾಲನಾ ಇಲಾಖೆ ,ಎನ್ ಸಿಸಿ ಸೇರಿದಂತೆ ವಿವಿಧ ಸಂಘಟನೆಗಳ ಅಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು .

ಕೈಮರದಿಂದ ಮುಳ್ಳಯ್ಯನಗಿರಿ ವರೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಬೆಳಗಿನ ಚಳಿಯನ್ನು ಲೆಕ್ಕಿಸದೆ ನೂರಾರು ಜನ ಪಾಲ್ಗೊಂಡಿದ್ದರು . 

ರಸ್ತೆಯ ಇಕ್ಕೆಲ ಸೇರಿದಂತೆ ಬೆಟ್ಟದ ತಪ್ಪಲಿನಲ್ಲಿ ಬಿದ್ದಿದ್ದ ರಾಶಿ ರಾಶಿ ಕಸವನ್ನು ಸಂಗ್ರಹಿಸಲಾಯಿತು. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಪರಿಸರವನ್ನು ಸ್ವಚ್ಛ ವಾಗಿ ಇಡುವಂತೆ ಇದೇ ಸಂದರ್ಭದಲ್ಲಿ  ಅರಿವು ಮೂಡಿಸಲಾಯಿತು .     

## ಚಿಕ್ಕಮಗಳೂರು ಜಿಲ್ಲಾಡಳಿತ ##ಪ್ರವಾಸೋದ್ಯಮ ಇಲಾಖೆ ##ಪೊಲೀಸ್ ಇಲಾಖೆ ##chikmagalur tourism .

## Karnataka tourism 

ಚಿತ್ರಕೃಪೆ :ತಾರನಾಥ್ ಕಾಮತ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...