ಸೋಮವಾರ, ಫೆಬ್ರವರಿ 15, 2021

ಕೆರೆ ಉಳಿಸಲು ವಿಭಿನ್ನ ಪ್ರಯತ್ನ



 ಚಿಕ್ಕಮಗಳೂರು :ತಾಲ್ಲೂಕಿನ  ಲಕ್ಷೀಪುರ ಕೆರೆಯ ಬಳಿ ನಮ್ಮೂರ ಕೆರೆ ಹಬ್ಬ ಹಮ್ಮಿಕೊಂಡು ಸ್ಥಳಿಯರಿಗೆ ಮನರಂಜನೆ ಜೊತೆಗೆ ಸಂಜೆಯ ವೇಳೆ ಸರ್ಕಾರಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಕಂದಾಯ ಇಲಾಖೆಯ ಉಪ ವಿಭಾಗಧಿಕಾರಿ  ಡಾ|| ಹೆಚ್.ಎಲ್ ನಾಗರಾಜ್ ಹಾಗೂ ತಾಲೂಕು ತಹಶಿಲ್ದಾರ್ ಡಾ|| ಕೆ.ಜೆ ಕಾಂತರಾಜ್  ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ  ರಾತ್ರಿ ಹತ್ತು ಗಂಟೆಯವರೆಗೆ  ಕಾರ್ಯನಿರ್ವಹಿಸಿದರು .

ಕೆರೆ ಅಂಗಳದಲ್ಲಿ ಸಾಂಸ್ಕೃತಿಕ ಕಲರವ ಸಮೀಪದ ಗ್ರಾಮಸ್ಥರನ್ನು ಸೂಜಿ ಗಲ್ಲಿನಂತೆ ಸೆಳೆಯುವಂತಿತ್ತು. ವಿಷನ್ ಚಿಕ್ಕಮಗಳೂರು ಮತ್ತು ಲಕ್ಷಿಪುರ ಕೆರೆ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಕೆರೆಯ ಪಕ್ಕದಲ್ಲೇ ವೇದಿಕೆ ನಿರ್ಮಿಸಿ ,  ಫೈರ್ ಕ್ಯಾಂಪ್  ಆಯೋಜಿಲಾಗಿತ್ತು.  

ಸೂಫಿ ಸಂತ ನಾದ ಮಣಿನಾಲ್ಕೂರು ನಡೆಸಿಕೊಟ್ಟ ತತ್ವ ಪದಗಳು ,  ಸಾಣೆ ಹಳ್ಳಿ ರಂಗ ಶಾಲೆಯ  ರಂಗ ಕರ್ಮಿ ಆರ್. ಜಗದೀಶ್ ಜಾನಪದ ಗಾಯನ ನಡೆಸಿಕೊಟ್ಟರು. ಎ.ಎನ್ ಮಹೇಶ್, ಬೆಳವಾಡಿ ರವೀಂದ್ರ, ರೇಖಾ ಹುಲಿಯಪ್ಪಗೌಡ,ರವಿ ಪ್ರದೀಪ್,ಪ್ರಕಾಶ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...