ಚಿಕ್ಕಮಗಳೂರು :ಮಾಫಿ ಪಾಸ್ ಹೆಸರಿನಲ್ಲಿ ಗಡಿರೇಖೆಯ ಸುಮಾರು ಮರಗಳನ್ನು ಕಡಿದ ಆರೋಪದ ಮೇಲೆ ೭ ಜನ ಅರಣ್ಯ ನೌಕರರನ್ನು ಅಮಾನತು ಪಡಿಸಲಾಗಿದೆ .
ಮೂಡಿಗೆರೆ ತಾಲ್ಲೂಕಿನ ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮಾಫಿ ಪಾಸ್ ಹೆಸರಿನಲ್ಲಿ ೩೫೦ ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿತ್ತು ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು .
ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೂ ಅಧಿಕಾರಿಗಳ ವಿರುದ್ಧ ದೂರನ್ನು ನೀಡಲಾಗಿತ್ತು . ಪ್ರಕರಣದ ಪ್ರಾಥಮಿಕ ವರದಿ ಹಾಗೂ ನಿಷ್ಪಕ್ಷಪಾತ ತನಿಖೆ ಉದ್ದೇಶದಿಂದ ೭ ಜನರನ್ನು ಅಮಾನತು ಪಡಿಸಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ .
ಚಿಕ್ಕಮಗಳೂರು ವಿಭಾಗದ ಪ್ರಭಾರಿ ಸರ್ವೆ ರೇಂಜರ್ ದಿನೇಶ್ ,ಫಾರೆಸ್ಟರ್ ಗಳಾದ ಮಧುಸೂದನ್, ಶಿವರಾಜನಾಯಕ್ ಮೂಡಿಗೆರೆ ಉಪ ವಿಭಾಗದ ಅರಣ್ಯ ರಕ್ಷಕ ಸುರೇಶ್ ,ಕೊಪ್ಪ ವಿಭಾಗದ ಫಾರೆಸ್ಟರ್ ಯಾಸಿನ್ ಬಾಷಾ ,ಅರಣ್ಯ ರಕ್ಷಕ ನವೀನ್ ಕುಮಾರ್ ,ಸರ್ವೆ ಫಾರೆಸ್ಟರ್ ಅರುಣ್ ಕುಮಾರ್ ಅಮಾನತುಗೊಂಡಿದ್ದು , ಪ್ರಕರಣದ ಕೂಲಂಕಷ ತನಿಖೆಗೆ ಆದೇಶಿಸಲಾಗಿದೆ .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ