ಗುರುವಾರ, ಫೆಬ್ರವರಿ 11, 2021

ಗಡಿರೇಖೆಯ ಮರಗಳಿಗೆ ಕತ್ತರಿ :7ಜನ ಅಮಾನತು


 ಚಿಕ್ಕಮಗಳೂರು :ಮಾಫಿ ಪಾಸ್ ಹೆಸರಿನಲ್ಲಿ  ಗಡಿರೇಖೆಯ ಸುಮಾರು ಮರಗಳನ್ನು ಕಡಿದ ಆರೋಪದ ಮೇಲೆ ೭ ಜನ ಅರಣ್ಯ ನೌಕರರನ್ನು ಅಮಾನತು ಪಡಿಸಲಾಗಿದೆ .

ಮೂಡಿಗೆರೆ ತಾಲ್ಲೂಕಿನ ಬಾಳೂರು  ಮೀಸಲು ಅರಣ್ಯ ಪ್ರದೇಶದಲ್ಲಿ  ಮಾಫಿ ಪಾಸ್ ಹೆಸರಿನಲ್ಲಿ ೩೫೦ ಕ್ಕೂ ಹೆಚ್ಚು ಮರಗಳನ್ನು  ಕಡಿಯಲಾಗಿತ್ತು  ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು .

ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೂ ಅಧಿಕಾರಿಗಳ ವಿರುದ್ಧ ದೂರನ್ನು ನೀಡಲಾಗಿತ್ತು . ಪ್ರಕರಣದ ಪ್ರಾಥಮಿಕ ವರದಿ ಹಾಗೂ ನಿಷ್ಪಕ್ಷಪಾತ ತನಿಖೆ ಉದ್ದೇಶದಿಂದ ೭ ಜನರನ್ನು ಅಮಾನತು ಪಡಿಸಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ .

ಚಿಕ್ಕಮಗಳೂರು ವಿಭಾಗದ ಪ್ರಭಾರಿ ಸರ್ವೆ ರೇಂಜರ್ ದಿನೇಶ್ ,ಫಾರೆಸ್ಟರ್ ಗಳಾದ ಮಧುಸೂದನ್, ಶಿವರಾಜನಾಯಕ್ ಮೂಡಿಗೆರೆ ಉಪ ವಿಭಾಗದ ಅರಣ್ಯ ರಕ್ಷಕ ಸುರೇಶ್ ,ಕೊಪ್ಪ ವಿಭಾಗದ ಫಾರೆಸ್ಟರ್ ಯಾಸಿನ್ ಬಾಷಾ ,ಅರಣ್ಯ ರಕ್ಷಕ ನವೀನ್ ಕುಮಾರ್ ,ಸರ್ವೆ ಫಾರೆಸ್ಟರ್  ಅರುಣ್ ಕುಮಾರ್  ಅಮಾನತುಗೊಂಡಿದ್ದು , ಪ್ರಕರಣದ ಕೂಲಂಕಷ ತನಿಖೆಗೆ ಆದೇಶಿಸಲಾಗಿದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...